ಗುರುಕುಲ ಧಾರವಾಡ ಘಟಕ ಸ್ಪರ್ಧೆಗಾಗಿ
ಜಡೆಕವನ
ವಿಷಯ. ಸೋಮಾರಿ
ಕೆಲಸವಿಲ್ಲದವ
ಕೆಲಸ ಕಾರ್ಯವಿಲ್ಲದೆ ಅಲೆಯುತ
ಅಲೆಯುತ ದಿನ ಕಳೆಯುವವನು ಸೋಮಾರಿ
ಸೋಮಾರಿಯಾದವ ದುಡಿಯಲಾರ
ದುಡಿಯಲಾರದೆ ಇತರರ ಹಂಗಿನಲಿ ಇರುವನು
ಇರುವನು ಕಾಡಿ ಬೇಡಿ ತಿನ್ನುತ
ತಿನ್ನುತ ಇರುವುದೇ ಇವನ ಕಾಯಕ
ಕಾಯಕ ಯೋಗಿಗೆ ಇರುವ ಬೆಲೆ ಇವನಿಗಿದೆಯೇ
ಇವನಿಗಿದೆಯೇ ಮಾನ ಮರ್ಯಾದೆ
ಮರ್ಯಾದೆಯಿಂದ ದುಡಿಯಬೇಕು
ದುಡಿದು ತಿನ್ನುವುದು ಉತ್ತಮ
ಉತ್ತಮ ಗುಣ ನಡತೆಯಿದ್ದರೆ ಗೌರವ
ಗೌರವಯುತ ಜೀವನ ನಡೆಸಬೇಕು
ನಡೆಸಬೇಕು ಜೀವನವನ್ನು ಸರಾಗವಾಗಿ ಸರಾಗವಾಗಿ ಮಾಡಬೇಕು ಯಾವುದೇ ಕೆಲಸ
ಶ್ರೀಮತಿ ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ .ಮಾಸ್ಟರ್
ಕುರ್ನಾಡು.ದ.ಕ.
Comments
Post a Comment