Skip to main content

ಕವಿಸಾಹಿತಿಗಳ ಜೀವಾಳ ಒಲವಿನ ಪಯಣ ಕಥೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕ್ಕೊಂದು ಕಥೆ ಸ್ಪರ್ಧೆಯಲ್ಲಿ.  ಮೆಚ್ಚುಗೆ

ಒಲವಿನ ಪಯಣ

ನಿರ್ಮಲಾಪುರದ ಜಮೀನುದಾರ ಶಿವಣ್ಣನ ಮಗ ರಂಜನ್ ವಿದ್ಯೆಬುದ್ಧಿಯಲ್ಲಿ ಜಾಣನಾಗಿದ್ದರೂ ಕೃಷಿಯ ಬಗ್ಗೆ ಒಲವು ಇದ್ದುದರಿಂದ ಕೃಷಿಯಲ್ಲಿ ಉನ್ನತ ವ್ಯಾಸಂಗ ಮಾಡಿ ಹಳ್ಳಿಯ ಮನೆಯಲ್ಲಿ ನೆಲೆಸಿ ತಂದೆಯ ಜತೆ ಕೃಷಿ ಕಾರ್ಯದಲ್ಲಿ ತೊಡಗಿದ್ದನು.  ಅವನ ಮಾವನ ಮಗಳಾದ ಮೀರಳಿಗೆ ರಂಜನ್ ನೆಂದರೆ ಅಚ್ಚುಮೆಚ್ಚು .ಆದರೆ ಅವಳ ತಂದೆ ಮಾತ್ರ ಅವಳನ್ನು ಆ ಹಳ್ಳಿಗೆ ಹೋಗಲು ಬಿಡುತ್ತಿರಲಿಲ್ಲ ಪ್ರಕೃತಿ ಪ್ರೇಮಿಯಾಗಿದ್ದ ಮೀರಳಿಗೆ ಅತ್ತೆಯ ಮನೆಗೆ ಹೋಗುವ ಆಸೆಯಿದ್ದರೂ ತಂದೆಯ ಮಾತನ್ನು ಮೀರಿ ಹೋಗುವುದು ಅಸಾಧ್ಯವಾಗಿತ್ತು. ತನಗೆ ಕೃಷಿಯಲ್ಲಿ ಆಸಕ್ತಿ ಇದ್ದರೂ ತಂದೆ ಯ ಒತ್ತಾಯಕ್ಕೆ ಇಂಜಿನೀಯರ್ ಕಲಿತ ಮೀರಾ ಕಲಿತ ತಕ್ಷಣ ಕೆಲಸಕ್ಕೂ ಸೇರಿದ್ದಳು.ಆದರೆ ಯಾವ ಹುಡುಗನನ್ನು ತೋರಿಸಿದರೂ ಮದುವೆಗೆ ಒಪ್ಪದ ಮೀರಾಳ ಮನಸು ರಂಜನನಲ್ಲಿಲೀನವಾಗಿತ್ತು.  ಅದೊಂದು ದಿನ  ಮೀರಾ ಅಮ್ಮ ಅಪ್ಪನನ್ನು  ಒಪ್ಪಿಸಿ ಅತ್ತೆಯ ಮನೆಗೆ ಬಂದಿಳಿದಳು .ಪೇಟೆಯಲ್ಲಿ ಕಲಿತ ಹೆಣ್ಣಾಗಿದ್ದರೂ, ಸೀರೆ ಉಡುವುದೆಂದರೆ ಮೀರಳಿಗೆ ತುಂಬಾ ಇಷ್ಟ   ಆಕೆ ಆ ದಿನ ಅಳ್ಳಕವಾಗಿ ಜಡೆ ಹೆಣೆದು  ಕಿವಿಯ ಬದಿಗೆ ಹೂ ಮುಡಿದು ಬಳುಕುತ್ತಾ ಬರುವುದನ್ನು ಕಂಡ ರಂಜನ್  ಅವಳ ಸೌಂದರ್ಯಕ್ಕೆ ಬೆರಗಾಗಿ  ತಮಾಷೆ ಮಾಡಿದಾಗ ನಸು ಲಜ್ಜೆಯಿಂದ ಮೀರಾ ನಗುಮುಖದಿಂದ ಅವನ ತಮಾಷೆ ಮಾತುಗಳನ್ನು ಕೇಳುತ್ತಿದ್ದಳು. ಆ ಹಳ್ಳಿಯ ಪ್ರಕೃತಿ ಸೌಂದರ್ಯ ವನ್ನು ಕಂಡು ಬೆರಗಾದ ಮೀರಾ ತನ್ನ ಆಯ್ಕೆಗಾಗಿ ಹೆಮ್ಮೆ ಪಟ್ಟುಕೊಂಡಳು .