Skip to main content

31..1..2021 ಗುರುಕುಲಾ ಕಲಪ್ರತಿಷ್ಠಾನಕ್ಕೆಕಳಿಸಿದ ಕವನಗಳು

[31/01, 12:07 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ  ಚಿಕ್ಕಮಗಳೂರು
ವಾರಕ್ಕೊಂದು ಸ್ಪರ್ಧೆಗಾಗಿ
 ವಚನ
ದತ್ತಪದ..ರೈತ

ಶೀರ್ಷಿಕೆ ..ಕಾಯಕಯೋಗಿ

ರೈತ ನಮ್ಮ ಅನ್ನದಾತನಯ್ಯ
ಕಾಯಕಯೋಗಿ ಇವನಯ್ಯ
ದೇಶದ  ಬೆನ್ನೆಲುಬೇ ಇವನಯ್ಯ
ರೈತನಿದ್ದರೆ ಬಾಳು ಹಸನಯ್ಯ
ಜಗದ ಜನರಿಗೆ ಅನ್ನವನುಣಿ ಸುವ 
ಮಾಹಾತ್ಮನಿವ ಪಂಕಜಾರಾಮ

ಶ್ರೀಮತಿ ಪಂಕಜಾ .ಕೆ. ಮುಡಿಪು
[31/01, 3:15 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಚಾಮರಾಜನಗರ ಘಟಕ 
ವಾರಕ್ಕೊಂದು ಸ್ಪರ್ಧೆಗಾಗಿ 
ಪದ್ಯಬರೆಯುವ ಸ್ಪರ್ಧೆ
ವಿಷಯ.. ಹಳ್ಳಿಯ ಸೊಗಡು

ಶೀರ್ಷಿಕೆ..ನಮ್ಮ ಹೆಮ್ಮೆ ನಮ್ಮ ಹಳ್ಳಿ

ಹಳ್ಳಿಯ ಸೊಗಡಿನ ಸುಂದರ  ತಾಣದಿ
ನಲಿಯುವ ಮನೆಯಲಿ ನಾನಿರುವೆ
ಸುತ್ತಲೂ ಹರಿಯುವ ನೀರಿನ ತೊರೆಯಲಿ
ಈಜುವ ಮಜವನು ನಾ ಪಡೆದೆ

ಜುಳು ಜುಳು ಹರಿಯುವ ಮಂಜುಳ ನಾದಕೆ
ಮೈಮನ ಮರೆಯುತ  ನಾ ನಲಿದೆ
ಹಕ್ಕಿಗಳಿಂಚರ ತುಂಬಿದ ಪರಿಸರ
ಮುದವನು ತಂದಿತು ಬಾಳಿನಲಿ

ಹಸಿರಿನ ಕಾಡಲಿ ಅರಳಿದ ಹೂಗಳು
ಪರಿಮಳ ಬೀರುತ ನಲಿಯುತಿದೆ
ರಸಿಕರ ಮನವನು ಸೆಳೆಯುವ ನೋಟವು
ಚೆಲುವಿನ  ತಾಣಕೆ ಮನಸೋತೆ

ಗುಡ್ಡಬೆಟ್ಟಗಳ ಸುಂದರ ನೋಟ
ಮೈಮನ ಮರೆಸುವ ಕುಳಿರ್ಗಾಳಿ
ಹಸಿರಿನ ಸೆರಗನು ಹಾಸುತಲಿರುವ
ಪ್ರಕೃತಿಯ ಚೆಲುವಿಗೆ ಬೆರಗಾದೆ

ಗದ್ದೆಯ ಬಯಲಲಿ ಎತ್ತುಗಳ ಜತೆಯಲಿ
ಓ ಬೇಲೆ ಹಾಡುತ ದುಡಿಯುವ ಆ ದೃಶ್ಯ
ಎತ್ತಿನ ಕೊರಳಿನ ಗಂಟೆಯ ನಾದವು
ಮನದಲಿ ತುಂಬಿತು ಉಲ್ಲಾಸ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.574153
[31/01, 3:24 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ತುಮಕೂರು
ವಾರಕ್ಕೊಂದು ಸ್ಪರ್ಧೆಗಾಗಿ
ಚುಟುಕುಗಳು
ದತ್ತಪದ. ವಾತ್ಸಲ್ಯ   ಮತ್ಸರ

