ಬಾನುವಾರ ಕರುನಾಡ ಹಣತೆ ಕವನ ಸ್ಪರ್ಧೆಗೆ
ಅಣ್ಣ ತಂಗಿಯರ ಬಂಧ
ರಾಖಿಯ ಹಬ್ಬವು ಬಂದಿಹುದು
ಸಹೋದರ ಪ್ರೇಮವ ಸಾರುವುದು
ತಂಗಿಯು ಕಟ್ಟುವಳು ರಾಖಿಯನು
ಅಣ್ಣನು ಕೊಡುವನು ರಕ್ಷೆಯನು
ಸಹೋದರ ಸಹೋದರಿಯರ ಬಂಧ
ಸಾರುತಿದೆ ರಕ್ಷಾಬಂಧನದ ಈ ಬಂಧ
ಅಣ್ಣ ತಂಗಿಯರ ಈ ಪ್ರೀತಿಯ ಬಂಧ
ಜನುಮ ಜನುಮದಾ ಅನುಬಂಧ
ಹಣೆಗೆ ಹಚ್ಚುತ ತಿಲಕವನು
ಕೈಗಳಿಗೆ ಕಟ್ಟುವಳು ರಾಖಿಯನು
ಆರತಿ ಮಾಡಿ ಸಿಹಿಯನು ತಿನಿಸಿ
ತಂಗಿಯು ಬೇಡುವಳು ಆಶೀರ್ವಾದವನು
ಶ್ರೀಕೃಷ್ಟನ ಕರಗಳ ಗಾಯವ ಕಂಡು
ತನ್ನ ಯ ಸೀರೆಯ ಅಂಚನು ಹರಿದು
ಕಟ್ಟಿದಳಂದು ದ್ರುಪದನ ಕುವರಿ
ಪಡೆಯುತ ಶ್ರೀ ಕೃಷ್ಣ ನ ರಕ್ಷೆಯನು
ನೂಲಿನ ಎಳೆಯಲಿ ಸಹೋದರ ಪ್ರೇಮ
ತುಂಬಿದೆ ಸಹೋದರಿಯ ರಕ್ಷಣೆಯ ನೇಮ
ಸಹೋದರಿಯ ಕೈಯಿಂದ ಕಟ್ಟುವ ರಾಖಿ
ಸಹೋದರನ ಆಯುರಾರೋಗ್ಯಕೆ ಸಾಕ್ಷಿ
ರಕ್ಷಾ ಬಂಧನದ ಶುಭಘಳಿಗೆ
ಭರವಸೆ ಬೆಸೆಯುವ ಈ ಘಳಿಗೆ
ನಾಡಿನೆಲ್ಲೆಡೆ ತುಂಬಿದೆ ಸಂಭ್ರಮವು
ಸಾರಿದೆ ಅಣ್ಣ ತಂಗಿಯರ ಬಂಧವನು
ಪಂಕಜಾ.ಕೆ.ಮುಡಿಪು
ಹೆಸರು...ಪಂಕಜಾ.ಕೆ.ಮುಡಿಪು
ವಿಳಾಸ..ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು
ಅಂಚೆ ..ಕುರ್ನಾಡು ..ದ.ಕ.574153
ಮೊಬೈಲ್ ನಂಬರ್ 9964659620
Comments
Post a Comment