Skip to main content

ಕನ್ನಡ ಕವಿಗುಚ್ಛ

[7/12/2020, 3:59 PM] pankajarambhat: ಕನ್ನಡಕವಿಗುಚ್ಛ   

ಚುಟುಕು ಸ್ಪರ್ಧೆಗಾಗಿ

ವಿಷಯ..ಜೀವನವೆಂಬ ಪುಸ್ತಕದಲ್ಲಿ

      ಶೀರ್ಷಿಕೆ.. ಹೆಸರು ಉಳಿಸಿ
      
ಜೀವನವೆಂಬ ಪುಸ್ತಕದಲ್ಲಿ
ನೋವು ನಲಿವುಗಳೆಂಬ ಹಾಳೆಗಳಲ್ಲಿ
ಬರೆದಿಟ್ಟ ಸುವರ್ಣಾಕ್ಷರದ ಪುಟಗಳಲ್ಲಿ
ಹೆಸರನ್ನು ಉಳಿಸುತ್ತಾ ಬಾಳಿ ಬದುಕಿರಿಲ್ಲಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.
[7/12/2020, 11:31 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೦೭.೧೨.೨೦೨೦*
*ವಾರ* *ಸೊಮುವಾರ*

*ಇಂದಿನ ವಿಷಯ* *ಜೀವನದ ಪುಸ್ತಕದಲ್ಲಿ*
*ಕವನದ ಪ್ರಕಾರ* *ಚುಟುಕು*

*ಇಂದಿನ ಸ್ಪರ್ಧಿಗಳ ಸಂಖ್ಯೆ* *೮೯*

*ತಿರ್ಪುಗಾರರು* *ಸಾಗರ್ ಕುಲಕರ್ಣಿ* *ಪ್ರಧಾನ ನಿರ್ವಾಹಕರು*

*ವಿಜೇತರು*

*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ದಿನಕರ ನಂದಿ ಚಂದನ್*
*ಮಾಲತೇಶ್.ಕೃ.ಕುಲಕರ್ಣಿ*
*ಶ್ರೀಮತಿ ಜಯಶ್ರೀ ಜೋಷಿ*
🏆🏆🏆🏆🏆🏆🏆🏆🏆

*ಅತ್ಯುತ್ತಮ ಸ್ಥಾನ*
*ಮೊಗೇರಿ ಶೇಖರ್ ದೇವಾಡಿಗ*
*ಮುತ್ತಣ್ಣ.ಶ.ಭಾವಿ*
*ಶ್ರೀಷಡ್ಯಜ.ಎಸ್*
👑👑👑👑👑👑👑👑👑

*ಉತ್ತಮ ಸ್ಥಾನ*
🎖️🎖️🎖️🎖️🎖️🎖️🎖️🎖️🎖️
*ವಿಂಧ್ಯಾ.ಎಸ್.ರೈ*
*ಕೆ.ಗೋವಿಂದ ಭಟ್*
*ಮನು.ಎಂ.ಎಚ್*
🎖️🎖️🎖️🎖️🎖️🎖️🎖️🎖️🎖️

*ಸಮಾಧಾನಕರ ಸ್ಥಾನ*
☘️☘️☘️☘️☘️☘️☘️☘️☘️
*ಪ್ರಶಾಂತಗೌಡ.ಗಾಳಿ*
*ಶ್ರೀಮತಿ ಪಂಕಜಾ.ಕೆ.ಮುಡಿಪು*
*ಕನಕ್ ತೆಂಗಿನಗುಂಡಿ*
☘️☘️☘️☘️☘️☘️☘️☘️☘️
*ಮೆಚ್ಚುಗೆ ಸ್ಥಾನ*
🏅🏅🏅🏅🏅🏅🏅🏅🏅
*ನಿಮ್ಮ ತಿಮ್ಮ*
*ವರ್ಷಿತಾ.ಜಿ.ಎಸ್*
*ಸುಧಾ.ಉ.ಸೊರಟಿ*
🏅🏅🏅🏅🏅🏅🏅🏅🏅
🌹🌹🌹🌹🌹🌹🌹🌹🌹

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗು ಸದಸ್ಯರಿಂದ ಅಭಿನಂದನೆಗಳು*
🏆🏆🏆🏆🏆🏆🏆🏆🏆
👑👑👑👑👑👑👑👑👑
🌹🌹🌹🌹🌹🌹🌹🌹🌹
[8/12/2020, 6:03 PM] pankajarambhat: ಕನ್ನಡಕವಿಗುಚ್ಛ 

ಹನಿಕವನ ಸ್ಪರ್ಧೆಗಾಗಿ

ವಿಷಯ .ಜೇನುಗೂಡು

ಶೀರ್ಷಿಕೆ.   ಒಗ್ಗಟ್ಟಿನ ಪಾಠ

ಒಗ್ಗಟ್ಟಿನ ಪಾಠ ಕಲಿಯಬೇಕು
ಜೇನು ಗೂಡಿನಂತಿರಬೇಕು
ಕುಸಿದಾಗ ಸಾಂತ್ವನಕೆ ಹೆಗಲು ಬೇಕು
ನಿಸ್ವಾರ್ಥಮನೋಭಾವವಿರಬೇಕು
ಹೊಂದಾಣಿಕೆಯಿಂದ ಜೀವಿಸಬೇಕು
ಸುಖೀ ಜೀವನಕ್ಕೆ  ಇಷ್ಟಿದ್ದರೆ ಸಾಕು

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[9/12/2020, 5:59 PM] pankajarambhat: ಕನ್ನಡಕವಿಗುಚ್ಛ 
 ಕವನ ಸ್ಪರ್ಧೆಗಾಗಿ
 
.ಅಣ್ಣ ತಂಗಿ ಪ್ರೇಮ ಕವನ

ವಿಷಯ ..ಅಣ್ಣನ ಪ್ರೀತಿ
 

ರಕ್ಷಾ ಬಂಧನ

ಅಣ್ಣ ತಂಗಿಯರ ಪವಿತ್ರ ಬಂಧ
ಎಂದೆಂದೂ ಅಳಿಯದ ಈ ಬಂಧ
ತಂಗಿಗೆ ಅಣ್ಣನ ರಕ್ಷಣೆಯ ಬಲ
ಮನಕೆ ಕೊಡುವುದು ಆತ್ಮಬಲ

ರಂಗು ರಂಗಿನ ರಾಖಿಯ ಕಟ್ಟಿ
ತಿಲಕವನಿಟ್ಟು ಆರತಿ ಎತ್ತಿ
ಸಿಹಿಯನು ಉಣಿಸುತಲವಳು
ಶುಭವನು ಅಣ್ಣನಿಗೆ ಹಾರೈಸುವಳು

ಅಣ್ಣ ತಂಗಿಯರ ಪ್ರೇಮ
ಇದಕಿಲ್ಲ ಯಾವುದೇ ನೇಮ
ಅಣ್ಣನ ಪ್ರೀತಿಯ ಭರವಸೆಯಲಿ
ತಂಗಿಯ ಬಾಳು ಭದ್ರತೆಯಲಿ

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು ದಕ
[10/12/2020, 6:14 PM] pankajarambhat: ಕನ್ನಡಕವಿಗುಚ್ಛ 

