Skip to main content

ಕವಿ ಸಾಹಿತಿ ಚಿತ್ರಕ್ಕೊಂದು ಕಥೆ ಮದುರ ಮೈತ್ರಿ



ಮಧುರ ಮೈತ್ರಿ

ಮೋಹನ ನ ಮನಸ್ಸು ತಾನು ಮದುರಾಳನ್ನು ಭೇಟಿಯಾದ ಸುಂದರ ಕ್ಷಣವನ್ನು ನೆನೆಯುತ್ತಾ ಆನಂದದಿಂದ ತುಂಬಿತ್ತು . ಎಂತಹ ಸೌಂದರ್ಯದ ಖನಿ ಆಕೆ ಮೊದಲ ನೋಟಕ್ಕೆ ತಾನು ಅವಳಿಗೆ ಸೋತು ಹೋಗಿದ್ದೆನಲ್ಲ ,ಪೇಟೆಯಲ್ಲಿ ಬೆಳೆದ ಹೆಣ್ಣಾದರೂ ಆಕೆಯದು ಅದೆಂತ ಮೋಹಕ ಕಾಂತಿ ,ನಯ,ವಿನಯ, ಹಳ್ಳಿಯ ತೋಟದ ಮನೆಯ ಹುಡುಗನೆನ್ನುವ ಕಾರಣಕ್ಕೆ ತಂದೆ ತಾಯಿಯರ ಜತೆ ಇರಲು ಒಪ್ಪದೆ ಅದೇ ನೆಪ ಮಾಡಿಕೊಂಡು ತನ್ನನ್ನು ನಿರಾಕರಿಸಿದ ಹೆಣ್ಣುಗಳೆಷ್ಟೋ .ತಾನೂ ಅಷ್ಟೇ ತನ್ನನ್ನು ಮಾತ್ರವಲ್ಲದೆ ತನ್ನ ತಂದೆ ತಾಯಿಯನ್ನು ಪ್ರೀತಿಸುವ ಹುಡುಗಿ ಸಿಗುವ ತನಕ ಮದುವೆಯೇ ಆಗುವುದಿಲ್ಲ ಎಂದು ನಿರ್ಧರಿಸಿದ್ದೆನಲ್ಲ .ಆದರೆ ಅದೊಂದು ದಿನ ಗೆಳೆಯನ ಮದುವೆಗೆ ಎಂದು ಹೋದ ತಾನು ಮದುಮಗಳ ಸ್ನೇಹಿತೆಯ ಮೋಹಪಾಶದಲ್ಲಿ  ಹೇಗೆ ಬಿದ್ದುಬಿಟ್ಟೆ ಎನ್ನುವುದೇ ತಿಳಿಯದಾಯ್ತು. ಗೆಳೆಯನಿಗೆ ಇದರ ಸುಳಿವು  ಸಿಕ್ಕಿ ಆತ ನಮ್ಮಿಬ್ಬರನ್ನು ಅಲ್ಲೇ ಹತ್ತಿರದ ಪಾರ್ಕಿಗೆ ಕರೆದೊಯ್ದು ಪರಿಚಯಿಸಿದ್ದ. ಆಗ ಆಕೆ ತನ್ನೆಡೆಗೆ ಬೀರಿದ ನೋಟ ನಂತರ ಅವಳು ಹೇಳಿದ ಆ ಮಾತು ತನ್ನನ್ನು ಸಂಪೂರ್ಣವಾಗಿ ಅವಳನ್ನು ಒಪ್ಪಿಕೊಳ್ಳುವಂತೆ ಮಾಡಿತ್ತು.ಅದರಂತೆ ಗೆಳೆಯನ ಮಧ್ಯಸ್ಥಿಕೆಯಲ್ಲಿ ನಮ್ಮಿಬ್ಬರ ಮದುವೆ ವಿಜೃಂಭಣೆಯಿಂದ ನೆರವೇರಿತ್ತು.
                ಅದೀಗ ತಾನೇ ನವ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗಳಾದ ಮಧುರ ಮತ್ತು ಮೋಹನ್ ವಧೂಗೃಹ ಪ್ರವೇಶದ ಕಾರ್ಯಕ್ರಮಗಳೆಲ್ಲಾ ಮುಗಿದ ಮೇಲೆ  ಏಕಾಂತವಾಡಲು ಬಯಸಿದರು. ಮೋಹನ್ ಅವಳನ್ನು  ತಮ್ಮ ಬಾಳೆಯ ತೋಟಕ್ಕೆ  ಕರೆದೊಯ್ಯುತ್ತಾನೆ.  ನೀಲಿ ಜುಬ್ಬಾ ಬಿಳಿಯ ಪಂಚೆಯುಟ್ಟು ನೀಟಾಗಿ ಬಾಚಿದ ಕ್ರಾಪ್ ಗಡ್ಡ ಮೀಸೆಯಿಂದ ಅಲಂಕೃತನಾದ ಚೆಲುವ ಮೋಹನ,  ಮೋಹಕ ರೂಪಿನ  ಮದುರಾಳ ಕೈ ಹಿಡಿದು ಕರೆದೊಯ್ಯುವಾಗ ,ಕೇಸರಿ ಜರಿ ಸೀರೆ ಅದಕ್ಕೊಪ್ಪುವ ನೀಲಿ ರವಿಕೆಯಲ್ಲಿ ಬಿಚ್ಚಿದ ಹೆರಳಿನ ಸುಂದರಿ ಮಧುರಾ ನಾಚಿಕೆಯಿಂದ ಕಣ್ಣು ಮುಖ ತಗ್ಗಿಸಿ ಮೋಹನನ ಕೈ ಮೇಲೆ ಕೈ ಇಟ್ಟು  ಉಟ್ಟ ಸೀರೆಯ ನೆರಿಗೆ ಚಿಮ್ಮಿಸುತ್ತ  ನಿಧಾನವಾಗಿ ಬಳುಕುತ್ತಾ  ಬರುವ ಚಂದವನ್ನು ಮೋಹನ ಕಣ್ಣು ತುಂಬಿಕೊಳ್ಳುತ್ತಾನೆ.ಇಂತಹ ಸೌಂದರ್ಯ ರಾಣಿ ತನ್ನವಳು ಎನ್ನುವ ಹೆಮ್ಮೆ ಆತನ ಮುಖದಲ್ಲಿ ಒಂದು ಸಣ್ಣನೆಯ ನಗುವನ್ನು ಮೂಡಿಸುತ್ತದೆ.  ಬದುಕು ತುಂಬಾ ಸುಂದರವಾಗಿ ಆತನಿಗೆ ಕಾಣಿಸುತ್ತದೆ.ಮದುರಾ ತನ್ನಿನಿಯನ ಮನದ ಭಾವವನ್ನು ಅರಿತು ನಸುನಗುತ್ತಾ ಅವನ  ಜತೆ ನಡೆದು ಬಂದಳು
                ಪಂಕಜಾ.ಕೆ. ಮುಡಿಪು
                ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...