[17/12/2020, 7:54 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ ಭಾವಗೀತೆ
ದತ್ತಪದ..ಭೂಷಣ
ಬಾಳ ಜ್ಯೋತಿ
ಬಾಳೆಂಬ ಪುಟದಲಿ ಜತೆಯಾಗಿ ನೀನಿರಲು
ಬಾಳೆಲ್ಲಾ ಮಧುರಸದ ಹೊನಲಾಗಿದೆ
ಒಲವಿಂದ ಕೂಡಿರುವ
ಸಮರಸದ ಜೀವನವು
ಮನಕಿಂದು ಉಲ್ಲಾಸ ಹುರುಪು ತಂದಿದೆ
ಮುದ್ದಾದ ಮೊಗದಲಿ
ಅರಳಿರುವ ಕಿರು ನಗೆಯು
ಭೂಷಣವು ಹೆಣ್ಣಿನಾ ಸೌಂದರ್ಯಕೆ
ನಡೆಯಲಿ ನಲಿವಿರಲು
ಉತ್ತಮ ಗುಣವಿರಲು
ಬೇರೇನೂ ಬೇಕಿಲ್ಲ ಈ ಜೀವಕೆ
ಮೃದು ಮಧುರ ಮಾತುಗಳು
ತುಂಬಿರಲು ಮನೆಯಲಿ
ಮನೆಯೊಂದು ಸಂತಸದ ಗೂಡಾಗಿದೆ
ಸುಖದುಃಖ ವೆರಡರಲಿ
ಹೆಗಲಾಗಿ ನೀನಿರಲು
ಜೀವನವು ಸವಿಜೇನ ಹೊನಲಾಗಿದೆ
ಬರಡಾದ ನನ್ನೆದೆಗೆ
ತನಿರಸವ ಉಣಿಸುತ
ಬಾಳಿನಾ ಜ್ಯೋತಿ ನೀನಾದೆಯೇ
ಶ್ರೀಮತಿ .ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[21/12/2020, 7:56 PM] pankajarambhat: ಅಕ್ಷರ ದೀಪ ಸಾಹಿತ್ಯ ವೇದಿಕೆ ಧಾರವಾಡ ಲೇಖನ ಸ್ಪರ್ಧೆಗಾಗಿ
ವಿಷಯ.. ಹೊಸವರುಷದ ಆಚರಣೆಯ ಗುಣಾವಾಗುಣಗಳು
ಹೊಸವರ್ಷದಾಚಾರಣೆಯು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವಪೂರ್ಣವಾಗಿದೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಗಳಾದ ಹಿರಿಯರನ್ನು ಗೌರವಿಸಿ ಅವರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಬೇಡುವುದು, ಹೊಸ ಬಟ್ಟೆಯನ್ನು ಧರಿಸಿ, ದೇವರ ಪೂಜೆ ಧ್ಯಾನ ಮಾಡಿ ಹೊಸವರ್ಷವು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸುವುದು ನಮ್ಮ ಸಂಪ್ರದಾಯ. ಅನಾದಿ ಕಾಲದಿಂದಲೂ ಯುಗಾದಿಯನ್ನು ನಮ್ಮ ಹಿಂದಿನವರು ಹೊಸವರ್ಷವೆಂದು ಆಚರಿಸುತ್ತಿದ್ದರು. ಹಿಂದೂ ಧರ್ಮದ ಪ್ರಕಾರ ಯುಗಾದಿ ಯು ಹೊಸವರ್ಷದ ಪ್ರಾರಂಭದ ದಿನ ಯುಗಾದಿ ಎಂದರೆ ಸೃಷ್ಟಿಯ ಪ್ರಾರಂಭದ ದಿನ. ಯುಗದ ಆರಂಭದ ದಿನ. ಈ ದಿನ ಪ್ರಕೃತಿ ತನ್ನ ಹಳೆಯ ಕೊಳೆಗಳನ್ನು ಕಳೆದು ಹೊಸ ಮದುಮಗಳಂತೆ ಹೂವು ಹಣ್ಣುಗಳಿಂದ ತುಂಬಿ ಕಂಗೊಳಿಸುತ್ತಿರುತ್ತಾಳೆ. ಹೊಸವರ್ಷದ ಆಗಮನವನ್ನು ಪ್ರಕೃತಿಯ ಜತೆ ಸಂಭ್ರಮಿಸುವುದು ನಿಜಕ್ಕೂ ಅರ್ಥಪೂರ್ಣವಾಗಿದೆ . ಯುಗಾದಿ ಪ್ರಾರಂಭವಾಗುವುದು ವಸಂತ ಋತುವಿನಲ್ಲಿ , ಸಮಶೀತೋಷ್ಣ ,ಉತ್ಸ್ಸಾಹ ದಾಯಕ ಮತ್ತು ಆಹ್ಲಾದಕರ, ವಾತಾವರಣ ವಿರುವ ವಸಂತಮಾಸದಲ್ಲಿ ಇಡೀ ಪ್ರಕೃತಿ ಲವಲವಿಕೆಯಿಂದ ಕೂಡಿರುತ್ತದೆ. ಹೊಸ ವರ್ಷ ವೆಂದರೆ ಹಳತು ಕಳೆದು ಹೊಸತನ್ನು ಬರಮಾಡಿಕೊಳ್ಳುವುದು ಆದರೆ ಜನವರಿ ಒಂದರಂದು .ಪ್ರಕೃತಿಯಲ್ಲಿ ಯಾವುದೇ ಬಡಲಾವಣೆಯಿರುವುದಿಲ್ಲ ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರವಾಗಿದ್ದು .ಇತ್ತೀಚೆಗೆ ಡಿಸೆಂಬರ 31 ರ ಮಧ್ಯರಾತ್ರಿಯಂದು ಹೊಸವರ್ಷದಾಚಾರಣೆ ಎನ್ನುವ ನೆಪ ಒಡ್ಡಿ ಕುಡಿತ ಕುಣಿತ ಅಜ್ಜನ ಪ್ರತಿಕೃತಿ ಮಾಡಿ ಅದನ್ನು ಸುಡುವುದು.ಪರಿಸರ ಮಾಲಿನ್ಯಯುಕ್ತ ಪಟಾಕಿಗಳನ್ನು ಉರಿಸಿ ಸಂಭ್ರಮಿಸುವುದು ಕಂಡು ಬರುತ್ತಿದೆ ಈ ದಿನ ಹೊಸವರ್ಷದಾಚಾರಣೆಯು ವೈಜ್ಞಾನಿಕವಾಗಿಲ್ಲ. ಇದು ಕೇವಲ ಪಾಶ್ಯಾತ್ಯರ ಅಂಧಾನುಕರಣೆಯಾಗಿದ್ದು, ನಮ್ಮ ಸಂಸ್ಕೃತಿಗೆ ಮಾರಕವಾಗಿದೆ. ಒಳ್ಳೆಯ ವಿಚಾರಗಳು ಎಲ್ಲಿದ್ದರೂ ಅದು ಬರಲಿ ಎನ್ನುವ ಸಂಸ್ಕೃತಿ ನಮ್ಮದು. ಆದರೆ ಅದು ತಂಗಾಳಿಯಾಗಿ ಬರಬೇಕೆ ಹೊರತು ಬಿರುಗಾಳಿಯಾಗಿ ಮನೆಯನ್ನು ಹಾರಿಸದಂತೆ ಜಾಗ್ರತೆಯಿರಬೇಕು. ಕ್ಯಾಲೆಂಡರ್ ಬದಲಾವಣೆಯ ವರ್ಷವನ್ನು ಹೊಸವರ್ಷ ಎಂದು ಆಚರಿಸುವ ಸಂಪ್ರದಾಯ ಹೆಚ್ಚಿನ ಎಲ್ಲಾ ದೇಶಗಳಲ್ಲೂ ಕಂಡು ಬರುತ್ತಿದೆ . .ಆದರೆ ಭವ್ಯ ಪರಂಪರೆ ಹೊಂದಿದ ಋಷಿ ಮುನಿಗಳು ಬಾಳಿ ಬದುಕಿದ ನಾಡಾದ ಭಾರತವು ಹಿಂದೂ ದೇಶವಾಗಿದ್ದು ಇದರ ಸಂಸ್ಕೃತಿ ವಿಶ್ವಕ್ಕೆ ಮಾದರಿಯಾಗಿದೆ ಆದ್ದರಿಂದ ನಮ್ಮ ಸಂಸ್ಕೃತಿಗೆ ಮಾರಕವಾದ ಡಿಸೆಂಬರ್ 31 ರ ಮದ್ಯರಾತ್ರಿಯನ್ನು ಹೊಸವರ್ಷವರಂದು ಆಚರಿಸಿ ಕುಡಿತ ಕುಣಿತದಲ್ಲಿ ಮೈ ಮರೆಯುವ ಪಾಶ್ಯಾತ್ಯ ಸಂಸ್ಕೃತಿಯನ್ನು ನಮ್ಮ ಯುವ ಜನಾಂಗ ಕೈ ಬಿಟ್ಟು ಭಾರತೀಯ ಸಂಸ್ಕೃತಿ ಸಾರುವ ಯುಗಾದಿ ಹಬ್ಬವನ್ನು ಹೊಸವರ್ಷದಾರಂಭವೆಂದುಆಚರಿಸುವಂತಾಗಬೇಕು ನಮ್ಮ ಸಂಸ್ಕೃತಿಯ ವೈಭವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕಾದುದು ನಮ್ಮನಿಮ್ಮೆಲ್ಲರ ಹೊಣೆ ಯಾಗಿದೆ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ. 574153
[29/12/2020, 9:02 PM] pankajarambhat: ತುಳು ಕನ್ನಡ ಕಾವ್ಯ ಸಂಗಮ
ಸ್ಪರ್ಧೆಗಾಗಿ ಶಿಶುಗೀತೆ
ಬೆಳ್ಳಿಯ ಚುಕ್ಕಿ
ಪಳ ಪಳ ಹೊಳೆಯುವ ಬೆಳ್ಳಿಯ ಚುಕ್ಕೆಗಳ
ಬಾನಲಿ ಇಟ್ಟವರಾರಮ್ಮ
ಬಾನಿನ ತುಂಬಾ ರಂಗೋಲಿ ಹಾಕಲು
ಚುಕ್ಕಿಯನಿಟ್ಟರೇ ಹೇಳಮ್ಮ
ಚಂದಮಾಮನ ಜತೆಯಲಿ ಆಡಲು
ನಾನು ಹೋಗಲೇ ಹೇಳಮ್ಮ
ಚುಕ್ಕಿಗಳೊಡನೆ ಆಟವ ಆಡುತ
ನಲಿಯಲು ಬಲು ಮಜವಮ್ಮ
ದುಂಡನೆ ಚಂದಿರ ದಿನ ದಿನ ಕರಗುತ
ಕಾಣದೆ ಆಗುವನೇಕಮ್ಮ
ಕೌತುಕ ತುಂಬಿದೆ ನನ್ನಯ ಮನದಲಿ
ಬಾನಿನ ವಿಸ್ಮಯ ಕಾಣುತಲಿ
ಶ್ರೀಮತಿ.ಪಂಕಜಾ.ಕೆ. ಮುಡಿಪು
[31/12/2020, 8:23 PM] pankajarambhat: ತುಳು ಕನ್ನಡ ಕಾವ್ಯಸಂಗಮ
ಚಿತ್ರಕ್ಕೊಂದು ಗಜಲ್
ಒಲವಿನ ಬಾಂಧವ್ಯ ನಮ್ಮಿಬ್ಬರನು ಬೆಸೆದಿದೆ ಸಖ
ಪ್ರೀತಿಯ ಸಾಂಗತ್ಯ ಮನಕೆ ಮುದ ತಂದಿದೆ ಸಖ
ನಿನ್ನ ಹೆಗಲಿಗೆ ತಲೆಯಿಟ್ಟಾಗ ಸ್ವರ್ಗ ಧರೆಗಿಳಿದಂತೆ
ಕೈ ಹಿಡಿದು ನನ್ನ ಬಾಳಲಿ ಜತೆಯಾಗಿ ಬಂದೆ ಸಖ
ಹಸಿರು ಕಾನನದ ಎಡೆಯಿಂದ ಬರುತಿದೆ ತಂಗಾಳಿ
ನಿನ್ನೆದೆಯ ಬಿಸಿಪು ಮನಸಿಗೆ ಧೈರ್ಯವಿತ್ತಿದೆ ಸಖ
ನಮ್ಮ ಈ ಪ್ರೇಮ ಬಂದನಕೆ ಎಲ್ಲೇ ಎಲ್ಲಿದೆ ಹೇಳು
ಬಾಳೊಂದು ಸವಿರಸದ ಹೂರಣವಾಗಿದೆ ಸಖ
ಪಂಕಜಾಳ ಬಾಳು ನಿನ್ನನ್ನು ಪಡೆದು ಸಾರ್ಥಕ ಗೊಂಡಿದೆ
ನಿನ್ನೊಡನಾಟದಲ್ಲಿ ಸ್ವರ್ಗ ಸುಖವನ್ನು ಪಡೆದೆ ಸಖ
ಶ್ರೀಮತಿ.ಪಂಕಜಾ.ಕೆ. ಮುಡಿಪು
[05/01, 1:33 PM] pankajarambhat: ತುಳು ಕನ್ನಡ ಕಾವ್ಯ ಸಂಗಮ
ಚುಟುಕು ಸ್ಪರ್ಧೆಗಾಗಿ
