ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಭಾವಗೀತೆ
ದತ್ತಪದ..ಮದುರ ಮಾತು
ಒಲವಿನ ಬಲೆ
ಮದುರ ಮಾತಲಿ ಮನವ ಸೆಳೆಯುತ
ಒಲಿಸಿಕೊಂಡನು ಮಾಧವ
ಮೋಹನಾಂಗನ ಒಲವಗಾನಕೆ
ಸೋತು ಹೋದಳು ರಾಧೆಯು
ಒಲವ ಬಲೆಯಲಿ ಕೆಡವುತಲಿ
ಕಣ್ಣ ನೋಟದಿ ಬಂಧಿಸಿ
ತರಳೆ ಸೋತಳು ಒಲವಿನಾಟಕೆ
ಬಯಕೆ ಮನದಲಿ ಕಾಡಿಸಿ
ಚೆಲುವ ಕನಸನು ಮನದಿ ಮೂಡಿಸಿ
ಮನವ ತಣಿಸಿದೆ ಮಾದವ
ನಿನ್ನ ಕೊಳಲಿನ ಗಾನ ಕೇಳುತ
ಮನವು ತೇಲಿತು ಬಾನಲಿ
ರಾತ್ರಿ ಹಗಲು ಸರಿಯುತಿರುವುದು
ತಿಳಿಯದಂತ ಬಂಧುರ
ಕನಸು ಮನಸಲಿ ತುಂಬಿ ನಿಂತಿದೆ
ನಿನ್ನ ನೆನಪಿನ ಹೂರಣ
ಶ್ರೀಮತಿ.ಪಂಕಜಾ.ಕೆ. ಮುಡಿಪು ಕುರ್ನಾಡು ದಕ
Comments
Post a Comment