ಹಾಸ್ಯಗವನ ಸ್ಪರ್ಧೆಗಾಗಿ

ವಿಷಯ.. ನಗುವುದೇ ಸ್ವರ್ಗ

ಶೀರ್ಷಿಕೆ....ಮೋಹಿನಿ

ಪೇಟೆಗೆ ಹೋದ ಗುಂಡನು ಬರಲು ರಾತ್ರಿಯು ಆಗಿತ್ತು
ಅಮಾವಾಸ್ಯೆಯ ಕಡು ಕತ್ತಲದಿನವದು ಮನದಲಿ ಭಯವಿತ್ತು  
ಸರಪರ ಎನ್ನುವ ಶಬ್ದವು ಕೇಳಲು ಗುಂಡನು ಭಯಪಟ್ಟ
ಮೆಲ್ಲನೆ ಹಿಂದಕೆ ತಿರುಗುತ ಭಯದಲಿ ನೋಡಿದನು

 ಹಾರುವ ಬಿಳಿ ಬಟ್ಟೆಯು  ಕಾಣಲು  ಮೈಯಲಿ ನೀರದು ಇಳಿದಿತ್ತು
ಭಯದಲಿ ಹೊಡೆಯುವ ಎದೆಯನು ಕೈಯಲಿ ಹಿಡಿದು
ಒಂದೇ ಉಸಿರಿಗೆ ಓಡಿದ ಮನೆಯೆಡೆಗೆ 
ಬೆಳಗಿನ  ಜಾವ ಜ್ವರದಲಿ ನರಳುತ ತಿಳಿಸಿದ ವಿಷಯವನು
 
ಎಲ್ಲರೂ ಸೇರಿ ಹೋಗಲು ಕಂಡಿತು ಶಲ್ಯದ ತುಂಡೊಂದು
ಗಾಳಿಗೆ ಹಾರಿದ ಗುಂಡನ ಶಲ್ಯವ ಕಂಡು ನಕ್ಕರು ಆ ಜನರು
ಗುಂಡನ ಮುಖದಲು ನಗುವದು ಸುಳಿದು ಜ್ವರವದು ಬಿಟ್ಟಿತ್ತು
ನಗುವುದೇ ಸ್ವರ್ಗ ಎನ್ನುತ ಎಲ್ಲರೂ ತೆರಳಿದರು ಮನೆಕಡೆಗೆ

ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[11/12/2020, 6:53 PM] pankajarambhat: ಕನ್ನಡಕವಿಗುಚ್ಛ 
ಸ್ಪರ್ಧೆಗಾಗಿ  

ತ್ರಿಪದಿ ಕವನ

ದತ್ತಪದ.. ಕಲ್ಲಿನದೇವರು

           ಭಕ್ತಿ
           
ಭಕ್ತಿಯು ಇಲ್ಲದೆ ಪೂಜೆಯಮಾಡಿ
ಹಾಲು ಹಣ್ಣನು ಅರ್ಪಿಸಿದರೆ 
ಕಲ್ಲಿನ  ದೇವರು ಒಲಿಯುವನೆ

ಭಕ್ತಿಯು ಮನದಲಿ ತುಂಬಿರಲು
ಕಲ್ಲಲೂ ದೇವರು ಕಾಣುತ
ಮನದಲಿ ಶಾಂತಿಯು ನೆಲೆಸುವುದು

ಕಣ್ಣಿಗೆ ಕಾಣುವ ದೇವರು ಎಂದರೆ
ನಮ್ಮಯ ಹೆತ್ತು ಸಾಕಿದವರು
ಕಾಣಿರಿ ಅವರಲಿ ದೇವರನು

ಪಂಕಜಾ.ಕೆ. ಮುಡಿಪು 
ಕುರ್ನಾಡು ದಕ
[12/12/2020, 6:01 PM] pankajarambhat: ಕನ್ನಡಕವಿಗುಚ್ಛ 
ಷಟ್ಪದಿ ರಚನಾ ಸ್ಪರ್ಧೆಗಾಗಿ
ವಿಷಯ....ವನದೇವತೆ

  ಬೇಡಿಕೆ

ಮುದದಿ ಹಾಡುವ ರಾಗ ಕೇಳುತ
ತರುಣಿ ನಿಂತಳು ಕನಸು ಕಾಣುತ
ಭರದಿ ಬರುವನು ಚೆಲುವ ರಾಯನು ತನ್ನ ಒಲಿಸಲಿಕೆ
ಕರದಿ ಹಿಡಿದಿಹ ತರುಲತೆಗಳ
ಭರದಿ ನೋಡುತ  ನಲಿಯುತಿರುವಳು
ತರುಣಿ ಕಾಡಿನ ವನದ ದೇವತೆಯನು ಬೇಡಿಕೊಳ್ಳುತಲಿ

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[13/12/2020, 6:23 PM] pankajarambhat: ಕನ್ನಡಕವಿಗುಚ್ಛ 

ಚಿತ್ರಕವನ  ಸ್ಪರ್ಧೆಗಾಗಿ

ಅನ್ನದಾತ
     *~~~~~~~~~~*  
ಮಳೆ ಬಿಸಿಲೆನ್ನದೆ ಚಳಿಯನು ಗಣಿಸದೆ  
ಗದ್ದೆಯ ಕೆಸರಲಿ ದುಡಿಯುವನು | 
ಹೊಲವನು ಉಳುತಲಿ ಬೀಜವ ಬಿತ್ತುತ  
ನೇಜಿಯು ಮೊಳೆಯಲು ಕಾಯುವನು ||

ಕಷ್ಟವ ಗಣಿಸದೆ ನಷ್ಟಕೆ ಹೆದರದೆ  
ಇಷ್ಟದ ಕಾಯಕ ಮಾಡುವನು | 
ಸುಗ್ಗಿಯ ಕಾಲದಿ ಸಡಗರದಿಂದಲಿ 
ಹಿಗ್ಗುತ ಭೂಮಿಗೆ ನಮಿಸುವನು ||  

ಕಾಯಕವೆಂದರೆ ದೇವರು ಎನ್ನುತ  
ಬೆವರಿನ ಫಲವನು ಗಳಿಸುವನು | 
ನೇಗಿಲಯೋಗಿಯು ಅನ್ನವ ನೀಡುತ  
ದೇಶದ ಹಸಿವನು ತಣಿಸುವನು || 

ನಮಿಸುವ ಗೆಳೆಯರೆ ದುಡಿಯುವ ರೈತಗೆ  
ಅನುದಿನ ಅನ್ನವ ಕೊಡುವವಗೆ |  
ಮೈಯನು ಬಗ್ಗಿಸಿ ದೇಹವ ಕುಗ್ಗಿಸಿ  
ಛಲದಲಿ ಮುಂದಕೆ ನಡೆವವಗೆ ||  

