ತುಳು ಕನ್ನಡ ಸಾಹಿತ್ಯ ಸ್ಪರ್ಧೆಗಾಗಿ
ಗಜಲ್
ದತ್ತಪದ ..ಭಾರತ
ಸರ್ವಜನಾಂಗದ ಶಾಂತಿಯನ್ನು ಬಯಸುತ್ತದೆ ಭಾರತ
ಜಾತ್ಯತೀತ ರಾಷ್ಟ್ರವೆಂಬ ಹೆಗ್ಗಳಿಕೆಯನ್ನು ಪಡೆದಿದೆ ಭಾರತ
ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದರು ಹಲವರು
ವಿಶ್ವದ ಅತ್ಯಂತ ಬೃಹತ್ ಸಂವಿಧಾನ ರಚಿಸಿದೆ ಭಾರತ
ಹಸಿರು ಗುಡ್ಡ ಬೆಟ್ಟಗಳಿಂದ ತುಂಬಿ ನಯನ ಮನೋಹರವಾಗಿದೆ ನಮ್ಮದೇಶ
ಹಲವಾರು ಪುಣ್ಯ ನದಿಗಳು ಹರಿಯುವ ಬೀಡಾಗಿದೆ ಭಾರತ
ನೂರಾರು ಕಲಿಗಳು ಬಾಳಿ ಬದುಕಿದ ನಾಡಲ್ಲವೇ ಇದು?
ಸರ್ವ ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಭಾರತ
ಪಂಕಜಾಳ ಹೃದಯದಲ್ಲಿ ದೇಶಾಭಿಮಾನ ತುಂಬಿ ತುಳುಕಿದೆ
ಸ್ವವಾಲಂಬಿ ಆತ್ಮನಿರ್ಭರದದ ಕನಸು ತುಂಬಿ ನಿಂತಿದೆ ಭಾರತ
ಶ್ರೀಮತಿ.ಪಂಕಜಾ.ಕೆ. ಮುಡಿಪು
Comments
Post a Comment