ಖಿದ್ಮಾ ಪೌಂಡೇಶನ್ ಕರ್ನಾಟಕ
ಕಿರುಲೇಖನ ಸ್ಪರ್ಧೆಯಲ್ಲಿ ಮೆಚ್ಚುಗೆ
ವಿಷಯ ಮಡಿವಾಳ ಮಾಚಿದೇವರು
ಬಿಜಾಪುರ ಜಿಲ್ಲೆಯ ಹಿಪ್ಪರಗಿಯಲ್ಲಿ ಪರುವತಯ್ಯ ಮತ್ತು ಸುಜ್ಞಾನವ್ವ ದಂಪತಿಗಳ ಪುತ್ರರಾಗಿ ಜನಿಸಿದ ,ಶರಣ ಮಡಿವಾಳ ಮಾಚಿದೇವರು ಒಬ್ಬರು ಅವತಾರ ಪುರುಷರು. ವೀರ ಭದ್ರ ದೇವರ ಅವತಾರವೆಂದು ಪರಿಗಣಿಸಲಾದ ಇವರು ಹುಟ್ಟಿನಿಂದ ಮಾಡಿವಾಳರಾಗಿದ್ದರೂ,ಜ್ಞಾನಿಯಾಗಿದ್ದರು. ಕಾಯಕವೇ ಕೈಲಾಸ ಎಂದು ದೃಢವಾಗಿ ನಂಬಿದ ಇವರು ತಮ್ಮ ಕಾಯಕ ನಿಷ್ಠೆಗೆ ಹೆಸರುವಾಸಿಯಾಗಿದ್ದರು. ಶಿವಶರಣರ ಮೈಲಿಗೆ ಬಟ್ಟೆಗಳನ್ನು ಮಡಿ ಮಾಡುವ ಕಾಯಕ ಇವರದಾಗಿತ್ತು.ಸೋಮಾರಿಗಳ, ಬಡವರನ್ನು ಶೋಷಿಸುವವರ , ದುರ್ಗುಣಿಗಳ, ಬಟ್ಟೆಗಳನ್ನು ಇವರು ಮುಟ್ಟುತ್ತಿರಲಿಲ್ಲ.
ಧರ್ಮದ ರಕ್ಷಣೆ ,ವಚನ ಸಾಹಿತ್ಯದ ರಕ್ಷಣೆಯ ಹೊಣೆ ಹೊತ್ತು ಶಿವ ಶರಣರ ಭೀಮರಕ್ಷೆಯಾಗಿ ನಿಂತ ಇವರು ಹಲವಾರು ಪವಾಡಗಳನ್ನು ಮಾಡಿದ್ದು ದೈವಾಂಶ ಸಂಭೂತರಾಗಿ , ಜನಮಾನಸದಲ್ಲಿ ಅಪಾರ ಗೌರವವನ್ನು ಪಡೆದುಕೊಂಡಿದ್ದರು. 12 ನೆ ಶತಮಾನದಲ್ಲಿ ಶೋಷಣೆಗೆ ಒಳಗಾದ ದುರ್ಬಲರ ಮೇಲುಕೀಳು ತಾರತಮ್ಯ ಅಸ್ಪೃಶ್ಯತೆ ,ಮೂಢನಂಬಿಕೆಗಳ ನಿವಾರಣೆಗಾಗಿ ಇವರು ಸಾಮಾಜಿಕ ಕ್ರಾಂತಿ ಕೈ ಕೈಗೊಂಡರು. ಶಿವ ಭಕ್ತರಾಗಿದ್ದ ಇವರು ಬಸವಣ್ಣನವರ ತತ್ವಾದರ್ಶಗಳಿಗೆ ಬದ್ಧರಾಗಿದ್ದು, ಹಲವಾರು ವಚನಗಳನ್ನು ರಚಿಸಿ ಜನಪ್ರಿಯ ವಚನಕಾರರೆಂದು ವಿಶ್ವಮಾನ್ಯರಾದರು.
ಶ್ರೀಮತಿ .ಪಂಕಜಾ.ಕೆ. ಮುಡಿಪು ಕುರ್ನಾಡು ದಕ.
Comments
Post a Comment