ಪಂಕಜಾ. ಕೆ .ಮುಡಿಪು
ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ
[17/12/2020, 5:57 PM] pankajarambhat: ಕನ್ನಡಕವಿಗುಚ್ಛ

ಕವನ ಸ್ಪರ್ಧೆಗಾಗಿ

ಪ್ರೇಮಕವನ(ಪತಿ..-ಪತ್ನಿ ಪ್ರೇಮ)

ವಿಷಯ.... ನವ ಜೋಡಿ

       ಶೀರ್ಷಿಕೆ...   ಒಲವಿನ ಜೋಡಿ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
ಸೇರಿದೆ ನಿನ್ನನು ನಾನು
ನದಿಗಳು ಸಾಗರ ಸೇರುವ ತೆರದಲಿ
ಕೂಡಿದೆ  ನನ್ನನು ನೀನು

ಯಾವ ಜನ್ಮದ ಪುಣ್ಯದ ಫಲವೋ
ನನ್ನಯ ಬಾಳಿಗೆ ಜತೆಯಾದೆ
ಪ್ರೀತಿಯ ಹನಿಯನು ಸುರಿಸುತ ಬಂದು
ಮನೆ ಬೆಳಗುವ ಬೆಳಕಾದೆ

ಬಾಳಿನ ತೇರನು ಎಳೆಯುತಲಿರಲು
ನನ್ನಯ ಹೆಗಲಿಗೆ ಹೆಗಲಾದೆ
ನನ್ನೆದೆ ತುಂಬಾ ಕನಸನು ತುಂಬುತ
ಮೈಮನಕೆಲ್ಲಾ ಮುದ ತಂದೆ

ಶ್ರೀಮತಿ.ಪಂಕಜಾ.ಕೆ. ಮುಡಿಪು. ಕುರ್ನಾಡು ದ.ಕ.
[18/12/2020, 5:13 PM] pankajarambhat: ಕನ್ನಡಕವಿಗುಚ್ಛ

ತ್ರಿಪದಿ ರಚನೆ
ವಿಷಯ..ಮುಸ್ಸಂಜೆ ಮಾತು

 ಶೀರ್ಷಿಕೆ...ಒಲವಿನ ಬಂಧನ

ಪಡುವಣದಿ ರವಿ ಮುಳುಗುತಿರಲು
ನಮ್ಮಿಬ್ಬರ  ಒಡನಾಟ ರಂಗೇರಿರಲು
ಒಲವಿನಾ ಬಂಧನದಲಿ ನಾವಿರಲು

ನಮ್ಮಿಬ್ಬರೊಳಗಿನ ಈ ಪ್ರೇಮ ಬಂಧನ
ಮೈಮನದಲಿ ತುಂಬಿದೆ ರೋಮಾಂಚನ
ಬಾಳಿಗೆ ತಂದಿದೆ ನವೋಲ್ಲಾಸದ ಭಾವನ

ಇಳಿ ವಯಸಿನಲಿ ಮುಸ್ಸಂಜೆ ಮಾತುಗಳು
ಮಾಗಿದ  ಮನದ ನುಡಿಮುತ್ತುಗಳು
ಸಮರಸದ ಜೀವನದ ಹೂವುಗಳು

ಶ್ರೀಮತಿ.ಪಂಕಜಾ. ಕೆ.  ಮುಡಿಪು
ಕುರ್ನಾಡು.ದ.ಕ.
[24/12/2020, 8:45 PM] pankajarambhat: ಕನ್ನಡಕವಿಗುಚ್ಛ 
ಸ್ಪರ್ಧೆಗಾಗಿ
ಜಾಗೃತಿ ಕವನ

ವಿಷಯ..ಒಳ್ಳೆಯ ಮತದಾನ

  ಜನನಾಯಕನ ಆಯ್ಕೆ

ಬಂದಿದೆ ಮತ್ತೆ  ಎಂದಿನಂತೆ ಚುನಾವಣೆ
ಮಾಡಬೇಕು  ನಾವೆಲ್ಲಾ ಮತ ಚಲಾವಣೆ

ಒಳ್ಳೆಯವರಿಗೆ ಹಾಕಬೇಕು  ನಮ್ಮ ಮತ
ಕಾಸಿಗೆ ಮಾರಬಾರದು ಅಮೂಲ್ಯ ಮತ

ಪ್ರಜಾಪ್ರಭುತ್ವದಲ್ಲಿದೆ ನಮಗೆ ಸ್ವಾತಂತ್ರ್ಯ
ಉತ್ತಮರನ್ನು ಆಯ್ಕೆ ಮಾಡುವ ಸ್ವತಂತ್ರ

ಹಾರಾಡುತಿದೆ ಎಲ್ಲೆಲ್ಲಿಯೂ ಈಗ ನೋಟು
ಆಸೆ ಆಮಿಷ ಒಡ್ಡುವರು ಕೊಟ್ಟು ಸೂಟು ಬೂಟು

ಸೋಲಬಾರದೆಂದಿಗೂ ಆಸೆ ಆಮಿಷಗಳಿಗೆ
ಬಲಿಬೀಳಬಾರದು ಪೊಳ್ಳು ಭರವಸೆಗಳಿಗೆ

ಉತ್ತಮರಿಗೆ ಕೊಟ್ಟುಬಿಡಿ ಮತದಾನ
ಹಕ್ಕು ಚಲಾಯಿಸದೆ ಇರಬೇಡಿ ಈ ದಿನ

ನಮ್ಮೆಲ್ಲರ ಒಳಿತಿಗಾಗಿ ದುಡಿಯುವಾತ
ಆರಿಸಿ ಬಂದರೆ ಮಾತ್ರ   ದೇಶಕ್ಕೆ ಹಿತ

ಅದಕ್ಕಾಗಿ ಮಾಡಬೇಕು ಒಳ್ಳೆಯ ಮತದಾನ
ಅಪಾತ್ರನಿಗೆ  ಕೊಡಬಾರದು  ದಾನ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.
ಕುರ್ನಾಡು.ದ.ಕ.
[26/12/2020, 9:21 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೨೪.೧೨.೨೦೨೦*
*ವಾರ* *ವಾರ*

*ವಿಷಯ* *ಮತದಾನ* 

*ಕವನದ ಪ್ರಕಾರ* *ಜಾಗೃತಿ ಕವನ*

*ಸ್ಪರ್ಧಿಗಳ ಸಂಖ್ಯೆ* *೪೧*

*ತಿರ್ಪುಗಾರರು* *ಸುಚಿತ್ರಾ.ಸಿ* 

*ವಿಜೇತರು*

*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ಪ್ರಭಾವತಿ ಶೆಡ್ತಿ*
*ಹತ್ತಿ ಬೆಳಗಲ್ ನಾಗರಾಜರಾವ್*
*ಶ್ರೀಮತಿ ಪಂಕಜ ಕೆ ಮುಡಿಪು*

🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑👑👑👑
*ಚೈತ್ರ ಪ್ರಮೋದ್*
*ಅನಿತಾ ಎಸ್ ಶೆಟ್ಟಿ*
*ರತ್ನ ಎಂ ಅಂಗಡಿ*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ದೇವರಾಜ ಬಸವನಹಳ್ಳಿ*
*ರಶ್ಮಿ ಸನಿಲ್*
*ಜಗದೀಶ ತಿಗರಿ ಹೊಳಗುಂದಿ*
☘️☘️☘️☘️☘️☘️☘️☘️☘️

*ಸಮಾಧಾನಕರ ಸ್ಥಾನ*
☘️☘️☘️☘️☘️☘️☘️☘️☘️
*ಪೃಥ್ವಿರಾಜ್*
*ಶ್ರೀಮತಿ ಪದ್ಮ*
*ಪ್ರತಿಭಾ ಎಂ ನಾಯ್ಕ*
🍀🍀🍀🍀🍀🍀🍀🍀🍀
🌺🌺🌺🌺🌺🌺🌺🌺🌺
🌺🌺🌺🌺🌺🌺🌺🌺🌺

👑👑👑👑👑👑👑👑👑
🏅🏅🏅🏅🏅🎖️🎖️🎖️🎖️
🌹🌹🌹🌹🌹🌹🌹🌹🌹
*ಗುಂಪಿನ ನಿರ್ವಾಹಕರ ಬಳಗದಿಂದ ಹಾಗು ಸದಸ್ಯರಿಂದ ಅಭಿನಂದನೆಗಳು*
🏆🏆🏆🏆🏆🏆🏆🏆🏆
👑👑👑👑👑👑👑👑👑
🌹🌹🌹🌹🌹🌹🌹🌹🌹
[28/12/2020, 3:43 PM] pankajarambhat: ಕನ್ನಡಕವಿಗುಚ್ಛ

ಚುಟುಕು ಸ್ಪರ್ಧೆಗಾಗಿ
ವಿಷಯ..ಬಂದೆಯಾ ಬಾಳಿನ ಬೆಳಕಾಗಿ

   ಶೀರ್ಷಿಕೆ....ಕವಿಹೃದಯದ ಧ್ವನಿ

ಬಂದೆಯಾ ಬಾಳಿನ ಬೆಳಕಾಗಿ
ನನ್ನೆದೆ  ಗುಡಿಯ ಹೂವಾಗಿ
ಮನದ  ಭಾವನೆಗಳಿಗೆ ಅಕ್ಷರವಾಗಿ
ಕವಿಹೃದಯದ ಧ್ವನಿಯಾಗಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.
[29/12/2020, 5:52 PM] pankajarambhat: ಕನ್ನಡಕವಿಗುಚ್ಛ

  ತ್ರಿಪದಿ ಕವನ ರಚನೆ ಸ್ಪರ್ಧೆಗಾಗಿ 
ದತ್ತಪದ.. ವಿಧಿ


   ಸಾಧಿಸಬೇಕು

ಬದುಕ ಪಯಣವು
ಸುಖದುಃಖಗಳ ಹೂರಣ
ಅರಿತು ಬಾಳಲು  ಮೂಡುವುದು ಹೊಂಗಿರಣ

ಕಷ್ಟಪಟ್ಟರೆ ಫಲವುಂಟು
ಅದನರಿತು  ಬಾಳಿದರೆ
ಸಿಗಬಹುದು ಬಾಳಿನಲಿ ಸವಿಜೇನ ಹೊನಲು

ವಿಧಿಯನ್ನು ಹಳಿಯುತ್ತಾ
ಕೈಕಟ್ಟಿ ಕೂರದಲೇ
ಸಾಧಿಸಿ ತೋರಿಸಬೇಕು  ನಾವು ಜಗದಲಿ

ಮೇಲೇರಿದವನನ್ನು
ಕೆಳಗಿಳಿಸುವ ವಿಧಿ
ಅದಕೆ ಸಡ್ಡು ಹೊಡೆದು ಬದುಕಬೇಕು ಛಲದಲಿ


ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು ದ.ಕ.
[31/12/2020, 7:41 PM] pankajarambhat: ಕನ್ನಡಕವಿಗುಚ್ಛ
ಷಟ್ಪದಿ ರಚನಾ ಸ್ಪರ್ಧೆಗಾಗಿ

ಹಾಡು ಹಕ್ಕಿ

ಮಾಡಿನೆಡೆಯಲಿ
ಗೂಡುಕಟ್ಟಿದ
ಹಾಡು ಹಕ್ಕಿಯ ಗಾನ ಕೇಳುತ
ಮೋಡಿ  ಮಾಡುವ 
ಹಾಡು ಮನವನು
ಕಾಡಿ ಕಾಣದಲೋಕಕೆ ಸೆಳೆದೊಯ್ದಿತು

ಪಂಕಜಾ.ಕೆ. ಮುಡಿಪು
[01/01, 7:25 PM] pankajarambhat: ಕನ್ನಡಕವಿಗುಚ್ಛ

ಸ್ಪರ್ಧೆಗಾಗಿ
ವಿಷಯ.. ಲೇಖನಿ

ಕೈಯಲ್ಲಿ ಹಿಡಿದಾಗ ಲೇಖನಿ
ಒಸರುವುದು ಭಾವನೆಗಳ ಹನಿ
ಕಿರಿದಾದರೂ ಇದರ ಶಕ್ತಿ ಅಪಾರ
ಅಕ್ಷರಗಳಲ್ಲಿದೆ ಜೀವನದ ಸಾರ

ಕವಿಮನದ ಬಾವನೆಗಳ ಅನಾವರಣ
ಬರೆಯುವ ಅಕ್ಷರಗಳಲಿರಲಿ ಹೂರಣ
ಸಮಾಜದ ಓರೆ ಕೋರೆಗಳ ತಿಳಿಸುವುದು
ಬರೆಯಲು  ಇದು ಅಗತ್ಯವಾಗಿರುವುದು

ಖಡ್ಗ ಕ್ಕಿಂತಲೂ ಲೇಖನಿ ಹರಿತ
ಬರೆಯಬಹುದು ಇದರಲ್ಲಿ ರಸಭರಿತ
ಮನದಭಾವನೆಗಳ ಅಕ್ಷರವಾಗಿಸಿ
ಬರೆಸುವುದು ಕೈಯಲಿ ಹಿಡಿದರೆ ಲೇಖನಿ

ಪಂಕಜಾ.ಕೆ. ಮುಡಿಪು
 ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್
 ಕುರ್ನಾಡು.ದ.ಕ.
[01/01, 11:44 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ* 

*ದಿನಾಂಕ*: *೦೧.೦೧.೨೦೨೧*
*ವಾರ*: *ಶುಕ್ರವಾರ* 

*ಇಂದಿನ* *ವಿಷಯ*: *ಲೇಖನಿ* 

*ತೀರ್ಪುಗಾರರು*: *ಜ್ಯೋತಿ ಭಟ್* 

*ಪ್ರಥಮ ಸ್ಥಾನ ಪಡೆದವರು*
👑👑👑👑👑👑👑👑

೦೧ ) *ಅನ್ನಪೂರ್ಣ ಹಿರೇಮಠ* 
೦೨ ) *ಕೃಷ್ಣ ದೇವಾಡಿಗ* 
೦೩ ) *ರಶ್ಮಿ ಸನಿಲ್* 
೦೪ ) *ಮಾಲತೇಶ್.ಕೃ.ಕುಲಕರ್ಣಿ*

