ಖಿದ್ಮಾ ಪೌಂಡೇಶನ್ ಕರ್ನಾಟಕ
ಸ್ಪರ್ಧೆಗಾಗಿ ಗಾದೆ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ
ಗಾದೆಗಳು ಜನಪದರ ಜೀವನದ ಅನುಭವಗಳ ಸಾರವಾಗಿದೆ.ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎನ್ನುವುದು ಒಂದು ಪ್ರಸಿದ್ಧ ನುಡಿಗಟ್ಟು. ಗಾದೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಜೀವನದ ಮೌಲ್ಯಗಳು ಹೆಚ್ಚಾಗುತ್ತದೆ. ಆದ್ದರಿಂದ ಗಾದೆಗಳು ವೇದಗಳಿಗೆ ಸಮಾನವೆಂದಿದ್ದಾರೆ. ಅಂತಹ ಪ್ರಸಿದ್ಧ ಗಾದೆ ಗಳಲ್ಲಿ ಮನಸ್ಸಿದ್ದರೆ ಮಾರ್ಗ ಎನ್ನುವುದು ಒಂದು ಜನಪ್ರಿಯ ಗಾದೆಮಾತು ಆಗಿದೆ. ನಾವು ಯಾವುದೇ ಕೆಲಸವನ್ನು ಆಸಕ್ತಿಯಿಂದ ಮನಸ್ಸುಕೊಟ್ಟು ಮಾಡಿದರೆ ಆ ಕೆಲಸ ಸಫಲವಾಗುವುದು ಮನಸ್ಸಿಲ್ಲದೆ ಮಾಡಿದ ಯಾವುದೇ ಕೆಲಸವು ಸಫಲವಾಗಲಾರದು.. ಕೆಲಸದ ಮೇಲೆ ಪ್ರೀತಿಯಿದ್ದರೆ ,ಸಹಜವಾಗಿಯೇ ಕೆಲಸದ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಮತ್ತು ಆಸಕ್ತಿಯಿಂದ ಮಾಡುವುದರಿಂದ ಕೆಲಸ ಯಶಸ್ವಿಯಾಗುತ್ತದೆ. ನಮ್ಮ ಕೈಯಲ್ಲಿ ಆಗುವುದಿಲ್ಲವೆಂದು ಯೋಚಿಸಿದರೆ ಯಾವ ಕೆಲಸ ಮಾಡುವುದು ಅಸಾಧ್ಯವಾಗುವುದು ಬದಲಾಗಿ ಮಾಡಿಯೇ ತೀರುತ್ತೇನೆ ಎನ್ನುವ ಮನಸ್ಸು ಇದ್ದರೆ ಎಂತಹ ಕಷ್ಟಕರವಾದ ಕೆಲಸವೂ ಮನಸ್ಸಿದ್ದರೆ ಮಾರ್ಗವೆನ್ನುವಂತೆ ಅದಕ್ಕೊಂದು ಮಾರ್ಗಸಿಕ್ಕೇ ಸಿಗುತ್ತದೆ. ಗಾದೆಗಳು ನಮ್ಮ ಹಿರಿಯರು ಬದುಕಲು ನಮಗೆ ಹೇಳಿಕೊಟ್ಟ ಪಾಠ. ಯಾವ ಕೆಲಸವನ್ನೇ ಆಗಲಿ ಮಾಡಬೇಕು ಎನ್ನುವ ಉತ್ಕಟ ಬಯಕೆ ಹುಟ್ಟಿಬಿಟ್ಟರೆ ಮಿಕ್ಕ ದಾರಿ ತಾನಾಗೇ ತೆರೆದುಕೊಳ್ಳುತ್ತದೆ. ಏನಾದರಾಗಲಿ ಅದನ್ನು ಸಾಧಿಸಿಯೇ ತೀರುತ್ತೇನೆ ಎನ್ನುವ ಛಲ ವಿದ್ದರೆ ದಾರಿ ಗೋಚರಿಸುತ್ತದೆ. ಆದ್ದರಿಂದ ಯಾವದೇ ಕೆಲಸ ಮಾಡಲು ಮನಸ್ಸು ಬೇಕು ಮನಸ್ಸಿದ್ದರೆ ಆ ಕೆಲಸ ಸಾಧಿಸಲು ಮಾರ್ಗ ಸಿಗುತ್ತದೆ
ಶ್ರೀಮತಿ ಪಂಕಜಾ.ಕೆ. ಮುಡಿಪು ಕುರ್ನಾಡು ದ ಕ
Comments
Post a Comment