ದೇಹಾಂಗ ದಾನ ದಿನಾಚರಣೆಯ ಪ್ರಯುಕ್ತ ಕವನ ರಚನೆ ಕಾರ್ಯಕ್ರಮಕ್ಕಾಗಿ
ದಾನ ಮಾಡಿ ಅಮರರಾಗಿ
ಅವಸರದ ಕ್ಷಣಗಳಲಿ
ಅಪಘಾತಗಳ ಸುಳಿಯಲಿ
ಕಳೆದು ಕೊಂಡಿಹ ರಕ್ತ
ತುಂಬಿಸಲು ಬಲು ಕಷ್ಟ
ಮಾನವ ಜೀವನ ಅನಿತ್ಯ
ರಕ್ತದಾನವೊಂದೇ ಸತ್ಯ
ಉಸಿರು ಉಳಿಸುವ ಶಕ್ತಿ
ರಕ್ತದಾನಿಯ ಬುತ್ತಿ
ಮಾನವತೆಯ ಬಂಧ
ರಕ್ತದಾನದ ಅನುಬಂಧ
ರಕ್ತದಾನ ಒಂದು ಮಹಾದಾನ
ಅದುಆರೋಗ್ಯ ಭಾಗ್ಯದ ಪಾನ
ಬಡವ ಬಲ್ಲಿದ ಭೇಧವಿಲ್ಲ
ಜಾತಿ ವಿಜಾತಿಗಳ ಲೆಕ್ಕವಿಲ್ಲ
ಹರಿವುದೊಂದೇ ರಕ್ತ
ಮನುಜ ಇದರಿಂದ ಶಕ್ತ
ರಕ್ತವೆನ್ನುವ ಅಮೃತ
ಅದಿಲ್ಲದಿರೆ ಮನುಜ ಮೃತ
ರಕ್ತದಾನವ ಮಾಡಬೇಕು
ಇನ್ನೊಬ್ಬರ ಪ್ರಾಣ ಉಳಿಸಬೇಕು
ದಾನ ಮಾಡಿದ ರಕ್ತ
ತುಂಬುವುದು ನಿತ್ಯ
ಬೇಕಿಲ್ಲ ಇದರಲ್ಲಿಭಯ
ಉಳಿಸಬೇಕು ನೊಂದಜೀವ
ಮಾಡಿ ಬಿಡು ರಕ್ತದಾನ
ಕೊಟ್ಟುಬಿಡು ಜೀವದಾನ
ಬೇರಿಲ್ಲಇದಕೆ ಸಾಟಿಯದ ದಾನ
ರಕ್ತದಾನವೊಂದು ಮಹಾದಾನ
ಬಿದ್ದು ಹೋಗುವ ನಶ್ವರ ಶರೀರ
ಅಂಗಾಗ ದಾನದಿಂದ ಅದು ಅಮರ
ಕಣ್ಣಿಲ್ಲದವರಿಗೆ ನಮ್ಮ ಕಣ್ಣೇ ಬೆಳಕು
ಅವರ ಕಣ್ಣಲಿ ಬೆಳಗುತ್ತಿದೆ ಜ್ಯೋತಿ
ಉಸಿರು ಹೋಗುವ ಮುನ್ನ ಮಾಡಿಬಿಡು
ರಕ್ತದಾನ ಅಂಗಾಗ ದಾನ
ಸ್ವ ಇಚ್ಛೆಯಿಂದ ಕೊಟ್ಟ ಈ ದಾನ
ಕೊಟ್ಟೀತು ಮನಕೆ ಸಮಾಧಾನ
ಉಸಿರು ನಿಂತು ಹೋದರೂ
ಅಂಗಾಂಗಗಳಾಗದಿರಲಿ ವ್ಯರ್ಥ
ಅಗ್ನಿ ಅದನು ಸುಡುವ ಮುನ್ನ
ಬೆಳಗಲಿ ಅಂಧನ ಕಣ್ಣಿನಲಿ ಜ್ಯೋತಿ
ಬಡಿಯಲಿ ನಿನ್ನ ಹೃದಯ ನಿತ್ಯ
ಸಾವಿನಾಚೆಯಲೂ ಅಮರವಾಗಲಿ ದೇಹ
ಸತ್ತು ಮಣ್ಣಾಗುವ ಮೊದಲು
ಉಪಯೋಗವಾಗಲಿ ನಿನ್ನ ದೇಹಾಂಗ
ಪಂಕಜಾ. ಕಬ್ಬಿನಹಿತ್ಲು ಮುಡಿಪು
Comments
Post a Comment