*ದ್ವಿತೀಯ ಸ್ಥಾನ ಪಡೆದವರು* 
👑👑👑👑👑👑

೦೧ ) *ಶ್ರೀಮತಿ ವಿಜಯಾ ಶೆಟ್ಟಿ* 
೦೨ ) *ಶರಾವತಿ ದ್ವಾರಕೀನಾಥ* 
೦೩ ) *ಸುನೀಲ್ ಲೇಖಕ.ಎನ್* 
೦೪ ) *ಪ್ರಶಾಂತಗೌಡ.ಗಾಳಿ* 

*ತೃತೀಯ ಸ್ಥಾನ ಪಡೆದವರು*
👑👑👑👑👑👑👑👑
 
೦೧ ) *ಚಂದ್ರಕಾಂತ.ಜಿ.ಚವ್ಹಾಣ್* 
೦೨ ) *ರತ್ನಾ.ಎಂ.ಅಂಗಡಿ* 
೦೩ ) *ಕೆ ಕೆ ಮಮತಪ್ರವೀಣ್* 
೦೪ ) *ಅರ್ಜುನ.ಬಿ.ನಾಕಮಾನ* 

*ಮೆಚ್ಚುಗೆ ಸ್ಥಾನ ಪಡೆದವರು* 
👑👑👑👑👑👑👑👑

೦೧ ) *ಯಶೋಧಾ ಗಾಣೀಗ* 
೦೨ ) *ದಿನಕರ ನಂದಿ ಚಂದನ್* 
೦೩ ) *ಪಂಕಜಾ.ಕೆ.ಮುಡಿಪು* 
೦೪ ) *ಸೌಮ್ಯಾ ಬಾಗೋಡಿ*


*ವಿಜೇತರಿಗೆ* *ಮತ್ತು* *ಭಾಗವಹಿಸಿದ* *ಎಲ್ಲಾ* *ಕವಿಮನಸ್ಸುಗಳಿಗೂ*  *ವೈಯಕ್ತಿಕವಾಗಿ* *ಮತ್ತು* *ನಿರ್ವಾಹಕರ*  *ತಂಡದಿಂದ* *ಅಭಿನಂದನೆಗಳು* 💐💐
[02/01, 4:07 PM] pankajarambhat: ಕನ್ನಡಕವಿಗುಚ್ಛ

ಲೇಖನ ಸ್ಪರ್ಧೆಗಾಗಿ

ವಿಷಯ.. ಪ್ರಕೃತಿ

ಪ್ರಕೃತಿ ಒಂದು ವಿಸ್ಮಯದ ತವರು.ದೇವರು ಜೀವಿಗಳಿಗೆ  ಕೊಟ್ಟ ವರ ಎಂದರೂ ತಪ್ಪಿಲ್ಲ.ಪ್ರಕೃತಿಯಲ್ಲಿ ನೈಸರ್ಗಿಕವಾಗಿ  ಬೆಳೆಯುವ ಗಿಡ ಮರಗಳು ಜೀವಿಗಳಿಗೆ ಅಗತ್ಯವಿರುವ ಆಮ್ಲಜನಕವನ್ನು ಉತ್ಪಾದಿಸುವ ಒಂದು ನಿಸರ್ಗ ನಿರ್ಮಿತ ಕಾರ್ಖಾನೆಯಾಗಿದೆ. ನಮ್ಮ ಸುತ್ತುಮುತ್ತಲಿನ ವಾತಾವರಣ ಆಹ್ಲಾದಕರವಾಗಿರಲುಗಿಡ ಮರಗಳು ಅವಶ್ಯಕವಾಗಿ ಇರಬೇಕು. ನಮಗೆ ಸ್ವಚ್ಛ ಗಾಳಿ ನೀರು ಕೊಡುವ ಪ್ರಕೃತಿ  ನಮ್ಮ ತಾಯಿಯಿದ್ದಂತೆ  .ಹಸಿರು ಇದ್ದರೆ ಮಾತ್ರ ಉಸಿರು ಸಿಗಬಹುದು.ಆದ್ದರಿಂದ ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಅತ್ಯಗತ್ಯ.ಇಂದು ಪ್ರಕೃತಿಯ ಹರಣ ನಿರಂತರವಾಗಿ ಸಾಗುತ್ತಿದೆ.. ಮಾನವ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿ ನಿರ್ಮಿತ ಗುಡ್ಡ ಬೆಟ್ಟಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ಬೆಳೆಸುತ್ತಿರುವುದರಿಂದ,ಜೀವಿಗಳಿಗೆ ಅಗತ್ಯವಾದ ಆಮ್ಲಜನಕದ  ಕೊರತೆಯಿಂದ ಕೊರೊನಾದಂತ ಮಾರಕರೋಗಗಳು ಮಾನವನನ್ನು ಕಾಡುತ್ತಿದೆ. ಮನಸ್ಸಿಗೆ ಬೇಸರವಾದಾಗ ಪ್ರಕೃತಿಯಲ್ಲಿ ಒಂದು ಕ್ಷಣ ವಿಹರಿಸಿದರೆ   ಕಳೆದು ಹೋದ ಉತ್ಸಾಹ ಹುರುಪು ತುಂಬಿ ಬರುವುದು .ಪ್ರಕೃತಿಮಾತೆಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.
[03/01, 6:22 PM] pankajarambhat: ಕನ್ನಡಕವಿಗುಚ್ಛ

ಚಿತ್ರಕವನ ಸ್ಪರ್ಧೆಗಾಗಿ

ಬೀಸಿ ಬಂದ ಚಂಡಮಾರುತ
ಬದುಕ ಕನಸನು ಕಸಿದಿದೆ
ಮುರಿದು ಬಿದ್ದ ಮನೆಯ ತೆರದಲಿ
ಬದುಕು ಬಣ್ಣವ ಕಳೆದಿದೆ

ಕಾಲರಾಯನ ಧಾಳಿಯಾಟಕೆ
ನಲುಗಿ ಹೋಗಿದೆ ಜೀವನ
ಗೋಡೆ ತುಂಬಿದ ಚಿತ್ರವೊಂದೇ
ಅವನ ಕನಸಿನ ಭಾವನ

ವಿಧಿಯ ಕ್ರೂರತೆಗೆ ಸಾಕ್ಷಿಯಾಗುತ
ಪುಟ್ಟಬಾಲಕನಿರುವನು
ತಾನೇ ಬಿಡಿಸಿದ ಚೆಲುವ ಚಿತ್ರವು
ಮುರಿದ ಗೋಡೆಯಲಿ ನಿಂತಿದೆ

ಕೆಳಗೆ  ಕಲ್ಲುಗಳ ಇಟ್ಟು ನಿಲ್ಲುತ
ದುಃಖಿಸುತ್ತಿರುವನು ಬಾಲಕ
ಅಂದಚಂದದ ಹಸಿರು ಹಂದರ
ನಲುಗಿ ಹೋದುದು  ತಿಳಿಯುತ

