ಗುರುಕುಲ ಕಲಾ ಪ್ರತಿಷ್ಠಾನ ಜಿಲ್ಲಾ ಘಟಕ ಕೊಡಗು ವಾರಕ್ಕೊಂದು ಸ್ಪರ್ಧೆಯಲ್ಲಿ ಉತ್ತಮವೆಂದು ಪರಿಗಣಿಸಿದ ನನ್ನ ಸ್ವರಚಿತ ಕವನ
ವಿಷಯ ..ದಿನಚರಿ
ಶೀರ್ಷಿಕೆ ..ನಮ್ಮ ರೈತ
ಕೋಳಿಯು ಕೂಗುವ ಮೊದಲೇ ಎದ್ದು
ದಿನಚರಿಯಲ್ಲಿ ತೊಡಗುವನು
ನೇಗಿಲ ಹಿಡಿದು ಗದ್ದೆಯ ಉಳುತ
ಹಸಿರಿನ ಹಾಸನು ಹಾಸುವನು
ಹಗಲಿರುಳೆನ್ನದೆ ಗದ್ದೆಯ ಕೆಸರಲಿ
ದುಡಿಯುತಲಿರುವನು ರೈತ
ದೇಶದ ಜನತೆಯ ಹಸಿವನುನೀಗಲು
ದಿನವೂ ಶ್ರಮವನು ಪಡುತಿಹನು
ಮಳೆಯನು ಕಾಯುತ ಭರದಲಿ ನಿಲ್ಲುತ
ಭೂತಾಯಿಯ ಸೇವೆಯ ಮಾಡುವನು
ಉಳುಮೆಯ ಮಾಡುತ ದಿನಗಳ ಕಳೆಯುತ
ಹೊನ್ನಿನ ಬೆಳೆಯನು ತೆಗೆಯುವನು
ಹಸಿರೇ ಉಸಿರು ಎನ್ನುವ ತತ್ವವ ತಿಳಿಯುತ
ಹಸಿರನು ಬೆಳೆಯಲು ಶ್ರಮಿಸುವನು
ಕಾಯಕಯೋಗಿಯು ನಮ್ಮಯ ರೈತನು
ದೇಶದ ಏಳ್ಗೆಗೆ ದುಡಿಯುವನು
ಪಂಕಜಾ.ಕೆ. ಮುಡಿಪು
.
Comments
Post a Comment