Skip to main content

ಅತ್ಯುತ್ತಮವೆಂದು ಆಯ್ಕೆ ಗುರುಕುಲ ಶಿವಮೊಗ್ಗ ಘಟಕ ಜೋಗ ಜಲಪಾತ

ಗುರುಕುಲ ಶಿವಮೊಗ್ಗ ಘಟಕದ ಬಾನುವಾರದ ಸ್ಪರ್ಧೆಗಾಗಿ

 ಚಿತ್ರಕ್ಕೊಂದು  ಕವನ

ಜೋಗ ಜಲಪಾತ

ಮನಸೂರೆಗೊಳ್ಳುತ್ತಿದೆ ನಿನ್ನ ಲಾಸ್ಯ
ರುದ್ರರಮಣೀಯ ಸೌಂದರ್ಯ ಬಾಷ್ಯ

ಪ್ರವಾಸಿಗರ ಮನತಣಿಸುತಿದೆ  ವೈಭೋಗ
ನೋಡಲು ಎರಡು ಕಣ್ಣು ಸಾಲದಾಗಿದೆ ಈಗ

ರಾಜ  ನಡಿಗೆಯಲಿ  ಸರಿದು ಬಂದು
ಬಳುಕುವ ಬಳ್ಳಿಯಂತೆ ಹರಿಯುತ ನಿಂದು

ಧುಮ್ಮಿಕ್ಕಿ ಆರ್ಭಟಿಸುತಿದೆ ಕಣ್ಣು ಸೆಳೆದು
ರಸಿಕರ ಮನದಲಿ ಬೆರಗನು ತಂದು

ಬಾಣದಂತೆ ಚಿಮ್ಮಿ ನೊರೆಯುಕ್ಕಿಸುವ ಪರಿ
ಹಿಡಿದಿಡಲಾಗದು ನಿನ್ನ ಈ ಸೊಬಗಿನ ವೈಖರಿ

ಜಲಧಾರೆಯ ಸೌಂದರ್ಯ ಕ್ಕೆ ಎಣೆಯುಂಟೆ
ಜೋಗ ಜಲಪಾತದ ಸೊಬಗ ಕಾಣದವರುಂಟೆ

ಮಳೆಗಾಲದಲ್ಲಿ ಅಬ್ಬರಿಸಿ ಹರಿಯುವುದು
ಹೃದಯ ನಡುಗಿಸುವ ಶಬ್ದ ಮಾಡುವುದು

ಕಡಿದಾದ ಕಣಿವೆಯ ಪರಿಸರದ ಸುಂದರ ದೃಶ್ಯ
ಬೇರೆಯೇ ಲೋಕಕ್ಕೆ ಕರೆದೊಯ್ಯುವುದು ಸತ್ಯ

ಕನ್ನಡ ನಾಡಿನ ಹೆಮ್ಮೆಯ ಈ  ತಾಣ
ವಿಶ್ವವಿಖ್ಯಾತ ಸುಂದರ ಸ್ಥಳ ಕಾಣ

ಮಲೆನಾಡಿನ ಸೌಂದರ್ಯಕ್ಕೆ ಮುಕುಟಮಣಿ
ಜೋಗ ಜಲಪಾತವೆಂಬ  ಈ ನಮ್ಮ ಕಣ್ಮಣಿ

ಪಶ್ಚಿಮಘಟ್ಟದ ರುದ್ರ ರಮಣೀಯ ನೋಟ
ರಸಿಕರಿಗೆ ಪ್ರಕೃತಿ ಸಿರಿಯ  ವೈಭವದ ಊಟ

ರಾಜಗಾಂಭೀರ್ಯದಲಿ ಹರಿಯುವ ರೀತಿ
ನೋಡುತಲಿದ್ದರೆ  ತಲೆದೋರುವುದು ಭೀತಿ

ಬಳ್ಳಿಯಂತೆ ಬಳುಕುತ್ತಾ ಹರಿದಾಡುವ ಚೆಲುವು
ನವಿಲಿನ ನಾಟ್ಯದ ತೆರದಂತೆ  ಮೈಮನಕೆ ನಲಿವು

ರಾಕೆಟ್ನಂತೆ ಧುಮುಕುವ ನೀರಧಾರೆಯಸೊಬಗು
ಮನಮೋಹಕ ದೃಶ್ಯ ಕಾಣುವ ಕಣ್ಣಿಗೆ ಬೆರಗು

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ . ಮುಡಿಪು.ಅಂಚೆ.ಕುರ್ನಾಡು.ದ.ಕ. 574153
ಮೊಬೈಲ್ ನಂಬರ್ 9964659620

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...