ಕಾವ್ಯಮೈತ್ರಿ ಸ್ಪರ್ಧೆಗಾಗಿ
ನನ್ನೊಲವೆ
ಮುಂಜಾನೆ ಕನಸಿನಲಿ ನೀನಂದು ಬಂದೆ
ತುಂಟತನವ ತೋರುತ ನಗು ನಗುತ ನಿಂದೆ
ಎದೆಯಲ್ಲಿ ಕಂಪನವು ಮನದಲ್ಲಿ ಕನಸು
ನಾಚಿಕೆಯ ತೆರೆಯಲ್ಲಿ ಮೈ ಮನಕೆ ಬಿಸುಪು
ಹೂ ಮನದ ಹೂವುಗಳು ಬಿರಿದರಳಿತು
ಪ್ರೀತಿಯ ಅಲೆಯಲ್ಲಿ ಮನ ತೇಲಾಡಿತು
ನಾನಾದೆ ಅಂದೆ ನಿನಗಾಗಿ ಹಂಬಲಿಸಿ
ಊರಿಡೀ ಅಲೆದಾಡೋ ಅಲೆಮಾರಿಯೂ.
ಜತೆಯಾಗಿ ಸಾಗೋಣ ಬಾ ಬೇಗ ನಲ್ಲೆ
ಬೇಸರವ ಕಳೆಯುತ್ತ ಕುಣಿಯೋಣ ಇಲ್ಲೆ
ಮಧು ಮಾಸ ಬಂದಿಹುದು ನಮಗಾಗಿಯೇ
ತನಿರಸವ ಸವಿಯುತ್ತಾ ನಲಿಯೋಣವೇ
ಚಂದಿರನ ಬೆಳಕಿನಲಿ ಮೈ ಮನಕೆ ತಂಪು
ನೀ ಜತೆಯಲಿದ್ದರೆ ಕೋಗಿಲೆಯ ಇಂಪು
ನೋಡಿಲ್ಲಿ ಚಂದಿರನು ಮರೆಯಾದನು
ನಮ್ಮಿಬ್ಬರನು ಕಂಡು ಮರೆಯಾದನೆ
ನಾಚಿಕೆಯ ಕಿತ್ತೊಗೆದು ನೀನೊಮ್ಮೆ ಬಾ
ಸ್ವರ್ಗವನೆ ಧರೆಯಲ್ಲಿ ತರುತಿರುವೆ ಬಾ
ಜನುಮ ಜನುಮದಾ ಅನುಬಂಧ ವೇ ಅನುದಿನವೂ ನಿನ್ನೊಡನೆ ಜತೆಯಾಗುವೆ
ಪಂಕಜಾ.ಕೆ. ಮುಡಿಪು
Comments
Post a Comment