ಬಣ್ಣ ಬಳಿದಿಹ ಪ್ರಕೃತಿ ಚಿತ್ರವು
ಸೆಳೆಯಿತಿರುವುದು ಕಂಗಳ
ಒಂದು ನಿಮಿಷಕೆ ಕೊಚ್ಚಿ ಹೋಗಿ
ಮನದಿ ಶೂನ್ಯವ ತುಂಬಿದೆ

ಪಂಕಜಾ. ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್
ಕುರ್ನಾಡು ದ.ಕ
[03/01, 10:11 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೦೨.೦೧.೨೦೨೧*
*ವಾರ* *ಶನಿವಾರ*

*ಇಂದಿನ ವಿಷಯ* *ಪ್ರಕೃತಿ*

*ಸಣ್ಣ ಕಥೆ*

*ಇಂದಿನ ಸ್ಪರ್ಧಿಗಳ ಸಂಖ್ಯೆ* *೨೯*
*ತಿರ್ಪುಗಾರರು* *ಸುಚಿತ್ರಾ.ಸಿ*

*ವಿಜೇತರು*
*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ಈಶ್ವರ ತಮ್ಮಯ್ಯ*
*ಲೀಲಾಧರ ನಾರಯಣ  ಮೊಗೇರ*
*ಯಶೋದ.ಗಾಣೀಗ*
🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑👑👑👑
*ಶ್ರೀಮತಿ ಪದ್ಮಾ ಉಮರ್ಜಿ*
*ಕೆ.ಕೆ.ಮಮತಪ್ರವೀಣ್*
*ಪ್ರಶಾಂತಗೌಡ.ಗಾಳಿ*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ಕಲ್ಪನಾ.ಡಿ.ಎನ್*
*ಪ್ರಭಾವತಿ ಶೆಡ್ತಿ*
*ಪ್ರತಿಭಾ.ಎನ್.ನಾಯ್ಕ*
☘️☘️☘️☘️☘️☘️☘️☘️☘️

*ಮೆಚ್ಚುಗೆ ಸ್ಥಾನ*
🍀🍀🍀🍀🍀🍀🍀🍀🍀
*ಮನೋಜ್ ಬಣಕಾರ*
*ಮಾಲತೇಶ.ಕೃ.ಕುಲಕರ್ಣಿ*
*ಪಂಕಜಾ.ಕೆ.ಮುಡಿಪು*
🍀🍀🍀🍀🍀🍀🍀🍀🍀

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗೂ ಸದಸ್ಯರಿಂದ ಅಭಿನಂದನೆಗಳು*
🌹🌹🌹🌹🌹🌹🌹🌹🌹🏆🏆🏆🏆🏆🏆🏆🏆🏆
👑👑👑👑👑👑👑👑👑
[05/01, 2:38 PM] pankajarambhat: ಕನ್ನಡಕವಿಗುಚ್ಛ
ಸ್ಪರ್ಧೆಗಾಗಿ

ವಿಷಯ..ಅಪ್ಪ.

ಪ್ರೇಮಕವನ..(ತಂದೆಯ ಪ್ರೇಮ)

ಶೀರ್ಷಿಕೆ..  ಅಪ್ಪನೆಂದರೆ

ಅಪ್ಪಾ ಎಂದರೆ ನನ್ನಯ ಮನದಲಿ
ಮೂಡುವ ಬಾವವು ನೂರಾರು
ಪ್ರೀತಿಯ ತೋರುತ ತಪ್ಪನು ತಿದ್ದುತ
ನೀತಿಯ ಕಲಿಸಿದ ಜತೆಗಾರ

ಕಷ್ಟವ  ಗಣಿಸದೆ ನಿಷ್ಠೆಯ ತೋರುತ
ಮನೆ ಮಂದಿಯರಿಗಾಗಿದುಡಿಯುವನು
ತನ್ನಯ ದುಃಖವ ಮನದೊಳಗೆ ಅಡಗಿಸಿ
ನಗುತಲಿ  ಸಂಸಾರ ರಥವನು ಎಳೆಯುವನು

ತಿದ್ದುತ ತೀಡುತ ಆಸೆಯ ತಣಿಸುತ
ಸರಿದಾರಿಯಲಿ ನಡೆಸುವ ಗುರುವವನು
 ಓದಲು ಬರೆಯಲು ಕಲಿಸುತ  ನಮಗೆ
 ಗುರಿಯನು ತೋರಿದ ಗುರಿಕಾರ 
 
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[05/01, 11:36 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೦೩.೦೧.೨೦೨೧*
*ವಾರ* *ಭಾನುವಾರ*

*ವಿಷಯ* *ಚಿತ್ರ ನೋಡಿ ಕವನ*



*ಇಂದಿನ ಸ್ಪರ್ಧಿಗಳ ಸಂಖ್ಯೆ* *೨೬*
*ತಿರ್ಪುಗಾರರು* *ಪವನ್ ಕೃಷ್ಣ*

*ವಿಜೇತರು*

*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ಪ್ರತಿಭಾ.ಎಂ.ನಾಯ್ಕ*
*ಪಂಕಜಾ.ಕೆ.ಮುಡಿಪು*
*ರತ್ನಾ.ಎಂ.ಅಂಗಡಿ*
🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑👑👑👑
*ರೇವತಿ ದೆವೂರು*
*ಸಮಿತ ಶೆಟ್ಟಿ*
*ಅನಿತಾ.ಎಸ್.ಶೆಟ್ಟಿ*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ಕೃಷ್ಣ ದೇವಾಡಿಗ*
*ದೇವರಾಜ್ ಬಸವನಹಳ್ಳಿ*
*ಕೆ.ಕೆ.ಮಮತಪ್ರವೀಣ್*
☘️☘️☘️☘️☘️☘️☘️☘️☘️

*ಮೆಚ್ಚುಗೆ ಸ್ಥಾನ*
🍀🍀🍀🍀🍀🍀🍀🍀🍀
*ಡಾ||.ಕೆ.ಗೋವಿಂದ್ ಭಟ್*
*ಸಂದೇಶ್.ಕೆ.ಆರ್*
*ಹಂಸರಾಗ ಶೆಟ್ಟಿ*
🍀🍀🍀🍀🍀🍀🍀🍀🍀

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗೂ ಸದಸ್ಯರಿಂದ ಅಭಿನಂದನೆಗಳು*
🌹🌹🌹🌹🌹🌹🌹🌹🌹🏆🏆🏆🏆🏆🏆🏆🏆🏆
👑👑👑👑👑👑👑👑👑
[06/01, 6:17 PM] pankajarambhat: ಬಳಗದ ಹೆಸರು  ಕನ್ನಡಕವಿಗುಚ್ಛ
ವಿಷಯ... ಅದು
ಪ್ರಕಾರ..ಚೌಪದಿ

