Skip to main content

ಖಿದ್ಮಾ ಪೌಂಡೇಶನ್ ಕರ್ನಾಟಕ ಗಾದೆ ವಿಸ್ತರಣೆ

ಖಿದ್ಮಾ ಪೌಂಡೇಶನ್ ಕರ್ನಾಟಕ
ಸ್ಪರ್ಧೆಗಾಗಿ ಗಾದೆ ವಿಸ್ತರಣೆ

ಮನಸ್ಸಿದ್ದರೆ ಮಾರ್ಗ

ಗಾದೆಗಳು ಜನಪದರ ಜೀವನದ ಅನುಭವಗಳ ಸಾರವಾಗಿದೆ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಒಂದು ಪ್ರಸಿದ್ಧ ನುಡಿಗಟ್ಟು. ಗಾದೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದ ಮೌಲ್ಯಗಳು ಹೆಚ್ಚಾಗುತ್ತದೆ. ಆದ್ದರಿಂದ ಗಾದೆಗಳು ವೇದಗಳಿಗೆ ಸಮಾನವೆಂದಿದ್ದಾರೆ. ಅಂತಹ ಪ್ರಸಿದ್ಧ ಗಾದೆ ಗಳಲ್ಲಿ  ಮನಸ್ಸಿದ್ದರೆ ಮಾರ್ಗ ಎನ್ನುವುದು ಒಂದು ಜನಪ್ರಿಯ ಗಾದೆಮಾತು ಆಗಿದೆ. ನಾವು ಯಾವುದೇ ಕೆಲಸವನ್ನು ಆಸಕ್ತಿಯಿಂದ ಮನಸ್ಸುಕೊಟ್ಟು ಮಾಡಿದರೆ ಆ ಕೆಲಸ ಸಫಲವಾಗುವುದು ಮನಸ್ಸಿಲ್ಲದೆ ಮಾಡಿದ ಯಾವುದೇ ಕೆಲಸವು ಸಫಲವಾಗಲಾರದು.. ಕೆಲಸದ  ಮೇಲೆ ಪ್ರೀತಿಯಿದ್ದರೆ ,ಸಹಜವಾಗಿಯೇ  ಕೆಲಸದ  ಬಗ್ಗೆ ಆಸಕ್ತಿ ಹುಟ್ಟುತ್ತದೆ. ಮತ್ತು ಆಸಕ್ತಿಯಿಂದ ಮಾಡುವುದರಿಂದ ಕೆಲಸ ಯಶಸ್ವಿಯಾಗುತ್ತದೆ. ನಮ್ಮ ಕೈಯಲ್ಲಿ ಆಗುವುದಿಲ್ಲವೆಂದು ಯೋಚಿಸಿದರೆ ಯಾವ ಕೆಲಸ ಮಾಡುವುದು ಅಸಾಧ್ಯವಾಗುವುದು ಬದಲಾಗಿ ಮಾಡಿಯೇ ತೀರುತ್ತೇನೆ ಎನ್ನುವ ಮನಸ್ಸು ಇದ್ದರೆ  ಎಂತಹ ಕಷ್ಟಕರವಾದ ಕೆಲಸವೂ ಮನಸ್ಸಿದ್ದರೆ ಮಾರ್ಗವೆನ್ನುವಂತೆ ಅದಕ್ಕೊಂದು ಮಾರ್ಗಸಿಕ್ಕೇ ಸಿಗುತ್ತದೆ.  ಗಾದೆಗಳು ನಮ್ಮ ಹಿರಿಯರು ಬದುಕಲು ನಮಗೆ ಹೇಳಿಕೊಟ್ಟ ಪಾಠ. ಯಾವ ಕೆಲಸವನ್ನೇ ಆಗಲಿ ಮಾಡಬೇಕು ಎನ್ನುವ ಉತ್ಕಟ ಬಯಕೆ ಹುಟ್ಟಿಬಿಟ್ಟರೆ ಮಿಕ್ಕ ದಾರಿ ತಾನಾಗೇ ತೆರೆದುಕೊಳ್ಳುತ್ತದೆ. ಏನಾದರಾಗಲಿ ಅದನ್ನು ಸಾಧಿಸಿಯೇ ತೀರುತ್ತೇನೆ ಎನ್ನುವ   ಛಲ ವಿದ್ದರೆ  ದಾರಿ ಗೋಚರಿಸುತ್ತದೆ.  ಆದ್ದರಿಂದ ಯಾವದೇ ಕೆಲಸ ಮಾಡಲು ಮನಸ್ಸು ಬೇಕು ಮನಸ್ಸಿದ್ದರೆ   ಆ ಕೆಲಸ ಸಾಧಿಸಲು ಮಾರ್ಗ  ಸಿಗುತ್ತದೆ

ಶ್ರೀಮತಿ ಪಂಕಜಾ.ಕೆ. ಮುಡಿಪು ಕುರ್ನಾಡು ದ ಕ 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...