ವೀರಯೋಧ
ಸರಿತಾ ಹಾಗೂ ಸಾಕೇತ್ ಕಾಲೇಜಿನ ದಿನಗಳಿಂದಲೂ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಟ್ಟಿದ್ದರು.ಇಬ್ವರೆ ಪರಿಚಯ ಸ್ನೇಹ ಕಾಲೇಜಿನ ಅಂತಿಮ ದಿನಗಳ ಹಂತಕ್ಕೆ ಬಂದಾಗ ಅದು ಬಿಟ್ಟಿರಲಾರದ ಬಂಧವಾಗಿ ಪರಿಣಮಿಸಿತ್ತು.
ಕಾಲೇಜು ಮುಗಿದ ತಕ್ಷಣ ಸಾಕೇತ್ ತಾನು ಮೊದಲೇ ನಿರ್ಣಯಿಸಿದಂತೆ ಸೇನೆಗೆ ಸೇರಿ ಯೋಧನಾಗುವ ತನ್ನ ಕನಸನ್ನು ನನಸು ಮಾಡಲು ಹೊರಟು ಹೋಗಿದ್ದ. ತಂದೆ ತಾಯಿ ಯಿಲ್ಲದ ಸರಿತಾ ಚಿಕ್ಕಪ್ಪನ ಆಶ್ರಯದಲ್ಲಿ ಕಲಿತು ಉದ್ಯೋಗ ಹಿಡಿದರೂ ಮದುವೆಯಾಗಲು ಒಪ್ಪದೆ ಸಾಕೇತನ ನೆನಪಿನಲ್ಲೇ ದಿನ ಕಳೆಯುತ್ತಿದ್ದಾಗ ಸಾಕೇತ್ ಬಂದು ಅವಳನ್ನು ಅವಳ ಚಿಕ್ಕಪ್ಪನ ಒಪ್ಪಿಗೆ ಪಡೆದು ಮದುವೆಯಾಗುತ್ತಾನೆ .ಮದುವೆಯಾದ ಕೆಲವೇ ದಿವಸಗಳಲ್ಲಿ ಕರ್ತವ್ಯಕ್ಕೆ ಹಿಂತಿರುಗಬೇಕಾಗಿದ್ದರಿಂದ ಆತ ಬಿಡಲಾರದೆ ಸರಿತಾಳನ್ನು ಬಿಟ್ಟು ಹೋಗಿದ್ದ .ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಶತ್ರುಗಳ ಕೈಯಲ್ಲಿ ಗುಂಡಿನೇಟು ತಿಂದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಾಕೇತ ನಿಗೆ ಸರಿತಾ ಆತನ ನೆನಪಿನ ಕಾಣಿಕೆಯು ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದನ್ನು ತಿಳಿಸಿದಾಗ ,ಸಾಕೇತ್ ಅಚ್ಚರಿಯೆನ್ನುವಂತೆ ಚೇತರಿಸಿಕೊಂಡ .ಗುಂಡಿನೇಟಿನಲ್ಲಿ ಕಾಲಿಗೆ ಊನವಾದ್ದರಿಂದ ಸಾಕೇತನನ್ನು ಸಕಲ ಗೌರವಗಳೊಂದಿಗೆ ಸೇನೆಯಿಂದ ನಿವೃತ್ತಿಯನ್ನು ಕೊಟ್ಟು ಆತನ ಮುಂದಿನ ಜೀವನಕ್ಕಾಗಿ ಕೆಲಸವನ್ನೂ ಸರಕಾರ ಕೊಡಮಾಡಿದ್ದರಿಂದ ಸರಿತಾ ಹಾಗೂ ಸಾಕೇತ್ ತಮ್ಮಿಬ್ಬರ ಪ್ರೀತಿಯ ಸಂಕೇತವಾದ ಮುದ್ದು ಮಗುವಿನ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದರು.
ಪಂಕಜಾ ಕೆ ಮುಡಿಪು
Comments
Post a Comment