ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಬೆಳಗಾವಿ
ವಾರಕ್ಕೊಂದು ಸ್ಪರ್ಧೆಗಾಗಿ
ವಿಷಯ.. ಸಂಕ್ರಾಂತಿ ಸಂಭ್ರಮ
ಶೀರ್ಷಿಕೆ..ಸುಗ್ಗಿ ಹಬ್ಬ
ಮಕರ ರಾಶಿಗೆ ನೇಸರನ ಪಯಣ
ಶುರುವಾಯಿತು ಪುಣ್ಯಕಾಲ ಉತ್ತರಾಯಣ
ಸಡಗರದ ಹಬ್ಬವಿದು ಸಂಕ್ರಾಂತಿ
ಕಳೆಯಲಿ ಮನೆ ಮನದ ಭೀತಿ
ಸುಗ್ಗಿಯ ಸಂಭ್ರಮ ಮೂಡಿದೆ ಮನದಲಿ
ಹಸಿರು ಹಂದರ ಹಾಸಿದೆ ಧರೆಯಲಿ
ಮನೆಯಲಿ ತುಂಬಿದೆ ದವಸ ಧಾನ್ಯ
ರೈತನ ಶ್ರಮಕೆ ಸಂದ ಬೆಲೆ ಅನನ್ಯ
ಮನೆ ಮನಗಳಲಿ ತುಂಬಿದೆ ಹರುಷ
ನವವಸಂತನಾಗಮನದಿಂದ ಸಂತಸ
ಎಳ್ಳು ಬೆಲ್ಲವ ಬೀರುತ ಸಂಭ್ರಮಿಸುವ ಹಬ್ಬ
ರೈತನ ಮೊಗದಲಿ ತುಂಬಿದೆ ಹರುಷದ ಕಬ್ಬ
ನೇಸರನು ಬದಲಿಸಿದ ತನ್ನ ಪಥ
ತರುಲತೆಗಳಲಿ ಮೂಡಿತು ನವ ವಸಂತ
ಹಸಿರು ವನದಲಿ ನಲಿಯುತಿದೆ ಸುಕಪಿಕ
ಪ್ರಕೃತಿ ಸಿರಿ ಕಂಡ ಮನ ಭಾವುಕ
ಮಾಗಿಯ ಚಳಿಯ ಓಡಿಸುತ ಬಂದ ಭಾಸ್ಕರ
ಬೀಸುವ ತಂಗಾಳಿಯ ಆರ್ಭಟ ಭಯಂಕರ
ಬೆಳೆದ ಬೆಳೆ ಮನೆತುಂಬುವ ಸಂತಸದ ಕಾಲ
ಸಂಕ್ರಾಂತಿ ಸಂಭ್ರಮದಿ ನಲಿಯುವರು ಎಲ್ಲಾ
ಶ್ರೀಮತಿ. ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
Comments
Post a Comment