Skip to main content

ಗುರುಕುಲ ಧಾರವಾಡ ಲೇಖನ

ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಧಾರವಾಡ
 ಲೇಖನ ಸ್ಪರ್ಧೆಗಾಗಿ

ವಿಷಯ.. ಸರ್ವಧರ್ಮ ದಮನ್ವಯದ ಪ್ರತೀಕ ವಿವೇಕ

ಸ್ವಾಮಿ ವಿವೇಕಾನಂದರ ಜೀವನ ಯುವಜನರಿಗೆ ದಾರಿ ದೀಪ. ರೋಮಾಂಚಕರವೂ ಚೇತೋಹಾರಿಯೂ ಆಗಿರುವ  ಇವರ ಜೀವನವು ಜಗತ್ತಿನ ಜನರೆಲ್ಲರಿಗೂ   ಚೈತನ್ಯದ ಚಿಲುಮೆ. ವಿಶ್ವನಾಥದತ್ತ ಹಾಗೂ ಭುವನೇಶ್ವರಿ ದೇವಿಗೆ ಶಿವನ ದಯೆಯಿಂದ ಹುಟ್ಟಿದ ಶಿಶುವಾದ ಇವರು ದೈವಾಂಶ ಸಂಭೂತರಾಗಿದ್ದರು. ಶ್ರೀ ರಾಮಕೃಷ್ಣ ಪರಮಹಂಸರ ನೆಚ್ಚಿನ ಶಿಷ್ಯರಾಗಿದ್ದ ನರೇಂದ್ರನಾಥದತ್ತ ನು ಕಾಲಾಂತರದಲ್ಲಿ ವಿವೇಕಾನಂದ ಎಂದು ಪ್ರಸಿದ್ದರಾದರು.ಇವರು ಸರ್ವಧರ್ಮಗಳಲ್ಲೂ ಶಿವನನ್ನೇ ಕಂಡ ಶ್ರೇಷ್ಠರು.
ಅಮೆರಿಕಾದ ಚಿಕಾಗೋದಲ್ಲಿ  ನಡೆಯುವ ಸರ್ವಧರ್ಮ ಸಮ್ಮೇಳನದ ರಾಯಭಾರಿಯಾಗಿ  ವಿವೇಕಾನಂದರು  ಭಾರತವನ್ನು ಪ್ರತಿನಿಧಿಸಿ ಅಲ್ಲಿಯ ಪ್ರಜೆಗಳನ್ನು ಉದ್ದೇಶಿಸಿ ಅಮೆರಿಕಾದ ಸಹೋದರ ಸಹೋದರಿ ಯರೆ ಎಂದು  ಭಾಷಣ ಪ್ರಾರಂಭಿಸಿದ್ದು ಅಮೆರಿಕಾದ ಜನತೆಯಲ್ಲಿ ಸಂಚಲನವನ್ನು ಉಂಟುಮಾಡಿತು. ಯಾರು ಈ ರೀತಿಯ ಸಂಬೋಧನೆಯನ್ನು ಮಾಡದೆ ಇದ್ದುದರಿಂದ ಅಲ್ಲಿ ನೆರೆದ ಜನತೆ ಸ್ತಬ್ಧರಾದರು  ವಿಶ್ವ ಧರ್ಮಗಳ ಐಕ್ಯತೆಯನ್ನು  ಸಾರುವ ರೀತಿಯಲ್ಲಿ ಇತ್ತು ಆ ಸಂಭೋದನೆ. ಕೇವಲ ಹದಿನೈದು ನಿಮುಷದ ಭಾಷಣವಾದರೂ  ವಿದ್ವತ್ಪೂರ್ಣವಾಗಿ  ನುಡಿದ ಅವರ ನುಡಿಗಳು ಅಮೆರಿಕಾದ ಜನತೆಯನ್ನು ಸೆಳೆದುಕೊಂಡಿತು. ಸರ್ವಧರ್ಮ ಸಮನ್ವತೆಯನ್ನೇ ಭಾಷಣದ ಮೂಲ ಉದ್ದೇಶವಾಗಿ ಇಟ್ಟುಕೊಂಡ  ಅವರು ಹಲವಾರು ಶ್ಲೋಕಗಳ ಮೂಲಕ ಸರ್ವಧರ್ಮಿಯರೂ ಸಮ್ಮತಿಸುವ ರೀತಿಯಲ್ಲಿ ಅಳವಡಿಸಿಕೊಂಡು ಅವುಗಳ ಅರ್ಥವಿವರಣೆ ಮಾಡಿ ವೀಕ್ಷಕರ ಮನವನ್ನು ಸೂರೆಗೊಂಡರು. ಎಲ್ಲಾ  ಧರ್ಮಗಳನ್ನು ಒಂದು ಹಿಡಿಯಲ್ಲಿ  ಹಿಡಿದಿಟ್ಟು ಸ್ನೇಹ ಸೌಹಾರ್ದತೆಯ ಭಾವಗಂಗೆಯಲ್ಲಿ  ಅವರನ್ನು ತೇಲಾಡಿಸಿದರು  ಹಿಂದೂ ಧರ್ಮದ ಬಗ್ಗೆ ಅವರು ಮಾಡಿದ ಭಾಷಣದಲ್ಲಿಯೂ , ಹಿಂದೂ ಧರ್ಮದ ಹಿರಿಮೆ  ಸಾರುವುದರೊಂದಿಗೆ ಅದು . ಹೇಗೆ ಇತರ ಧರ್ಮಕ್ಕೆ ಆಶ್ರಯವಿ ತ್ತಿದೆ ಎನ್ನುವುದನ್ನು ಐತಿಹಾಸಿಕ ಸಾಕ್ಷ್ಯಾಧಾರಗಳ ಮೂಲಕ ಸ್ಪಷ್ಟಪಡಿಸಿದರು. ಈ ರೀತಿ ಸರ್ವಧರ್ಮಗಳನ್ನು ಒಗ್ಗೂಡಿಸುವ ಇವರ ಪ್ರಯತ್ನವು ಅಮೆರಿಕದಲ್ಲೆಲ್ಲಾ  ಕೀರ್ತಿಗೆ ಕಾರಣವಾಯಿತು.

ಶ್ರೀಮತಿ.ಪಂಕಜಾ.ಕೆ. ಮುಡಿಪು.ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್  ಮಾಸ್ಟರ್   .ಕುರ್ನಾಡು.ದ.ಕ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...