Skip to main content

ಅಣ್ಣ ತಂಗಿಯರ ಬಂಧ ಕುರುನಾಡು ಹಣತೆ ಯಲ್ಲಿ ತೃತೀಯ

 ಬಾನುವಾರ ಕರುನಾಡ ಹಣತೆ ಕವನ ಸ್ಪರ್ಧೆಗೆ
 
ಅಣ್ಣ ತಂಗಿಯರ ಬಂಧ

ರಾಖಿಯ ಹಬ್ಬವು ಬಂದಿಹುದು
ಸಹೋದರ ಪ್ರೇಮವ ಸಾರುವುದು
ತಂಗಿಯು ಕಟ್ಟುವಳು ರಾಖಿಯನು
ಅಣ್ಣನು ಕೊಡುವನು ರಕ್ಷೆಯನು

ಸಹೋದರ ಸಹೋದರಿಯರ ಬಂಧ
ಸಾರುತಿದೆ ರಕ್ಷಾಬಂಧನದ ಈ ಬಂಧ
ಅಣ್ಣ ತಂಗಿಯರ ಈ ಪ್ರೀತಿಯ ಬಂಧ
ಜನುಮ ಜನುಮದಾ ಅನುಬಂಧ

ಹಣೆಗೆ ಹಚ್ಚುತ ತಿಲಕವನು
ಕೈಗಳಿಗೆ ಕಟ್ಟುವಳು ರಾಖಿಯನು
ಆರತಿ ಮಾಡಿ ಸಿಹಿಯನು ತಿನಿಸಿ
ತಂಗಿಯು ಬೇಡುವಳು ಆಶೀರ್ವಾದವನು

ಶ್ರೀಕೃಷ್ಟನ ಕರಗಳ ಗಾಯವ ಕಂಡು 
ತನ್ನ ಯ ಸೀರೆಯ ಅಂಚನು ಹರಿದು
ಕಟ್ಟಿದಳಂದು  ದ್ರುಪದನ ಕುವರಿ
ಪಡೆಯುತ ಶ್ರೀ ಕೃಷ್ಣ ನ ರಕ್ಷೆಯನು

ನೂಲಿನ ಎಳೆಯಲಿ ಸಹೋದರ ಪ್ರೇಮ
ತುಂಬಿದೆ  ಸಹೋದರಿಯ ರಕ್ಷಣೆಯ ನೇಮ
ಸಹೋದರಿಯ ಕೈಯಿಂದ ಕಟ್ಟುವ ರಾಖಿ
ಸಹೋದರನ ಆಯುರಾರೋಗ್ಯಕೆ ಸಾಕ್ಷಿ

ರಕ್ಷಾ ಬಂಧನದ ಶುಭಘಳಿಗೆ
ಭರವಸೆ ಬೆಸೆಯುವ ಈ ಘಳಿಗೆ
ನಾಡಿನೆಲ್ಲೆಡೆ ತುಂಬಿದೆ  ಸಂಭ್ರಮವು
ಸಾರಿದೆ ಅಣ್ಣ ತಂಗಿಯರ  ಬಂಧವನು

ಪಂಕಜಾ.ಕೆ.ಮುಡಿಪು

ಹೆಸರು...ಪಂಕಜಾ.ಕೆ.ಮುಡಿಪು
ವಿಳಾಸ..ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು
ಅಂಚೆ ..ಕುರ್ನಾಡು ..ದ.ಕ.574153
ಮೊಬೈಲ್ ನಂಬರ್ 9964659620
[08/08, 6:55 AM] ಎಸ್ ರಾಜು ಸೋಲೇನ ಹಳ್ಳಿ ಕರುನಾಡ ಹಣತೆ: *ಫಲಿತಾಂಶ ಪ್ರಕಟಣೆ* 
         ----------------------------

*"ಚಿತ್ರದುರ್ಗ ಜಿಲ್ಲೆಯ ಕರುನಾಡ ಹಣತೆ ಕವಿ(ರಿ.) ಬಳಗದಿಂದ ದಿನಾಂಕ ೦೨-೦೮-೨೦೨೦ ರಂದು ನಡೆದ ರಕ್ಷಾ ಬಂಧನ ಕುರಿತಾದ ಕವನ ಸ್ಪರ್ಧೆಯ ಫಲಿತಾಂಶ ನಿಮ್ಮ ಮುಂದೆ....."*

🎁🖊️😊📚😊🎁🎁🖊️😊📚📋🎁📚📋🖊️😊🎁

೧) ಪ್ರಥಮ ಬಹುಮಾನ ಪಡೆದ ಕವನ👉🌹👇
ಮಂಜುಶ್ರೀ ಯನ್
🥇🥇🥇🥇🥇🥇🥇🥇🥇🥇

೨) ದ್ವಿತೀಯ ಬಹುಮಾನ ಪಡೆದ ಕವನ👇🌷👇🌷
ದಿವ್ಯ  ಎಲ್.ಎನ್ .ಸ್ವಾಮಿ
🥈🥈🥈🥈🥈🥈🥈🥈🥈🥈

ತೃತೀಯ ಸ್ಥಾನ ಪಡೆದ ಕವನ
   👇🌺👇🌺👇🌺   
 
ಪಂಕಜಾ.ಕೆ.ಮುಡಿಪು
🥉🥉🥉🥉🥉🥉🥉🥉🥉🥉

 *ಟಾಪ್ ಹತ್ತು ಕವನಗಳ ವಿರಚಿತ ವಿಜೇತರು* 
 1ಬಿ ಎನ್ ಪದ್ಮ ಪ್ರಸಾದ್ ಬೆಳ್ಳೂರ್
 2ಮೈನಾ ನಾಸೀರ್ ಕಾರ್ಗಲ್
 3ಮೈನಾ
 4ನಯನ ಕೋಟ
 5ಸದ್ಗುರು ಬಾಬು
 6ಲಕ್ಷ್ಮೀ ವಿ ಭಟ್
 7ಹಿತೇಶ್ ಕುಮಾರ್ ಎ
 8ಸುಮತಿ ಪಿ
 9ನಾಗರಾಜ ಬಿ
 10ಮಂಜುಳ ಮರಳ್ಳವರ


ವಿಜೇತರಿಗೆ ಅಭಿನಂದನೆಗಳು🌷 ಭಾಗವಹಿಸಿದವರಿಗೂ ಶುಭಹಾರೈಕೆಗಳು💐
 *ತೀರ್ಪುಗಾರರು* 
 _ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್_ 
ಸಾಹಿತಿಗಳು ಮತ್ತು ಸಂಶೋಧನಾರ್ಥಿಗಳು,
_(ಗ್ರಾಮೀಣ ಸಾಹಿತ್ಯಾಸಕ್ತರ ವೇದಿಕೆ ಚಾಮರಾಜನಗರ)_ ಉಪಾಧ್ಯಕ್ಷರು

 *ವಿಮರ್ಶಕರು* 
 _ಕಲ್ಲೇಶ್ (ನಂದಕಲಾ)_ 
ಹವ್ಯಾಸಿ ಬರಹಗಾರರು ಮತ್ತು ಸಾಹಿತ್ಯ ಸೌರಭ (ಅಂತರ್ಜಾಲ ವೇದಿಕೆ) ಸಂಘಟಕರು. 

 *ಸ್ಪರ್ಧೆಯ ಆಯೋಜಕರು-* 
 ಎಸ್ ರಾಜು ಸೂಲೇನಹಳ್ಳಿ
ರಾಜ್ಯಾಧ್ಯಕ್ಷರು
ಕರುನಾಡ ಹಣತೆ ಕವಿ ಬಳಗ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...