ಕಾವ್ಯಕೂಟ ಸ್ಪರ್ಧೆಗಾಗಿ
ಜಡೆಕವನ
ನಾಟಕರಂಗ
ಜೀವನವೊಂದು ನಾಟಕ
ನಾಟಕವಾಡುತಲೇ ಬದುಕು
ಬದುಕು ಬವಣೆಗೆ ನಾ ಸೋತೆ
ಸೋತು ಸುಮ್ಮನೆ ಕೂರಬೇಡ
ಕೂರಬೇಡವೆಂದರೂ ಕೇಳದು ಮನ
ಮನದ ಬಯಕೆಯ ತಣಿಸಲು ಬೇಕು ನೀನು
ನೀನು ಜತೆಯಲ್ಲಿದ್ದರೆ ಬಾಳು ಸುಂದರ
ಸುಂದರ ಪರಿಸರದಲ್ಲಿ ಮೈಮರೆತೆ ನಲ್ಲ
ನಲ್ಲ ನಿನ್ನ ಒಡನಾಟದಲ್ಲಿ ನಾನು ಬಲು ಸುಖಿ
ಸುಖೀ ಜೀವನವು ತಂದಿದೆ ಮನಕೆ ಗೆಲುವು
ಗೆಲುವು ತುಂಬಿದ ಜಗ ಸುಂದರ ನೀನಿದ್ದರೆ
ನೀನಿದ್ದರೆ ಬೇರೇನೂ ಬೇಕು ಜಗದಲಿ
ಜಗದಲಿ ಬಾಳಲು ಪ್ರೀತಿ ವಿಶ್ವಾಸ ಬೇಕು
ಬೇಕು ಬೇಕೆನ್ನುವ ಕಾತರ ಮೈತುಂಬಿದೆ
ಮೈತುಂಬಿದ ಬಯಕೆಗೆ ತನು ಸೋತಿದೆ
ಸೋತರೂ ನಡೆಯಬೇಕು ಜೀವನ
ಪಂಕಜಾ.ಕೆ. ಮುಡಿಪು
Comments
Post a Comment