1  ಶೀರ್ಷಿಕೆ  ..  ತಾಯಿ

ಪ್ರತ್ಯಕ್ಷ ದೇವರೇ ತಾಯಿಯು
ಮಮತೆ ವಾತ್ಸಲ್ಯದ ಮೂರ್ತಿಯು
ಮಕ್ಕಳಿಗಾಗಿ ಜೀವ ತೇಯುವವಳು
ಎಲ್ಲರ ಒಳಿತಿಗಾಗಿ ದುಡಿಯುವವಳು

2.. ಹೊಟ್ಟೆಕಿಚ್ಚು

ಇತರರ ಏಳ್ಗೆ ಕಂಡು ಮತ್ಸರ ಪಡುವರು
ತಮ್ಮ ತನವನ್ನು ಮರೆತು ಬಿಡುವರು
ಸಲ್ಲದ ಕಥೆ ಕಟ್ಟುತ ತಿರುಗುವರು
ಹೊಟ್ಟೆಕಿಚ್ಚು ತನ್ನನ್ನೇ ಸುಡುವುದೆಂದು ತಿಳಿಯದವರು

ಶ್ರೀಮತಿ.ಪಂಕಜಾ.ಕೆ. ಮುಡಿಪು 
ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[31/01, 3:37 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ಧಾರವಾಡ
ವಾರಕ್ಕೊಂದು ಸ್ಪರ್ಧೆಗಾಗಿ

ದೇಶಭಕ್ತಿಗೀತೆ

ನನ್ನ ದೇಶ ಭಾರತ

ಭಾರತಾಂಬೆಯುದರದಲಿ ಹುಟ್ಟಿ ಬೆಳೆದ ವೀರರೇ
ಕ್ಷಾತ್ರ ತೇಜ ತುಂಬಿ ತುಳುಕಿ ಮೆರೆಯುತಿರುವ ಧೀರರೇ
ತಾಯಿ ಬಾರತಿಯ ಮಾಡಿಲಲಾಡುವ ಮಕ್ಕಳೇ
ಭಾರತಾಂಬೆಯ  ರಕ್ಷಣೆಗೆ ಫಣವ ತೊಡುವ ಚಿಣ್ಣರೇ

ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲಾ ಒಂದುಗೂಡಿ ಬಾಳುವ
 ಭಾರತಾಂಬೆಯ ಮಕ್ಕಳೆಂಬ ಹೆಮ್ಮೆ ಮನದಲಿ ತಾಳುವ
ಗಡಿಯ ಎಡೆಯಲಿ ನುಸುಳುತಿರುವ ವೈರಿಗಳ ಸದೆಬಡಿಯುವ
ದಾಳಿಕೋರರ ಹುಟ್ಟು ಅಡಗಿಸಿ ನಮ್ಮ ದೇಶವ ರಕ್ಷಿಸುವ

ಎಲ್ಲೇ ಇರಲಿ ಹೇಗೇ ಇರಲಿ ನಾವು ಭಾರತೀಯರು
ಮೈಯ  ಕಣಕಣದಲ್ಲಿ ಹರಿಯಲಿ ದೇಶಾಭಿಮಾನದ ಬೆವರು
ಪ್ರಜಾತಂತ್ರ ರಾಜ್ಯವಿರುವ ದೇಶ ನಮ್ಮದು ಭಾರತ
ಪ್ರಜೆಗಳಿಂದ ಪ್ರಜೆಗಳಿಗಾಗಿಯೇ ಇರುವ ದೇಶ ಭಾರತ

