ಗುರುಕುಲ ಶಿವಮೊಗ್ಗ ಘಟಕದ ಬಾನುವಾರದ ಸ್ಪರ್ಧೆಗಾಗಿ
ಚಿತ್ರಕ್ಕೊಂದು ಕವನ
ಜೋಗ ಜಲಪಾತ
ಮನಸೂರೆಗೊಳ್ಳುತ್ತಿದೆ ನಿನ್ನ ಲಾಸ್ಯ
ರುದ್ರರಮಣೀಯ ಸೌಂದರ್ಯ ಬಾಷ್ಯ
ಪ್ರವಾಸಿಗರ ಮನತಣಿಸುತಿದೆ ವೈಭೋಗ
ನೋಡಲು ಎರಡು ಕಣ್ಣು ಸಾಲದಾಗಿದೆ ಈಗ
ರಾಜ ನಡಿಗೆಯಲಿ ಸರಿದು ಬಂದು
ಬಳುಕುವ ಬಳ್ಳಿಯಂತೆ ಹರಿಯುತ ನಿಂದು
ಧುಮ್ಮಿಕ್ಕಿ ಆರ್ಭಟಿಸುತಿದೆ ಕಣ್ಣು ಸೆಳೆದು
ರಸಿಕರ ಮನದಲಿ ಬೆರಗನು ತಂದು
ಬಾಣದಂತೆ ಚಿಮ್ಮಿ ನೊರೆಯುಕ್ಕಿಸುವ ಪರಿ
ಹಿಡಿದಿಡಲಾಗದು ನಿನ್ನ ಈ ಸೊಬಗಿನ ವೈಖರಿ
ಜಲಧಾರೆಯ ಸೌಂದರ್ಯ ಕ್ಕೆ ಎಣೆಯುಂಟೆ
ಜೋಗ ಜಲಪಾತದ ಸೊಬಗ ಕಾಣದವರುಂಟೆ
ಮಳೆಗಾಲದಲ್ಲಿ ಅಬ್ಬರಿಸಿ ಹರಿಯುವುದು
ಹೃದಯ ನಡುಗಿಸುವ ಶಬ್ದ ಮಾಡುವುದು
ಕಡಿದಾದ ಕಣಿವೆಯ ಪರಿಸರದ ಸುಂದರ ದೃಶ್ಯ
ಬೇರೆಯೇ ಲೋಕಕ್ಕೆ ಕರೆದೊಯ್ಯುವುದು ಸತ್ಯ
ಕನ್ನಡ ನಾಡಿನ ಹೆಮ್ಮೆಯ ಈ ತಾಣ
ವಿಶ್ವವಿಖ್ಯಾತ ಸುಂದರ ಸ್ಥಳ ಕಾಣ
ಮಲೆನಾಡಿನ ಸೌಂದರ್ಯಕ್ಕೆ ಮುಕುಟಮಣಿ
ಜೋಗ ಜಲಪಾತವೆಂಬ ಈ ನಮ್ಮ ಕಣ್ಮಣಿ
ಪಶ್ಚಿಮಘಟ್ಟದ ರುದ್ರ ರಮಣೀಯ ನೋಟ
ರಸಿಕರಿಗೆ ಪ್ರಕೃತಿ ಸಿರಿಯ ವೈಭವದ ಊಟ
ರಾಜಗಾಂಭೀರ್ಯದಲಿ ಹರಿಯುವ ರೀತಿ
ನೋಡುತಲಿದ್ದರೆ ತಲೆದೋರುವುದು ಭೀತಿ
ಬಳ್ಳಿಯಂತೆ ಬಳುಕುತ್ತಾ ಹರಿದಾಡುವ ಚೆಲುವು
ನವಿಲಿನ ನಾಟ್ಯದ ತೆರದಂತೆ ಮೈಮನಕೆ ನಲಿವು
ರಾಕೆಟ್ನಂತೆ ಧುಮುಕುವ ನೀರಧಾರೆಯಸೊಬಗು
ಮನಮೋಹಕ ದೃಶ್ಯ ಕಾಣುವ ಕಣ್ಣಿಗೆ ಬೆರಗು
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ . ಮುಡಿಪು.ಅಂಚೆ.ಕುರ್ನಾಡು.ದ.ಕ. 574153
ಮೊಬೈಲ್ ನಂಬರ್ 9964659620
Comments
Post a Comment