ಬಾನುವಾರ ಕರುನಾಡ ಹಣತೆ ಕವನ ಸ್ಪರ್ಧೆಗೆ
ಅಣ್ಣ ತಂಗಿಯರ ಬಂಧ
ರಾಖಿಯ ಹಬ್ಬವು ಬಂದಿಹುದು
ಸಹೋದರ ಪ್ರೇಮವ ಸಾರುವುದು
ತಂಗಿಯು ಕಟ್ಟುವಳು ರಾಖಿಯನು
ಅಣ್ಣನು ಕೊಡುವನು ರಕ್ಷೆಯನು
ಸಹೋದರ ಸಹೋದರಿಯರ ಬಂಧ
ಸಾರುತಿದೆ ರಕ್ಷಾಬಂಧನದ ಈ ಬಂಧ
ಅಣ್ಣ ತಂಗಿಯರ ಈ ಪ್ರೀತಿಯ ಬಂಧ
ಜನುಮ ಜನುಮದಾ ಅನುಬಂಧ
ಹಣೆಗೆ ಹಚ್ಚುತ ತಿಲಕವನು
ಕೈಗಳಿಗೆ ಕಟ್ಟುವಳು ರಾಖಿಯನು
ಆರತಿ ಮಾಡಿ ಸಿಹಿಯನು ತಿನಿಸಿ
ತಂಗಿಯು ಬೇಡುವಳು ಆಶೀರ್ವಾದವನು
ಶ್ರೀಕೃಷ್ಟನ ಕರಗಳ ಗಾಯವ ಕಂಡು
ತನ್ನ ಯ ಸೀರೆಯ ಅಂಚನು ಹರಿದು
ಕಟ್ಟಿದಳಂದು ದ್ರುಪದನ ಕುವರಿ
ಪಡೆಯುತ ಶ್ರೀ ಕೃಷ್ಣ ನ ರಕ್ಷೆಯನು
ನೂಲಿನ ಎಳೆಯಲಿ ಸಹೋದರ ಪ್ರೇಮ
ತುಂಬಿದೆ ಸಹೋದರಿಯ ರಕ್ಷಣೆಯ ನೇಮ
ಸಹೋದರಿಯ ಕೈಯಿಂದ ಕಟ್ಟುವ ರಾಖಿ
ಸಹೋದರನ ಆಯುರಾರೋಗ್ಯಕೆ ಸಾಕ್ಷಿ
ರಕ್ಷಾ ಬಂಧನದ ಶುಭಘಳಿಗೆ
ಭರವಸೆ ಬೆಸೆಯುವ ಈ ಘಳಿಗೆ
ನಾಡಿನೆಲ್ಲೆಡೆ ತುಂಬಿದೆ ಸಂಭ್ರಮವು
ಸಾರಿದೆ ಅಣ್ಣ ತಂಗಿಯರ ಬಂಧವನು
ಪಂಕಜಾ.ಕೆ.ಮುಡಿಪು
ಹೆಸರು...ಪಂಕಜಾ.ಕೆ.ಮುಡಿಪು
ವಿಳಾಸ..ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು
ಅಂಚೆ ..ಕುರ್ನಾಡು ..ದ.ಕ.574153
ಮೊಬೈಲ್ ನಂಬರ್ 9964659620
[08/08, 6:55 AM] ಎಸ್ ರಾಜು ಸೋಲೇನ ಹಳ್ಳಿ ಕರುನಾಡ ಹಣತೆ: *ಫಲಿತಾಂಶ ಪ್ರಕಟಣೆ*
----------------------------
*"ಚಿತ್ರದುರ್ಗ ಜಿಲ್ಲೆಯ ಕರುನಾಡ ಹಣತೆ ಕವಿ(ರಿ.) ಬಳಗದಿಂದ ದಿನಾಂಕ ೦೨-೦೮-೨೦೨೦ ರಂದು ನಡೆದ ರಕ್ಷಾ ಬಂಧನ ಕುರಿತಾದ ಕವನ ಸ್ಪರ್ಧೆಯ ಫಲಿತಾಂಶ ನಿಮ್ಮ ಮುಂದೆ....."*
🎁🖊️😊📚😊🎁🎁🖊️😊📚📋🎁📚📋🖊️😊🎁
೧) ಪ್ರಥಮ ಬಹುಮಾನ ಪಡೆದ ಕವನ👉🌹👇
ಮಂಜುಶ್ರೀ ಯನ್
🥇🥇🥇🥇🥇🥇🥇🥇🥇🥇
೨) ದ್ವಿತೀಯ ಬಹುಮಾನ ಪಡೆದ ಕವನ👇🌷👇🌷
ದಿವ್ಯ ಎಲ್.ಎನ್ .ಸ್ವಾಮಿ
🥈🥈🥈🥈🥈🥈🥈🥈🥈🥈
ತೃತೀಯ ಸ್ಥಾನ ಪಡೆದ ಕವನ
👇🌺👇🌺👇🌺
ಪಂಕಜಾ.ಕೆ.ಮುಡಿಪು
🥉🥉🥉🥉🥉🥉🥉🥉🥉🥉
*ಟಾಪ್ ಹತ್ತು ಕವನಗಳ ವಿರಚಿತ ವಿಜೇತರು*
1ಬಿ ಎನ್ ಪದ್ಮ ಪ್ರಸಾದ್ ಬೆಳ್ಳೂರ್
2ಮೈನಾ ನಾಸೀರ್ ಕಾರ್ಗಲ್
3ಮೈನಾ
4ನಯನ ಕೋಟ
5ಸದ್ಗುರು ಬಾಬು
6ಲಕ್ಷ್ಮೀ ವಿ ಭಟ್
7ಹಿತೇಶ್ ಕುಮಾರ್ ಎ
8ಸುಮತಿ ಪಿ
9ನಾಗರಾಜ ಬಿ
10ಮಂಜುಳ ಮರಳ್ಳವರ
ವಿಜೇತರಿಗೆ ಅಭಿನಂದನೆಗಳು🌷 ಭಾಗವಹಿಸಿದವರಿಗೂ ಶುಭಹಾರೈಕೆಗಳು💐
*ತೀರ್ಪುಗಾರರು*
_ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್_
ಸಾಹಿತಿಗಳು ಮತ್ತು ಸಂಶೋಧನಾರ್ಥಿಗಳು,
_(ಗ್ರಾಮೀಣ ಸಾಹಿತ್ಯಾಸಕ್ತರ ವೇದಿಕೆ ಚಾಮರಾಜನಗರ)_ ಉಪಾಧ್ಯಕ್ಷರು
*ವಿಮರ್ಶಕರು*
_ಕಲ್ಲೇಶ್ (ನಂದಕಲಾ)_
ಹವ್ಯಾಸಿ ಬರಹಗಾರರು ಮತ್ತು ಸಾಹಿತ್ಯ ಸೌರಭ (ಅಂತರ್ಜಾಲ ವೇದಿಕೆ) ಸಂಘಟಕರು.
*ಸ್ಪರ್ಧೆಯ ಆಯೋಜಕರು-*
ಎಸ್ ರಾಜು ಸೂಲೇನಹಳ್ಳಿ
ರಾಜ್ಯಾಧ್ಯಕ್ಷರು
ಕರುನಾಡ ಹಣತೆ ಕವಿ ಬಳಗ.
Comments
Post a Comment