ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಧಾರವಾಡ
ಲೇಖನ ಸ್ಪರ್ಧೆಗಾಗಿ
ವಿಷಯ.. ಸರ್ವಧರ್ಮ ದಮನ್ವಯದ ಪ್ರತೀಕ ವಿವೇಕ
ಸ್ವಾಮಿ ವಿವೇಕಾನಂದರ ಜೀವನ ಯುವಜನರಿಗೆ ದಾರಿ ದೀಪ. ರೋಮಾಂಚಕರವೂ ಚೇತೋಹಾರಿಯೂ ಆಗಿರುವ ಇವರ ಜೀವನವು ಜಗತ್ತಿನ ಜನರೆಲ್ಲರಿಗೂ ಚೈತನ್ಯದ ಚಿಲುಮೆ. ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಗೆ ಶಿವನ ದಯೆಯಿಂದ ಹುಟ್ಟಿದ ಶಿಶುವಾದ ಇವರು ದೈವಾಂಶ ಸಂಭೂತರಾಗಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ನೆಚ್ಚಿನ ಶಿಷ್ಯರಾಗಿದ್ದ ನರೇಂದ್ರನಾಥದತ್ತ ನು ಕಾಲಾಂತರದಲ್ಲಿ ವಿವೇಕಾನಂದ ಎಂದು ಪ್ರಸಿದ್ದರಾದರು.ಇವರು ಸರ್ವಧರ್ಮಗಳಲ್ಲೂ ಶಿವನನ್ನೇ ಕಂಡ ಶ್ರೇಷ್ಠರು.
ಅಮೆರಿಕಾದ ಚಿಕಾಗೋದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ ರಾಯಭಾರಿಯಾಗಿ ವಿವೇಕಾನಂದರು ಭಾರತವನ್ನು ಪ್ರತಿನಿಧಿಸಿ ಅಲ್ಲಿಯ ಪ್ರಜೆಗಳನ್ನು ಉದ್ದೇಶಿಸಿ ಅಮೆರಿಕಾದ ಸಹೋದರ ಸಹೋದರಿ ಯರೆ ಎಂದು ಭಾಷಣ ಪ್ರಾರಂಭಿಸಿದ್ದು ಅಮೆರಿಕಾದ ಜನತೆಯಲ್ಲಿ ಸಂಚಲನವನ್ನು ಉಂಟುಮಾಡಿತು. ಯಾರು ಈ ರೀತಿಯ ಸಂಬೋಧನೆಯನ್ನು ಮಾಡದೆ ಇದ್ದುದರಿಂದ ಅಲ್ಲಿ ನೆರೆದ ಜನತೆ ಸ್ತಬ್ಧರಾದರು ವಿಶ್ವ ಧರ್ಮಗಳ ಐಕ್ಯತೆಯನ್ನು ಸಾರುವ ರೀತಿಯಲ್ಲಿ ಇತ್ತು ಆ ಸಂಭೋದನೆ. ಕೇವಲ ಹದಿನೈದು ನಿಮುಷದ ಭಾಷಣವಾದರೂ ವಿದ್ವತ್ಪೂರ್ಣವಾಗಿ ನುಡಿದ ಅವರ ನುಡಿಗಳು ಅಮೆರಿಕಾದ ಜನತೆಯನ್ನು ಸೆಳೆದುಕೊಂಡಿತು. ಸರ್ವಧರ್ಮ ಸಮನ್ವತೆಯನ್ನೇ ಭಾಷಣದ ಮೂಲ ಉದ್ದೇಶವಾಗಿ ಇಟ್ಟುಕೊಂಡ ಅವರು ಹಲವಾರು ಶ್ಲೋಕಗಳ ಮೂಲಕ ಸರ್ವಧರ್ಮಿಯರೂ ಸಮ್ಮತಿಸುವ ರೀತಿಯಲ್ಲಿ ಅಳವಡಿಸಿಕೊಂಡು ಅವುಗಳ ಅರ್ಥವಿವರಣೆ ಮಾಡಿ ವೀಕ್ಷಕರ ಮನವನ್ನು ಸೂರೆಗೊಂಡರು. ಎಲ್ಲಾ ಧರ್ಮಗಳನ್ನು ಒಂದು ಹಿಡಿಯಲ್ಲಿ ಹಿಡಿದಿಟ್ಟು ಸ್ನೇಹ ಸೌಹಾರ್ದತೆಯ ಭಾವಗಂಗೆಯಲ್ಲಿ ಅವರನ್ನು ತೇಲಾಡಿಸಿದರು ಹಿಂದೂ ಧರ್ಮದ ಬಗ್ಗೆ ಅವರು ಮಾಡಿದ ಭಾಷಣದಲ್ಲಿಯೂ , ಹಿಂದೂ ಧರ್ಮದ ಹಿರಿಮೆ ಸಾರುವುದರೊಂದಿಗೆ ಅದು . ಹೇಗೆ ಇತರ ಧರ್ಮಕ್ಕೆ ಆಶ್ರಯವಿ ತ್ತಿದೆ ಎನ್ನುವುದನ್ನು ಐತಿಹಾಸಿಕ ಸಾಕ್ಷ್ಯಾಧಾರಗಳ ಮೂಲಕ ಸ್ಪಷ್ಟಪಡಿಸಿದರು. ಈ ರೀತಿ ಸರ್ವಧರ್ಮಗಳನ್ನು ಒಗ್ಗೂಡಿಸುವ ಇವರ ಪ್ರಯತ್ನವು ಅಮೆರಿಕದಲ್ಲೆಲ್ಲಾ ಕೀರ್ತಿಗೆ ಕಾರಣವಾಯಿತು.
ಶ್ರೀಮತಿ.ಪಂಕಜಾ.ಕೆ. ಮುಡಿಪು.ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ .ಕುರ್ನಾಡು.ದ.ಕ
Comments
Post a Comment