ಗುರುಕುಲಾ ಕಲಾ ಪ್ರತಿಷ್ಠಾನ ಧಾರವಾಡ ಘಟಕ
ವಾರದ ಕವನ ಸ್ಪರ್ಧೆಗಾಗಿ
ವಿಷಯ ..ರಾಷ್ಟ್ರಕವಿ ಕುವೆಂಪು
ವಿಶ್ವ ಮಾನವ ಕುವೆಂಪು
ಕನ್ನಡದ ಹೆಮ್ಮೆಯ ಮುಕುಟಮಣಿ
ಕನ್ನಡ ಸಾಹಿತ್ಯ ಉಳಿಸಿ ಬೆಳೆಸಿದ ಕಣ್ಮಣಿ
ಕುವೆಂಪು ಎಂಬ ವಿಶ್ವಮಾನವರು
ಹಲವು ಪ್ರಕಾರದ ಸಾಹಿತ್ಯ ರಚಿಸಿದವರು
ಕುಪ್ಪಳ್ಳಿಯ ವೆಂಕಟಪ್ಪ ಪುಟ್ಟಪ್ಪನವರು
ಕುವೆಂಪು ಎಂಬ ಕಾವ್ಯನಾಮದಿಂದ ಪರಿಚಿತರು
ರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿದವರು
ಸಂದಿದೆ ಇವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕಾರ
ಅಗ್ರಮಾನ್ಯ ಕವಿ ಕಾದಂಬರಿ ನಾಟಕಕಾರ
ಅತ್ಯುತ್ತಮ ವಿಮರ್ಶಕ ಚಿಂತಕ ಕಥೆಗಾರ
ಕರ್ನಾಟಕ ರತ್ನ ಪಂಪ ಪ್ರಶಸ್ತಿ ಪುರಸ್ಕಾರ
ಪದ್ಮವಿಭೂಷಣ ಜ್ಞಾನಪೀಠ ಪ್ರಶಸ್ತಿಗಳ ಹಾರ
ಇಪ್ಪತ್ತನೇ ಶತಮಾನ ಕಂಡ ದೈತ್ಯ ಪ್ರತಿಭೆ
ಯುಗದ ಕವಿ ಜಗದ ಕವಿ ಎನಿಸಿದ ಪ್ರಭೆ
ಕಾನೂರು ಹೆಗ್ಗಡತಿ ಬೃಹತ್ ಕಾದಂಬರಿ
ಸಂದಿದೆ ಇವರಿಗೆ ಹಲವು ಪ್ರಶಸ್ತಿಯ ಗರಿ
ಆಧುನಿಕ ವಾಲ್ಮೀಕಿ ಎಂದು ಬಿರುದಾಂಕಿತರು
ನಾಡಗೀತೆಯ ರಚಿಸಿ ಜನಮಾನಸದಲಿ ನಿಂತರು
ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ
ಮೂವತ್ತಕ್ಕೂ ಮಿಕ್ಕಿ ಕಾವ್ಯಗಳ ರಚಿಸಿದವರು
ಶ್ರೀಮತಿ.ಪಂಕಜಾ. ಕೆ. ಮುಡಿಪು.
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ
Comments
Post a Comment