ಸ್ಪರ್ಧೆಗಾಗಿ
ದತ್ತ ಪದ .. ....ಚಿಗುರು
ವನಸಿರಿ
ಮಾಮರದಲ್ಲಿ ತುಂಬಿದ ಚಿಗುರು
ಬದುಕಲಿ ಭರವಸೆ ತುಂಬಿಸಿದೆ
ಮರದೆಡೆಯಲ್ಲಿ ಹಾಡುವ ಕೋಗಿಲೆ
ಮನದಲಿ ಹೊಸ ಬಾವವ ಮೂಡಿಸಿದೆ
ಎಲ್ಲೆಡೆ ಹರಡಿದ ಮಣ್ಣಿನ ಗಂಧವು
ವರುಣನಾಗಮನವ ಸಾರುತಿದೆ
ಪಡುವಣದಲಿ ಮುಳುಗುವ ರವಿ
ಕಲಸಿದ ಬಾನಲಿ ಬಣ್ಣದ ಸವಿ
ಬಾನಲಿ ಕಲಸಿದ ಚೆಲುವಿನ ಬಣ್ಣ
ರಸಿಕರ ಮನವನು ಸೆಳೆಯುತಿದೆ
ದೂರದ ಗಗನದಿ ಹಾರುವ ಹಕ್ಕಿಯು
ಚುಕ್ಕಿಯ ತೆರದಲಿ ತೋರುತಿದೆ
ಎಲ್ಲೆಡೆ ಹಬ್ಬಿದ ಹಸಿರಿನ ಸಿರಿಯಲಿ
ಮೈಮನವೆಲ್ಲಾ ಅರಳುತಿದೆ
ಕುಣಿಯುವ ನವಿಲಿನ ನರ್ತನ ಕಂಡು
ಮನದಲಿ ಕವಿತೆಯ ಒರತೆಯ ಚಿಮ್ಮುತ್ತಿದೆ
ಪಂಕಜಾ.ಕೆ. ಮುಡಿಪು
Comments
Post a Comment