ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ಧಾರವಾಡ ವಾರಕ್ಕೊಂದು ಸ್ಪರ್ಧೆಗಾಗಿ
ಚಿತ್ರಕ್ಕೊಂದು ಕವನ
ಬೀದಿಗೆ ಬಿದ್ದ ಬದುಕು
ಕೊರೊನಾ ಮಾರಿಯ ಹಿಡಿತಕೆ ಸಿಕ್ಕಿ
ಅನಾಥವಾಯಿತು ಜೀವ
ಬಾಳಿನ ಭರವಸೆ ಕುಂದುತಲಿರಲು
ಸೇವೆಗೆ ನಿಂತರು ಜನರು
ಮಾರಿರೋಗದ ಹೊಡೆತಕೆ
ಬೀದಿಗೆ ಬಿದ್ದಿತು ಬದುಕು
ಬಡತನವೆನ್ನುವ ಕರಿನೆರಳಿನಲಿ
ಸಾಗುತಿದೆ ಬಡವರ ಬದುಕು
ಮುಖಗವಸನು ಹಾಕಿದ ತರುಣನು
ಹಂಚುತಲಿರುವನು ಅನ್ನವನು
ಕವಚವ ತೊಟ್ಟ ಅವನನು ಕಾಣುತ
ಮಗುವಿನ ಕಣ್ಣಲಿ ಭಯವು
ತಟ್ಟೆಯ ಹಿಡಿಯುತ ಸಾಲಾಗಿ ಬರಲು
ಹಾಕುವರು ತಟ್ಟೆಗೆ ಚಿತ್ರಾನ್ನ
ಕೊರೊನಾ ಸಂತ್ರಸ್ತರ ಸೇವೆಯಲಿರುತಲಿ
ಬಾಳನು ಸಾಗಿಸುವನೀತ
ತುತ್ತಿನ ಕೂಳಿಗೆ ಬೇಡುವ ಜೀವನ
ತಬ್ಬಲಿ ಮಗುವಿನದಾಯ್ತು
ಮಾರಿ ರೋಗದ ಧಾಳಿಗೆ ಸಿಲುಕಿ
ಮಗುವಿನ ಬಾಳಿಡೀ ಗೋಳಾಯ್ತು
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್. ಮಾಸ್ಟರ್.ಕುರ್ನಾಡು ದ.ಕ.574153
Comments
Post a Comment