ವೈಯುಕ್ತಿಕಶೀರ್ಷಿಕೆ...
ಪ್ರಕೃತಿ ಸೊಬಗು

ಸುಂದರ ಪ್ರಕೃತಿ ರಮ್ಯ  ದೃಶ್ಯ ಅದು
ಗುಡ್ಡಬೆಟ್ಟಗಳಿಂದ ಕೂಡಿದ ತಾಣ ಅದು
ಕೆಳಗೆ ಹರಿಯುವ ನದಿಯ ಮಂಜುಳ ನಾದ
ಬೀಸಿ ಬರುವ ಗಾಳಿ ಹೊತ್ತು ತರುತಿದೆ ಸ್ವಾದ

ಮೇಲಿನಿಂದ ಬೀಳುವ ಜಲಪಾತದ ಸೊಬಗು
ಕಾಣುವ  ಕಣ್ಣುಗಳಿಗೆ  ತುಂಬುತಿದೆ ಬೆರಗು
ಬಾನಿನ ತುಂಬಾ ತುಂಬಿದೆ  ಬಣ್ಣದ ರಂಗು
ರಸಿಕರ ಮನದಲಿ ತುಂಬಿದೆ ಅದರದೇ ಗುಂಗು

ದೇವನ ಅದ್ಬುತ ಸೃಷ್ಟಿಯನು ಕಂಡು ಬೆರಗಾದೆ
ಮೈಮನ ಮರೆಸುವ  ಸೊಬಗಿಗೆ ತಲೆದೂಗಿದೆ
ಹಸಿರುವನರಾಜಿಗಳಿಂದ ಕೂಡಿದ  ಸ್ಥಾನ ಅದು
ಪ್ರಾಣಿ ಪಕ್ಷಿಗಳ ಆಶ್ರಯ ತಾಣವಾಗಿದೆ ಅದು

ಶ್ರೀಮತಿ. ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ .ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ.
[06/01, 10:25 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೦೬.೦೧.೨೦೨೧*
*ವಾರ* *ಬುಧವಾರ*

*ಇಂದಿನ ವಿಷಯ* *ಅದು*


*ಇಂದಿನ ಸ್ಪರ್ಧಿಗಳ ಸಂಖ್ಯೆ* *೨೯*
*ತಿರ್ಪುಗಾರರು* *ಸಾಗರ್ ಕುಲಕರ್ಣಿ*

*ವಿಜೇತರು*
*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ಶ್ರೀ ನಟರಾಜ್ ದೊಡ್ಡಮನಿ*
*ಗೀತಾ.ಗಿ.ಹುಬ್ಬಳ್ಳಿ*
*ಪ್ರಶಾಂತಗೌಡ.ಗಾಳಿ*
🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑👑👑👑
*ಪಂಕಜಾ.ಕೆ.ಮುಡಿಪು*
*ಅಶೋಕ್.ಎಚ್.ಎಸ್*
*ಶಿಲ್ಪಾ ಮೂರ್ತಿ*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ನವ್ಯಾ ನಿಖಿಲ್ ದಿವೇಕರ್*
*ಅನಿತಾ.ಎಸ್.ಶೆಟ್ಟಿ*
*ಪ್ರಭಾವತಿ ಶೆಡ್ತಿ*
☘️☘️☘️☘️☘️☘️☘️☘️☘️

*ಮೆಚ್ಚುಗೆ ಸ್ಥಾನ*
🍀🍀🍀🍀🍀🍀🍀🍀🍀
*ಸೌಜನ್ಯ.ಬಿ.ಎಂ*
*ಶ್ರೀಮತಿ.ಬಿಟ್ಟೀರ ಚೋಂದಮ್ಮ ಶಂಭು*
*ಹಂಸರಾಗ ಶೆಟ್ಟಿ*
🍀🍀🍀🍀🍀🍀🍀🍀🍀

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗೂ ಸದಸ್ಯರಿಂದ ಅಭಿನಂದನೆಗಳು*
🌹🌹🌹🌹🌹🌹🌹🌹🌹
🏆🏆🏆🏆🏆🏆🏆🏆🏆
👑👑👑👑👑👑👑👑👑
[12/01, 4:59 PM] pankajarambhat: ಬಳಗದಹೆಸರು..ಕನ್ನಡಕವಿಗುಚ್ಛ
ವಿಷಯ.. ಯುವಶಕ್ತಿ
ಪ್ರಕಾರ. ..ತ್ರಿಪದಿ

ವೈಯುಕ್ತಿಕ ಶೀರ್ಷಿಕೆ.. ವೀರಕೇಸರಿ

ಯುವಶಕ್ತಿ ಪೋಲಾಗಬಾರದೆನುತ
ಏಳಿ ಎದ್ದೇಳಿ ಎಂದು ಹುರಿದುಂಬಿಸುತ
ಯುವಕರ ಎದೆಯಲಿ ಕಿಚ್ಚು ಹಚ್ಚಿದರು

ಯುವಕರಲಿ ಸಂಚಲನ ಮೂಡಿಸಿ
ದೇಶದ ಏಳ್ಗೆಗಾಗಿ ಶ್ರಮಿಸಿ ಮೆರೆದ
ಅದ್ಬುತ ಸನ್ಯಾಸಿ ಸ್ವಾಮಿ ವಿವೇಕಾನಂದ

ಇವರ ಆದರ್ಶಗಳೆಲ್ಲವನು ಮರೆತು
ಮೊಬೈಲ್ ಪರದೆಯ ಮೇಲೆ ಕಳೆದು
ಪೋಲಾಗುತ್ತಿದೆ ಇಂದೀಗ ಯುವಶಕ್ತಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
[14/01, 7:16 PM] pankajarambhat: ಬಳಗದ ಹೆಸರು ಕನ್ನಡಕವಿಗುಚ್ಛ 
ವಿಷಯ ಸಂಕ್ರಾಂತಿ
ಪ್ರಕಾರ ಚುಟುಕು

ಶೀರ್ಷಿಕೆ .. ಸುಗ್ಗಿ ಹಬ್ಬ

ವರ್ಷದ ಮೊದಲ ಹಬ್ಬ ಸಂಕ್ರಾಂತಿ
ಕಳೆಯಲಿ ನಮ್ಮ ಮನದ ಭೀತಿ
ಸುಗ್ಗಿಯ. ಫಸಲು ಮನೆತುಂಬಿದೆ
ರೈತನ ಮೊಗದಲಿ ಕಳೆ ಬಂದಿದೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
[15/01, 6:34 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೧೪.೦೧.೨೦೨೧*
*ವಾರ* *ಗುರುವಾರ*

