ಗುರುಕುಲ ಉಡುಪಿ ಜಿಲ್ಲಾ ಘಟಕ ಸ್ಪರ್ಧೆಗಾಗಿ
ವಿಷಯ ..ಸಾಹಿತ್ಯ ಮತ್ತು ಬದುಕು
ಸಾಹಿತ್ಯ ಮತ್ತು ಬದುಕು ಒಂದಕ್ಕೊಂದು ಪೂರಕವಾಗಿದೆ. ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವೆಂದರೆ ತಪ್ಪಲ್ಲ. ಬದುಕು ಮತ್ತು ಬರಹ ಒಂದೇ ಆಗಿದ್ದರೆ ಮಾತ್ರ ಆ ಸಾಹಿತ್ಯ ಸತ್ವಯುತವಾಗಿರುತ್ತದೆ. ಹೇಳುವುದೇ ಒಂದು ಮಾಡುವುದೇ ಒಂದು ಎಂದಾಗಿದ್ದಾಗ ಅಂತಹ ಸಾಹಿತ್ಯ ಜನಮನವನ್ನು ಸೆಳೆಯದು. ಬದುಕು ಮತ್ತು ಸಾಹಿತ್ಯ ಒಂದೇ ತೆರನಾಗಿ ಇರುವ ಸಾಹಿತಿಯ ಬರಹಕ್ಕೆ ಅದರದೇ ಆದ ಸತ್ವವಿರುತ್ತದೆ. ನಮ್ಮ ಜೀವನದಲ್ಲಿ ಕಂಡಂತಹ ಅನುಭವ ನೋವು ನಿರಾಶೆ ಸುಖ ದುಃಖ ಗಳು ಸಾಹಿತ್ಯವಾಗಿ ಹೊರ ಹೊಮ್ಮಿ ನಮ್ಮನ್ನು ನೋಯಿಸಿದವರಿಗೆ ಅದು ತಟ್ಟುವಂತಿರಬೇಕು..
ಮಾನವೀಯ ಮೌಲ್ಯಗಳನ್ನು ಸಾಹಿತ್ಯದಲ್ಲಿ ಸೇರಿಸುವುದರಿಂದ ಸಾಹಿತ್ಯವು ಸತ್ವಭರಿತವಾಗಿ ಮೌಲ್ಯಯುತ ಬರಹವಾಗುತ್ತದೆ. ಸಾಹಿತ್ಯವು ಸಮಾಜಕ್ಕೆ ಕನ್ನಡಿ ಇದ್ದಂತೆ. ಸಮಾಜದ ವ್ಯಕ್ತಿಗಳ ನಡೆ ನುಡಿ ಇತ್ಯಾದಿಗಳನ್ನು ತಿದ್ದುವ ಕೆಲಸ ಉತ್ತಮ ಸಾಹಿತ್ಯದಿಂದ ಸಾಧ್ಯ . ಸಾಹಿತ್ಯದಲ್ಲಿ ಇರುವುದು ಮನುಷ್ಯನ ಜೀವನದ ಕಥೆ. ಓದುವ ಬರೆಯುವ ಮೂಲಕ ಬದುಕು ರೂಪಿಸಿಕೊಳ್ಳಬಹುದು. ಸಾಹಿತ್ಯ ಬದುಕಿನ ಬಾಗವಾಗಿದ್ದಂತೆ ಬದುಕೂ ಸಾಹಿತ್ಯದ ಒಂದು ಬಾಗವೇ ಆಗಿದೆ. ವರಕವಿ ಕುಬೆಂಪು, ರಾಮಕೃಷ್ಣ ಪರಮಹಂಸ, ವಿವೇಕಾನಂದ ಇವರೆಲ್ಲರ ಸಾಹಿತ್ಯವು ಬದುಕಿಗೆ ಹತ್ತಿರವಾಗಿದೆ ದಾಸರ ಪದಗಳು ,ಶರಣರ ವಚನಗಳು, ತ್ರಿಪದಿಗಳು, ಮಂಕು ತಿಮ್ಮನ ಕಗ್ಗ ಇವೆಲ್ಲವೂ ಬದುಕಿಗೆ ಜನಮಾನಸಕ್ಕೆ ಹಿಡಿದ ಕನ್ನಡಿಯಾಗಿದೆ ಜನಪದ ಸಾಹಿತ್ಯವಂತೂ ಬದುಕಿನ ನೋವು ನಲಿವುಗಳನ್ನು ಅಂದಂದಿನ ಘಟನೆಗಳನ್ನು ಹಾಡಿ ಕಟ್ಟಿದ ಅದ್ಬುತ ಸಾಹಿತ್ಯವಾಗಿದ್ದು ,ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ ಇದರಷ್ಟು ಶ್ರೀಮಂತ ಸಾಹಿತ್ಯ ಬೇರೊಂದಿಲ್ಲ.ಒಟ್ಟಿನಲ್ಲಿ ಹೇಳುವುದಾದರೆ ಬದುಕನ್ನು ಬಿಟ್ಟು ಸಾಹಿತ್ಯವಿಲ್ಲ ಸಾಹಿತ್ಯವನ್ನು ಬಿಟ್ಟು ಬದುಕಿಲ್ಲ .ಆದ್ದರಿಂದ ಸಾಹಿತ್ಯ ಸರಸ್ವತಿಯ ಸೇವೆಯನ್ನು ಆದಷ್ಟು ನಾವೆಲ್ಲಾ ಮಾಡಿ ಸಾಹಿತ್ಯಮತ್ತು ಬದುಕನ್ನು ಶ್ರೀಮಂತವಾಗಿಟ್ಟು ಮುಂದಿನ ಜನಾಂಗಕ್ಕೆ ಮಾದರಿಯಾಗಬೇಕು.
ಪಂಕಜಾ.ಕೆ. ಮುಡಿಪು.ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಶ್ರೀ ಗಣೇಶ ಕೃಪಾ.ಮುಡಿಪು .ಕುರ್ನಾಡು.ದ.ಕ.574153 ಮೊಬೈಲ್ ನಂಬರ್ 9964659620
Comments
Post a Comment