ದಮನಿ ದಮನಿಗಳಲ್ಲಿ ಹರಿಯಲಿ ದೇಶಪ್ರೇಮದ ರಕ್ತವು
ದೇಶ ನಮ್ಮದು ಎಂಬ ಅಭಿಮಾನ ತುಂಬಿ ತುಳುಕಲಿ ನಿತ್ಯವೂ
ತಾಯ ಸೆರಗನು ಎಳೆಯುತಿರುವ ದುರುಳರನು ಸದೆ ಬಡಿಯುವ
ಭಾರತಾಂಬೆಯ ಹಿರಿಮೆಯನ್ನು ಜಗದೆಲ್ಲೆಡೆ ಹರಡುವ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು .ದ.ಕ
[31/01, 3:51 PM] pankajarambhat: .ಧಾರವಾಡ ಯುವ ಬರಹಗಾರರ ಒಕ್ಕೂಟ
ಚಿತ್ರ ಕವನ  ಸ್ಪರ್ಧೆಗಾಗಿ

ಮನೆ ಬೆಳಗುವ ಜ್ಯೋತಿ

ಚಂದದ ಚೆಲುವೆಯ ಅಂದದ ಮೊಗದಲಿ
ಸುಂದರ ನಗೆಯು ಅರಳಿಹುದು
ಕಣ್ಣಿನ ನೋಟವು ಕೆಣಕುತ ಲಿರಲು
ಮನದಲಿ ಮೂಡಿತು ಚೆಲು ಕನಸು

ಮೂಗಲಿ ತೂಗಿದ ಮುತ್ತಿನ ನತ್ತು
ಹಣೆಯಲಿ ಮಿನುಗಿದ ಚೆಲುಬೊಟ್ಟು
ಚೆಲುವೆಯ ವದನದ ಸೌಂದರ್ಯಕೆ
ಪುಟವನು ಇಡುತಲಿ ನಲಿದಿಹುದು

ಉಟ್ಟ ಸೀರೆಗೆ ಹೊಂದುವ ಅಭರಣವ ತೊಟ್ಟು
ಕೈಯಲಿ ದೀಪವ ಹಿಡಿದಿಹಳು
ಅರೆತೆರೆದಿರುವ ಬಾಗಿಲ ಎಡೆಯಲಿ
ದೀಪದ ಜ್ಯೋತಿಯು ಬೆಳಗುತಿದೆ

ಮನೆ ಮನವನು ಬೆಳಗುವ ಹಣತೆ ಯ 
ಉರಿಸುತ ಬಂದಿಹಳು ಚೆಲು ತರುಣಿ
ದೇವರ ಎದುರಲಿ ದೀಪವನಿಟ್ಟು
ಎಲ್ಲರ ಒಳಿತಿಗೆ ಬೇಡುವಳು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ ಮಾಸ್ಟರ್. ಕುರ್ನಾಡು ದ ಕ
[31/01, 6:41 PM] pankajarambhat: ಗುರುಕುಲಾ ಕಲಾ ಪ್ರತಿಷ್ಠಾನ 
ಜಿಲ್ಲಾಘಟಕ ಕೊಡಗು
ವಾರಕ್ಕೊಂದು ಸ್ಪರ್ಧೆಗಾಗಿ
ನ್ಯಾನೊ ಕಥೆ
ವಿಷಯ..ಸದ್ಭಾವನೆ

     ಅನಾಥೆ

ಅನಾಥಳಂತೆ ಭಿಕ್ಷೆ ಬೇಡುತ್ತಿದ್ದ ಆಕೆಯನ್ನು ಕಂಡ ಚಿನ್ಮಯಿ, ಅವಳ ಕತೆಯನ್ನು ಕೇಳಿ ಮನನೊಂದು ಸದ್ಭಾವನೆಯಿಂದ  ತನ್ನ ಮನೆಗೆ ಕರೆದೊಯ್ಯುತ್ತಾಳೆ. ಇದನ್ನು ಕಂಡ ಅವಳ ತಂದೆ ಮಹೇಶ್ ಸಿಡಿಮಿಡಿಗೊಳ್ಳಬೇಕೆಂದಿದ್ದಾಗ ,ವೃದ್ಧೆಯ ಬಾಯಿಂದ ಬಂದ ಮಗ ಎನ್ನುವ ಮಾತಿಗೆ ಚಲಿಸಿ ಹೋಗಿ ಕಣ್ಣಲ್ಲಿ ನೀರು ತುಂಬಿಕೊಂಡು ವೃದ್ಧೆಯ  ಕಾಲಿಗೆ ಬಿದ್ದು ಕ್ಷಮೆಯಾಚಿಸಿದ .

