Skip to main content

ಹನಿ ಹನಿ ಇಬ್ಬನಿ ಸಮಾಧಾನಕರ ವರ್ಷಧಾರೆ ಭಾವಗೀತೆ

[08/08, 2:52 PM] pankajarambhat: ಹನಿ ಹನಿ ಇಬ್ಬನಿ ಸ್ಪರ್ಧೆಗಾಗಿ
 
ವರ್ಷಧಾರೆ

ಬಾನಿನಲಿ ಕಟ್ಟಿರುವ
ಕರಿಮೋಡಗಳ ದಂಡು
ಹೂಮಳೆಯ ಸುರಿಸುತ್ತ
ತಂಪೆರೆಯಿತು

ಒಡಲಲ್ಲಿ ಹುದುಗಿದ್ದ
ಬೀಜಗಳು ತಲೆಯೆತ್ತಿ
ಭೂತಾಯಿ ಒಡಲು
ಬಿರಿದರಳಿತು

ನವಮಾಸ ತುಂಬಿರುವ
ಹೆಣ್ಣಿನಂದದಿ ಇಳೆ
ಹಸಿರುಡುಗೆಯಲಿ
ನಲಿದಾಡಿತು

ಕಣ್ಣು ಮನತುಂಬುವ
ಭೂರಮೆಯ  ಚೆಲುವಿಗೆ
ಕವಿಮನದಲೊಂದು
ರಾಗ  ಗುಣುಗುಣಿಸಿತು

ಇನಿಯಳ ಜತೆಯಲ್ಲಿ
ನವಿಲೊಂದು ಕುಣಿದಾಡಿ
ಕಣ್ಮನಕೆ ಹಬ್ಬವನು 
ತಂದೊಡ್ಡಿದು

ಭೋರೆಂದು ಸುರಿಯುವ
ಜಡಿಮಳೆಯ ಜತೆಯಲ್ಲಿ
ಕೋಲ್ಮಿಂಚುಗಳು ಮೂಡಿ
ಮನ ಬೆರಗಾಯಿತು

ಪಂಕಜಾ.ಕೆ. ಮುಡಿಪು
[08/08, 9:05 PM] ವಾಣಿ ಭಂಡಾರಿ ಹನಿ ಹನಿ ಇಬ್ಬನಿ ಬಳಗ: 🎪🎪🎪🎪🎪🎪🎪🎪🎪🎪🎪
*ಹನಿಹನಿಇಬ್ಬನಿ/ ಚಿಂತಕರ ಚಾವಡಿ*
❤️☔❤️☔❤️☔❤️☔❤️☔❤️
*ಇಂದಿನ ಫಲಿತಾಂಶ ಪಟ್ಟಿ*
🤓🥳🤓🥳🤓🥳🤓🥳🤓🥳🤓
*ವಾರ:-ಶನಿವಾರ*
*ದಿನಾಂಕ:-೦೮-೦೮-೨೦೨೦*
*ಪ್ರಕಾರ:-ಭಾವಗೀತೆ*
*ಅಡ್ಮಿನ್:-ವಾಣಿ ಭಂಡಾರಿ* 
🌳🌈🌳🌈🌳🌈🌳🌈🌳🌈🌳
*ಇಂದು ಹೂಮಳೆ ಹರಿಸಿದ ರಭಸಕ್ಕೆ ಇಬ್ಬನಿಯಲ್ಲಿ ಭಾವತರಂಗ ಮೀಟಿದಂತೆ ಆಗಿದೆ.ಹೂಮಳೆಯಲ್ಲಿ ನವಿರಾಗಿ ನೆಂದು,ಮಿಂದು, ಮೈದುಂಬಿ, ಕುಣಿದು, ಕುಪ್ಪಳಿಸಿ, ಸಂತಸದಲೆಯಲ್ಲಿ ಸುಮನಸ್ಸಿನಿಂದ ಬರೆದು ಭಾಗವಹಿಸಿದ ಸರ್ವ ಕವಿ ಹೃದಯಗಳಿಗೂ ಧನ್ಯವಾದಗಳು*
🙏🏻☔🙏🏻☔🙏🏻❤️🙏🏻☔🙏🏻☔🙏🏻
*💧ಇಂದಿನ ಅತ್ಯುತ್ತಮ ಬರಹ💧*

*🏆ಶಂಕರಾನಂದ ಹೆಬ್ಬಾಳ* 

*🌹ಉತ್ತಮ ಅಯ್ಕೆ🌹*
👉  *ಅಭಿಜ್ಞಾ ಪಿ.ಎಂ.  ಗೌಡ* 
👉  *ಶೇಕಪ್ಪ ಸತ್ಯಪ್ಪನವರ*  
👉  *ಮಹಾದೇವ್* 
*ಸಮಾಧಾನಕರ ಆಯ್ಕೆ*
👉 *ದೀಪಿಕಾ ಚಾಟೆ* 
👉 *ಲತಾ ಮಾಲತ* 
👉 *ಪಂಕಜ.ಕೆ.* 

*🥰ಅತ್ಯುತ್ತಮ ವಿಮರ್ಶಕರು🥰*
*🧐ಅಜಿತ್* 
*🌳ಉತ್ತಮ ವಿಮರ್ಶಕರು🌳*
*👉ಕೃಷ್ಣಸ್ವಾಮಿ* 
*👉ಪ್ರಮೀಳಾ ರಾಜ್* 
*👉ಅಮರೇಶ್*
*ಭಾಗವಹಿಸಿದ ಸಮಸ್ತರಿಗೂ ಅಭಿನಂದನೆಗಳು.*
🥳🌹🥳🌹🥳🌹🥳🌹🥳🌹🥳
*ನಾಳಿನ‌ ಅಡ್ಮಿನ್:-ಬಳಗದ ಸರ್ವ ಸದಸ್ಯರು*
*ನಾಳೆ ಭಾನುವಾರ ಆದ ಪ್ರಯುಕ್ತ ಕನ್ನಡ ಸಾಹಿತ್ಯದಲ್ಲಿ ನಿಮಗಿಷ್ಟವಾದ ಪ್ರಕಾರ ಬರೆದು ಇಬ್ಬನಿಯನ್ನು ಅಂದಗೊಳಿಸಿ. ಹಾಗೂ ಚಾವಡಿಯಲ್ಲಿ ವಿಮರ್ಶೆ ಅನಿಸಿಕೆ ಅಭಿಪ್ರಾಯ ಇರಲಿ*
✍️✍️✍️✍️✍️✍️✍️✍️✍️✍️✍️
*ನಮ್ಮೆಲ್ಲರಿಗೂ ಬರೆಯುವ ಅವಕಾಶವನ್ನು ನೀಡುತ್ತಿರುವ ಅಡ್ಮಿನ್ ಖುಷಿ ಕೃಷ್ಣ ಅವರಿಗೆ ನಮನಗಳು*
🦚🌹🦚🌹🦚🌹🦚🌹🦚🌹🦚
*🌚ಶುಭರಾತ್ರಿ*🌚

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...