ಗುರುಕುಲಾ ಧಾರವಾಡ ಘಟಕದ ಸ್ಪರ್ಧೆಗಾಗಿ
ವಾರಕ್ಕೊಂದು ಕಥೆ ..ಸಣ್ಣ ಕಥೆ
ವಿಷಯ .ಮನ ಮುಟ್ಟಿದ ಮಾತು
ಶೀರ್ಷಿಕೆ. .. ಬುದ್ಧಿಮಾತು
ನಾನು ಚಿಕ್ಕವಳಿದ್ದಾಗ ಶಾಲೆಗೆ ರಜೆ ಇದ್ದಾಗ ಒಂದು ದಿನ ಕೆಲಸ ಮಾಡಿದ್ದು ಸರಿಯಾಗಲಿಲ್ಲವೆಂದು, ತಂದೆ ತಾಯಿ ಎಲ್ಲರ ಎದುರಿಗೆ ಬೈದು ಬಿಟ್ಟರು . ಇದರಿಂದ ಬೇಸರವಾಗಿ ನಾನು ಊಟ, ತಿಂಡಿಗೆ ಬಾರದೆ ತೋಟದಲ್ಲಿ ಕುಳಿತು ಮನಸಾರೆ ಅತ್ತು ಬಿಟ್ಟೆ .ಆಗ ತಂದೆಯವರು ಅಲ್ಲಿಗೆ ಬಂದು ಪಂಕಜಾ ಇಷ್ಟು ಚಿಕ್ಕ ವಿಷಯಕ್ಕೆ ಅಳುವುದೇ ,ತಪ್ಪುಗಳಾದಾಗ ಬೈದರೆ ಬೇಸರ ಪಟ್ಟು ಊಟ ತಿಂಡಿ ಬಿಟ್ಟರೆ ಮುಂದಕ್ಕೆ ಜೀವನದಲ್ಲಿ ನೀನು ಕೆಲಸಕ್ಕೆ ಹೋದಾಗ ನಿನ್ನ ಮೇಲಧಿಕಾರಿಗಳು ಬೈದರೆಂದು ಕೆಲಸ ಮಾಡುವುದನ್ನೇ ಬಿಟ್ಟು ಬಿಡುತ್ತಿಯಾ ಇಲ್ಲ ಅಲ್ಲವೇ ಯಾರು ಬೈದರೂ ತಪ್ಪು ಏನು ಎಂದು ತಿಳಿದು ಮುಂದಕ್ಕೆ ತಪ್ಪಾಗದಂತೆ ನೋಡಿಕೊಳ್ಳುತ್ತಾ ಜೀವನದಲ್ಲಿ ಯಶಸ್ಸು ಪಡೆಯಬೇಕು ,ಯಾರೋ ಏನೋ ಅಂದರು,ಇನ್ನಾರೋ ಬೈದರೂ ಎನ್ನುವ ಕಾರಣಕ್ಕೆ ಅಳುತ್ತಾ ಊಟ ತಿಂಡಿ ಬಿಟ್ಟು ಕುಳಿತುಕೊಳ್ಳಬಾರದು .ಮುನ್ನುಗ್ಗಿ ಸಾಧಿಸಿ ತೋರಿಸಬೇಕು. ಇದರಿಂದ ನಿನ್ನನ್ನು ಹೇಳುವವರು ಮುಂದಕ್ಕೆ ನಿನ್ನನ್ನು ಗೌರವಿಸುತ್ತಾರೆ ಎಂದು ಬುದ್ದಿ ಮಾತು ಹೇಳಿ ನನ್ನನ್ನು ಪ್ರೋತ್ಸಾಹಿಸಿ ಮನೆಗೆ ಕರೆದುಕೊಂಡು ಬಂದರು .ತಂದೆಯವರು ಹೇಳಿದ ಮನಮುಟ್ಟಿದ ಈ ಮಾತು ಇಂದು ನಾನೊರ್ವ ಉತ್ತಮ ಕೆಲಸಗಾತಿ, ಲೇಖಕಿ ಕವಯಿತ್ರಿಯಾಗಿ ಬಾಳಲು ಸಾಧ್ಯವಾಯಿತು.
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು..ದ.ಕ.574153
Comments
Post a Comment