ಕವಿ ಸಾಹಿತಿಗಳ ಜೀವಾಳ ಚಿತ್ರ ಕ್ಕೊಂದು ಕಥೆ ಸ್ಪರ್ಧೆಯಲ್ಲಿ. ಮೆಚ್ಚುಗೆ
ಒಲವಿನ ಪಯಣ
ನಿರ್ಮಲಾಪುರದ ಜಮೀನುದಾರ ಶಿವಣ್ಣನ ಮಗ ರಂಜನ್ ವಿದ್ಯೆಬುದ್ಧಿಯಲ್ಲಿ ಜಾಣನಾಗಿದ್ದರೂ ಕೃಷಿಯ ಬಗ್ಗೆ ಒಲವು ಇದ್ದುದರಿಂದ ಕೃಷಿಯಲ್ಲಿ ಉನ್ನತ ವ್ಯಾಸಂಗ ಮಾಡಿ ಹಳ್ಳಿಯ ಮನೆಯಲ್ಲಿ ನೆಲೆಸಿ ತಂದೆಯ ಜತೆ ಕೃಷಿ ಕಾರ್ಯದಲ್ಲಿ ತೊಡಗಿದ್ದನು. ಅವನ ಮಾವನ ಮಗಳಾದ ಮೀರಳಿಗೆ ರಂಜನ್ ನೆಂದರೆ ಅಚ್ಚುಮೆಚ್ಚು .ಆದರೆ ಅವಳ ತಂದೆ ಮಾತ್ರ ಅವಳನ್ನು ಆ ಹಳ್ಳಿಗೆ ಹೋಗಲು ಬಿಡುತ್ತಿರಲಿಲ್ಲ ಪ್ರಕೃತಿ ಪ್ರೇಮಿಯಾಗಿದ್ದ ಮೀರಳಿಗೆ ಅತ್ತೆಯ ಮನೆಗೆ ಹೋಗುವ ಆಸೆಯಿದ್ದರೂ ತಂದೆಯ ಮಾತನ್ನು ಮೀರಿ ಹೋಗುವುದು ಅಸಾಧ್ಯವಾಗಿತ್ತು. ತನಗೆ ಕೃಷಿಯಲ್ಲಿ ಆಸಕ್ತಿ ಇದ್ದರೂ ತಂದೆ ಯ ಒತ್ತಾಯಕ್ಕೆ ಇಂಜಿನೀಯರ್ ಕಲಿತ ಮೀರಾ ಕಲಿತ ತಕ್ಷಣ ಕೆಲಸಕ್ಕೂ ಸೇರಿದ್ದಳು.ಆದರೆ ಯಾವ ಹುಡುಗನನ್ನು ತೋರಿಸಿದರೂ ಮದುವೆಗೆ ಒಪ್ಪದ ಮೀರಾಳ ಮನಸು ರಂಜನನಲ್ಲಿಲೀನವಾಗಿತ್ತು. ಅದೊಂದು ದಿನ ಮೀರಾ ಅಮ್ಮ ಅಪ್ಪನನ್ನು ಒಪ್ಪಿಸಿ ಅತ್ತೆಯ ಮನೆಗೆ ಬಂದಿಳಿದಳು .ಪೇಟೆಯಲ್ಲಿ ಕಲಿತ ಹೆಣ್ಣಾಗಿದ್ದರೂ, ಸೀರೆ ಉಡುವುದೆಂದರೆ ಮೀರಳಿಗೆ ತುಂಬಾ ಇಷ್ಟ ಆಕೆ ಆ ದಿನ ಅಳ್ಳಕವಾಗಿ ಜಡೆ ಹೆಣೆದು ಕಿವಿಯ ಬದಿಗೆ ಹೂ ಮುಡಿದು ಬಳುಕುತ್ತಾ ಬರುವುದನ್ನು ಕಂಡ ರಂಜನ್ ಅವಳ ಸೌಂದರ್ಯಕ್ಕೆ ಬೆರಗಾಗಿ ತಮಾಷೆ ಮಾಡಿದಾಗ ನಸು ಲಜ್ಜೆಯಿಂದ ಮೀರಾ ನಗುಮುಖದಿಂದ ಅವನ ತಮಾಷೆ ಮಾತುಗಳನ್ನು ಕೇಳುತ್ತಿದ್ದಳು. ಆ ಹಳ್ಳಿಯ ಪ್ರಕೃತಿ ಸೌಂದರ್ಯ ವನ್ನು ಕಂಡು ಬೆರಗಾದ ಮೀರಾ ತನ್ನ ಆಯ್ಕೆಗಾಗಿ ಹೆಮ್ಮೆ ಪಟ್ಟುಕೊಂಡಳು .