*ಇಂದಿನ ವಿಷಯ* *ಸಂಕ್ರಾಂತಿ*

*ಕವನದ ಪ್ರಕಾರ* *ಚೌಪದಿ*

*ಇಂದಿನ ಸ್ಪರ್ಧಿಗಳ ಸಂಖ್ಯೆ* *೬೯*
*ತಿರ್ಪುಗಾರರು* *ಸಾಗರ್ ಕುಲಕರ್ಣಿ*

*ವಿಜೇತರು*

*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ಮಾಲತೇಶ.ಕೃ.ಕುಲಕರ್ಣಿ*
*ಪ್ರಭಾವತಿ ಶೆಡ್ತಿ*
*ಶ್ರೀಮತಿ ಪೂರ್ಣಿಮಾ ಬಡಿಗೇರ*
🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑👑👑👑
*ಸುಮಂಗಲಾ.ಕೃ.ಕೊಪ್ಪರದ*
*ವಿರಂತರೆಡ್ಡಿ ಜಂಪಾ*
*ಮಹಾಬಲ.ಕೆ*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ಶಿಲ್ಪಾ ಮೂರ್ತಿ*
*ವಿಂದ್ಯಾ.ಎಸ್.ರೈ*
*ಶ್ರೀಮತಿ ಪಂಕಜಾ.ಕೆ.ಮುಡಿಪು*
☘️☘️☘️☘️☘️☘️☘️☘️☘️

*ಮೆಚ್ಚುಗೆ ಸ್ಥಾನ*
🍀🍀🍀🍀🍀🍀🍀🍀🍀
*ಗೀತಾ.ಗಿ.ಹುಬ್ಬಳ್ಳಿ*
*ಈಶ್ವರ ತಮ್ಮಯ್ಯ*
*ಸಂದೇಶ.ಕೆ.ಆರ್*
🍀🍀🍀🍀🍀🍀🍀🍀🍀

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗೂ ಸದಸ್ಯರಿಂದ ಅಭಿನಂದನೆಗಳು*
🌹🌹🌹🌹🌹🌹🌹🌹🌹🏆🏆🏆🏆🏆🏆🏆🏆🏆
👑👑👑👑👑👑👑👑👑
[18/01, 4:07 PM] pankajarambhat: ಬಳಗ ದ ಹೆಸರು ಕನ್ನಡಕವಿಗುಚ್ಛ
ವಿಷಯ... ಭಾವಜೀವಿ
ಪ್ರಕಾರ....ಚುಟುಕು

ವೈಯುಕ್ತಿಕ ಶೀರ್ಷಿಕೆ.  ಪ್ರಕೃತಿ ಹರಣ

ಕನಸು ಕಾಣುವುದು ಭಾವಜೀವಿಯ ಲಕ್ಷಣ
ನನಸು ಮಾಡಲು ಶ್ರಮಿಸಬೇಕು ತಕ್ಷಣ
ಇರಲಿ ಪ್ರಕೃತಿ ಪ್ರೀತಿ ಮೈಯ ಕಣ ಕಣ
ಮಾಡಬಾರದು ಎಂದಿಗೂ ಪ್ರಕೃತಿ ಹರಣ

ಶ್ರೀಮತಿ .ಪಂಕಜಾ.ಕೆ. ಮುಡಿಪು
[19/01, 10:39 PM] ದಯಾನಂದ ಬಿಜ್ಜಳ ಕನ್ನಡ ಕವಿಗುಚ್ಛ: *ಕನ್ನಡಕವಿಗುಚ್ಛ*

*ದಿನಾಂಕ* *೧೮.೦೧.೨೦೨೧*
*ವಾರ* *ಸೊಮುವಾರ*

*ಇಂದಿನ ವಿಷಯ* *ಭಾವಜೀವಿ*

*ಕವನದ ಪ್ರಕಾರ* *ಚುಟುಕು*

*ಇಂದಿನ ಸ್ಪರ್ಧಿಗಳ ಸಂಖ್ಯೆ* *೪೩*
*ತಿರ್ಪುಗಾರರು* *ದಯಾನಂದ ಚಾಲುಕ್ಯರು*

*ವಿಜೇತರು*

*ಪ್ರಥಮ ಸ್ಥಾನ*
🏆🏆🏆🏆🏆🏆🏆🏆🏆
*ದೇವರಾಜ್ ಬಸವನಹಳ್ಳಿ*
*ಶ್ರೀಮತಿ ಬಿಟ್ಟೀರ ಚೋಂದಮ್ಮ ಶಂಭು*
*ರಶ್ಮಿ ಸನಿಲ್*
🏆🏆🏆🏆🏆🏆🏆🏆🏆

*ದ್ವಿತಿಯ ಸ್ಥಾನ*
👑👑👑👑👑👑
*ಅಮರಯ್ಯ ಸಾಲಿಮಠ*
*ಪ್ರತೀಭಾ.ಎಂ.ನಾಯ್ಕ*
*ಶ್ರೀಮತಿ ಪಂಕಜಾ.ಕೆ.ಮುಡಿಪು*
👑👑👑👑👑👑👑👑👑

*ತೃತಿಯ ಸ್ಥಾನ*
☘️☘️☘️☘️☘️☘️☘️☘️☘️
*ಕೋಮಲ್ ಕಮರವಾಡಿ*
*ಪ್ರಶಾಂತಗೌಡ.ಗಾಳಿ*
*ದಿನಕರ ನಂದಿ ಚಂದನ್*
☘️☘️☘️☘️☘️☘️☘️☘️☘️

*ಮೆಚ್ಚುಗೆ ಸ್ಥಾನ*
🍀🍀🍀🍀🍀🍀🍀🍀🍀
*ಶ್ಯಾಮ್ ಪ್ರಸಾದ್ ಭಟ್*
*ಅನಿತಾ.ಎಸ್.ಶೆಟ್ಟಿ*
*ಜಗದೀಶ್ ತಿಗರಿ*
🍀🍀🍀🍀🍀🍀🍀🍀🍀

*ಗುಂಪಿನ ನಿರ್ವಾಹಕರ ಬಳಗದಿಂದ ಹಾಗೂ ಸದಸ್ಯರಿಂದ ಅಭಿನಂದನೆಗಳು*
🌹🌹🌹🌹🌹🌹🌹🌹🌹🏆🏆🏆🏆🏆🏆🏆🏆🏆
👑👑👑👑👑👑👑👑👑
[20/01, 5:33 PM] pankajarambhat: ಬಳಗದಹೆಸರು .ಕನ್ನಡಕವಿಗುಚ್ಛ
ವಿಷಯ...ಹೊಸಬೆಳಕು
ಪ್ರಕಾರ.....ತ್ರಿಪದಿ ರಚನೆ
ವೈಯುಕ್ತಿಕ ಶೀರ್ಷಿಕೆ..  ಒಲವು ..ಗೆಲುವು

ಹೊಸ ಬೆಳಕು ಮೂಡಿಹುದು
ಮೈಮನವ ಮರೆಸಿಹುದು
ನನ್ನೆದೆಯ ನೋವನ್ನು ಕಡಿದೊಗೆಯುತ

ಹಸನಾದ ಬಾಳಿನಲಿ
ಹೊಸತನವ ಹುಡುಕುತಲಿ
ಮನದಲಿ ಮೂಡುತಿದೆ ಚೆಲುಕನಸುಗಳು

ಮರೆಸುತಿದೆ ನಿನ್ನೊಲವು
ಹರಿಸುತಿದೆ ಹೊಂಬೆಳಕು
ಒಲವೆಲ್ಲಾ ಗೆಲುವಾದ ಸಂಭ್ರಮದಲಿ

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...