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಕುರ್ನಾಡು ದ ಕ
[31/01, 7:00 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ಶಿವಮೊಗ್ಗ
ವಾರಕ್ಕೊಂದು  ಸ್ಪರ್ಧೆಗಾಗಿ

 ಭಾವಗೀತೆ

ವಸಂತಮಾಸ

ವಸಂತಮಾಸದಿ ಮಾಮರದಲ್ಲಿ
ಕೋಗಿಲೆ ರಾಗದಲಿ ಹಾಡುತಿದೆ
ಕೋಗಿಲೆ ಹಾಡಿನ ಇಂಚರ ತುಂಬಿ
ಮೈಮನವೆಲ್ಲಾ ಅರಳುತಿದೆ

ಅರಳಿದ ಹೂಗಳ ಗಂಧವು ಹಬ್ಬಿ
ಮನಕೆ  ಮುದವನು  ತುಂಬುತಿದೆ
ಹಕ್ಕಿಗಳಿಂಚರ ಕಿವಿಗಳ ತುಂಬಿ
ಕನಸಿನಲೋಕಕೆ ಸಾಗುತಿದೆ

ಮನದಲಿ ತುಂಬಿದ ಬೇಸರ ಕಳೆದು
ಹಿಗ್ಗಿನ  ಬುಗ್ಗೆಯು ಉಕ್ಕುತಿದೆ
ಇನಿಯನ ನೆನಪದುಮನದಲಿ ನುಸುಳಿ
ಲಜ್ಜೆಯು  ಮೈ ಮನದಲಿ ತುಂಬುತಿದೆ

ಮೂಡಣದಲ್ಲಿ ಮೂಡುವ ರವಿಯು
ಬಾಳಿಗೆ ರಂಗನು ತುಂಬುವನು
ಚೆಲುವಿನ ಬಣ್ಣವ ಬಾನಲಿ ಕಲಸಿ
ಕನಸನು ಮನದಲಿ ಬಿತ್ತುವನು

ಪಂಕಜಾ.ಕೆ.ಮುಡಿಪು
 ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ.
[31/01, 8:16 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಅಂತರರಾಜ್ಯ ಘಟಕ ಬ್
ವಾರಕ್ಕೊಂದು ಸ್ಪರ್ಧೆಗಾಗಿ
ಭಾವಗೀತೆ
 ದತ್ತಪದ..ಒಲವು

ಒಲವಗಾನ
 
ಮಧುರ ಮಾತಲಿ ಮನವ ಸೆಳೆಯುತ
ಒಲಿಸಿಕೊಂಡನು ಮಾಧವ
ಮೋಹನಾಂಗನ ಒಲವಗಾನಕೆ
ಸೋತು ಹೋದಳು ರಾಧೆಯು

ಒಲವ ಬಲೆಯಲಿ ಕೆಡವುತಿರುವನು
ಕಣ್ಣನೋಟದಿ ಬಂಧಿಸಿ
ತರಳೆ ಸೋತಳು ಒಲವಿನಾಟಕೆ
ಬಯಕೆ ಮನದಲಿ ತುಂಬಿಸಿ

ಚೆಲುವ ಕನಸನು ಮನದಿ ಮೂಡಿಸಿ
ಮನವ ತಣಿಸಿದ ಕೇಶವ
ಕೊಳಲ ಗಾನವ  ಕೇಳುತಿರಲು
ಮನದಿ  ತುಂಬಿತು  ಹರುಷವು

ಒಲವು ತುಂಬಿದ ನಿನ್ನ ಒಡನಾಟದಲಿ
ರಾತ್ರಿ ಹಗಲು ತಿಳಿಯದಂತ ಬಂಧುರ
ವಿರಹ ತಾಳದೆ ಮನಸು ನೊಂದಿದೆ
ಕೇಳಲಾರೆಯ ನನ್ನ  ಮೊರೆಯನು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...