ರಂಜನ್ ತಮ್ಮ ಹಳೆಯ ಮುಳಿಹುಲ್ಲಿನ ಮನೆಯನ್ನು ಹಾಗೆ ಉಳಿಸಿ ಹೊಸದಾಗಿ ಹಂಚಿನ ಮನೆಯನ್ನು ಕಟ್ಟಿದ್ದು ಸದ್ಯದಲ್ಲಿಯೇ ಅದರ ಗೃಹಪ್ರವೇಶ ಮಾಡುವ ಮತ್ತು ಅದೇ ದಿನವೇ ತಾನು ಇಷ್ಟಪಟ್ಟ ಮೀರಳನ್ನು ಮನೆತುಂಬಿಸಬೇಕೆನ್ನುವ ಅಭಿಪ್ರಾಯವನ್ನು ಹೊಂದಿದ್ದ .ಇದಕ್ಕೆ ಮೀರಳೂ ಒಪ್ಪಿದ್ದಳು.ಇನ್ನು ಅತ್ತೆ ಮಾವನನ್ನು ಒಪ್ಪಿಸುವ ಕೆಲಸ ಮಾತ್ರ ಬಾಕಿ ಇತ್ತು .ಅದಕ್ಕಾಗಿ ಒಂದು ಶುಭದಿನ ಅತ್ತೆ ಮಾವನನ್ನು ತಮ್ಮೂರಿಗೆ ಆಹ್ವಾನಿಸಿದ ರಂಜನ್ ತಾನು ಸರಳವಾಗಿ ಪಂಚೆ ಶರಟು ಧರಿಸಿ ನಗುಮುಖದಿಂದ ಅವರನ್ನು ಸ್ವಾಗತಿಸಿದ.ಅಳಿಯನ ಹೊಸಮನೆ ಹಳ್ಳಿಯ ಸುಂದರ ಪರಿಸರವನ್ನು ಕಂಡ ಮೀರಳ ತಂದೆ ಅವರಿಬ್ಬರ ಮದುವೆಗೆ ತನ್ನ ಒಪ್ಪಿಗೆ ಕೊಟ್ಟು ಬಿಟ್ಟಿದ್ದರಿಂದ ಮೀರಾ ಮತ್ತು ರಂಜನ್ ತುಂಬಾ ಖುಷಿಯಲ್ಲಿ ಇದ್ದರು. ಮುಳಿಹುಲ್ಲಿನ ಹಳೆಯ ಮನೆಯ ಹತ್ತಿರ ನಿಂತು ಮಾತನಾಡುತ್ತಿದ್ದಾಗ.,ರಂಜನ್ ತನ್ನ ಶಾಲಾದಿನಗಳ ನಗೆ ಪ್ರಸಂಗವನ್ನು ಹೇಳಿ ಮೀರಳನ್ನು ನಗಿಸುತ್ತಿದ್ದನು.ಮೀರಳಿಗೆ ಅವನನ್ನು ಕಂಡಾಗಲೆಲ್ಲಾ ನಾಚಿಕೆಯಿಂದ ಮುಖ ಕೆಂಪಾಗುತ್ತಿತ್ತು .ಅಂತೂ ಹಿರಿಯರ ಒಪ್ಪಿಗೆಯಿಂದ ಇಬ್ಬರ ಮದುವೆಯೂ ವಿಜೃಂಭಣೆಯಿಂದ ರಂಜನ್ ಇಷ್ಟದಂತೆ ನೆರವೇರಿ ಹೊಸಮನೆಯ ಗೃಹಪ್ರವೇಶವನ್ನು ನವ ದಂಪತಿಗಳು ಮಾಡಿ ಇಬ್ಬರೂ ಹಳ್ಳಿಯ ಪರಿಸರದಲ್ಲಿ ಜಕ್ಕವಕ್ಕಿಗಳಂತೆ ನಲಿಯುತ್ತಿದ್ದರು ಹಳ್ಳಿಯ ಪರಿಸರ ಇಷ್ಟೊಂದು ಸುಂದರ ಇರಬಹುದೆನ್ನುವ ಕಲ್ಪನೆಯನ್ನೇ ಮಾಡಿರದ ಮೀರಾ ಈಗ ಪರಮಸುಖಿ. ಇವರಿಬ್ಬರ ಪ್ರೀತಿಯನ್ನು ಕಂಡು ಇಬ್ಬರ ತಂದೆ ತಾಯಿಯರು ಖುಷಿ ಪಡುತ್ತಿದ್ದರು.
ಶ್ರೀಮತಿ.ಪಂಕಜಾ. ಕೆ. ಮುಡಿಪು
Comments
Post a Comment