ರಂಜನ್ ತಮ್ಮ ಹಳೆಯ ಮುಳಿಹುಲ್ಲಿನ ಮನೆಯನ್ನು ಹಾಗೆ ಉಳಿಸಿ ಹೊಸದಾಗಿ ಹಂಚಿನ ಮನೆಯನ್ನು ಕಟ್ಟಿದ್ದು  ಸದ್ಯದಲ್ಲಿಯೇ ಅದರ ಗೃಹಪ್ರವೇಶ ಮಾಡುವ ಮತ್ತು ಅದೇ ದಿನವೇ ತಾನು ಇಷ್ಟಪಟ್ಟ ಮೀರಳನ್ನು ಮನೆತುಂಬಿಸಬೇಕೆನ್ನುವ ಅಭಿಪ್ರಾಯವನ್ನು ಹೊಂದಿದ್ದ .ಇದಕ್ಕೆ ಮೀರಳೂ ಒಪ್ಪಿದ್ದಳು.ಇನ್ನು ಅತ್ತೆ ಮಾವನನ್ನು ಒಪ್ಪಿಸುವ ಕೆಲಸ ಮಾತ್ರ ಬಾಕಿ ಇತ್ತು .ಅದಕ್ಕಾಗಿ ಒಂದು ಶುಭದಿನ ಅತ್ತೆ ಮಾವನನ್ನು ತಮ್ಮೂರಿಗೆ ಆಹ್ವಾನಿಸಿದ ರಂಜನ್  ತಾನು ಸರಳವಾಗಿ ಪಂಚೆ ಶರಟು ಧರಿಸಿ  ನಗುಮುಖದಿಂದ ಅವರನ್ನು ಸ್ವಾಗತಿಸಿದ.ಅಳಿಯನ ಹೊಸಮನೆ  ಹಳ್ಳಿಯ ಸುಂದರ ಪರಿಸರವನ್ನು ಕಂಡ ಮೀರಳ ತಂದೆ ಅವರಿಬ್ಬರ ಮದುವೆಗೆ ತನ್ನ ಒಪ್ಪಿಗೆ ಕೊಟ್ಟು ಬಿಟ್ಟಿದ್ದರಿಂದ  ಮೀರಾ ಮತ್ತು ರಂಜನ್ ತುಂಬಾ ಖುಷಿಯಲ್ಲಿ ಇದ್ದರು.  ಮುಳಿಹುಲ್ಲಿನ ಹಳೆಯ ಮನೆಯ ಹತ್ತಿರ ನಿಂತು ಮಾತನಾಡುತ್ತಿದ್ದಾಗ.,ರಂಜನ್ ತನ್ನ  ಶಾಲಾದಿನಗಳ ನಗೆ ಪ್ರಸಂಗವನ್ನು ಹೇಳಿ ಮೀರಳನ್ನು ನಗಿಸುತ್ತಿದ್ದನು.ಮೀರಳಿಗೆ ಅವನನ್ನು  ಕಂಡಾಗಲೆಲ್ಲಾ ನಾಚಿಕೆಯಿಂದ  ಮುಖ ಕೆಂಪಾಗುತ್ತಿತ್ತು .ಅಂತೂ ಹಿರಿಯರ ಒಪ್ಪಿಗೆಯಿಂದ ಇಬ್ಬರ ಮದುವೆಯೂ ವಿಜೃಂಭಣೆಯಿಂದ ರಂಜನ್ ಇಷ್ಟದಂತೆ ನೆರವೇರಿ ಹೊಸಮನೆಯ ಗೃಹಪ್ರವೇಶವನ್ನು ನವ ದಂಪತಿಗಳು ಮಾಡಿ ಇಬ್ಬರೂ ಹಳ್ಳಿಯ ಪರಿಸರದಲ್ಲಿ ಜಕ್ಕವಕ್ಕಿಗಳಂತೆ  ನಲಿಯುತ್ತಿದ್ದರು ಹಳ್ಳಿಯ ಪರಿಸರ ಇಷ್ಟೊಂದು ಸುಂದರ ಇರಬಹುದೆನ್ನುವ ಕಲ್ಪನೆಯನ್ನೇ ಮಾಡಿರದ ಮೀರಾ ಈಗ ಪರಮಸುಖಿ. ಇವರಿಬ್ಬರ ಪ್ರೀತಿಯನ್ನು ಕಂಡು ಇಬ್ಬರ ತಂದೆ ತಾಯಿಯರು ಖುಷಿ ಪಡುತ್ತಿದ್ದರು.

ಶ್ರೀಮತಿ.ಪಂಕಜಾ. ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...