ದತ್ತಪದ. ...ಸಾಕ್ಷಿ
ಶೀರ್ಷಿಕೆ ...ಮತ್ಸರ
ಪರರ ಏಳಿಗೆಯ ಕಂಡು ಮತ್ಸರಿಸಬಹುದೇ
ಹೊಟ್ಟೆಕಿಚ್ಚು ತನ್ನನ್ನೇ ಸುಡದಿರುವುದೇ
ಕೊಂಕು ನುಡಿಗಳನಾಡಿ ಇರಿಯಬಹುದೇ
ಮನ: ಸಾಕ್ಷಿಯನು ಮೀರಿ ಬದುಕಬಹುದೇ
ಶ್ರೀಮತಿ.ಪಂಕಜಾ.ಕೆ. ಮುಡಿಪು
[05/01, 3:03 PM] pankajarambhat: http://nadinasamachara.in/2020/11/09/ಸಾಹಿತ್ಯಿಕ-ಪ್ರತಿಭೆ-ಪಂಕಜಾ/
[05/01, 8:27 PM] pankajarambhat: ಅಕ್ಷರದೀಪ ಸಾಹಿತ್ಯವೇದಿಕೆಯ ಚಿತ್ರಕವನ ಸ್ಪರ್ಧೆಗಾಗಿ
ಬಡತನ
ಸುರಿದ ಮಳೆಯು ಕೊಚ್ಚಿಹಾಕಿತು
ಇದ್ದ ಒಂದೇ ಸೂರನು
ಬಾಳ ಬಟ್ಟೆಯು ಹರಿದು ಹೋಯಿತು
ಬದುಕು ಬಯಲಿಗೆ ಬಿದ್ದಿತು
ಮೋಡ ತುಂಬಿದ ಬಾನಿನಂತೆಯೇ
ಮನದಿ ತುಂಬಿದೆ ಚಿಂತೆಯು
ಇರಲು ಒಂದೂ ಸೂರು ಇಲ್ಲದೆ
ವಲಸೆಹಕ್ಕಿಯ ಜೀವನ
ಮುದ್ದುಕಂದನ ಹಸಿವೆ ನೀಗಲು
ಬೇಯಿಸಬೇಕಿದೆ ಕೂಳನು
ನಿಂತ ಕಡೆಯೇ ಒಲೆಯ ಊದುತ
ಶ್ರಮಿಸುತ್ತಿರುವಳು ಮಾತೆಯು
ಬಯಲಿನಲ್ಲೇ ಕುಳಿತು ಮಾಡುವ
ಅಡಿಗೆ ತಿಂಡಿಯ ಹೂರಣ
ಇಂದು ಇಲ್ಲಿ ನಾಳೆ ಎಲ್ಲೋ
ಬದುಕು ಒಂದು ಚಾರಣ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಶ್ರೀ ಗಣೇಶ ಕೃಪಾ .ಮುಡಿಪು.ಕುರ್ನಾಡು.ದ.ಕ.574153
ಮೊಬೈಲ್ ನಂಬರ್.9964659620
[07/01, 9:16 PM] pankajarambhat: ತುಳು ಕನ್ನಡ ಕಾವ್ಯ ಸಂಗಮ ಸ್ಪರ್ಧೆಗಾಗಿ
ಕವನ 07 01 2021
ವಿಷಯ.ಅಪ್ಪ
ಅಪ್ಪನೆಂಬುವ ಆಲದಮರದ
ನೆರಳಲಿ ಇರಲು ಭಯವಿಲ್ಲ
ಅಪ್ಪನು ಇದ್ದರೆ ರಕ್ಷಣೆ ಇರುವುದು
ಮನೆಯವರೆಲ್ಲರ ಕಾಯುವನು
ಹಗಳಿರುಳೆನ್ನದೆ ದುಡಿಯುತ ತಾನು
ಸಂಸಾರದ ರಥವನು ಎಳೆಯುವನು
ಬಾಳಿನ ಬಂಡಿಯ ಸಾಗಿಸಲೆಂದು
ನಿತ್ಯವೂ ಕಾಯಕ ಮಾಡುವನು
ಮಕ್ಕಳ ಏಳ್ಗೆಗೆ ಶ್ರಮಿಸುತಲವನು
ತನ್ನಯ ಕಾಯವ ಸವೆಸುವನು
ತಪ್ಪುಗಳೆಲ್ಲವ ತಿದ್ದುತ ತಾನು
ಒಳ್ಳೆಯ ಬುದ್ಧಿಯ ಕಲಿಸುವನು
ಕೆಟ್ಟತನವನು ಚಿಗುರಲೇ ಚಿವುಟಿ
ಬಾಳಿನ ಗುರಿಯನು ತೋರುವನು
ಒಳ್ಳೆಯ ಕೆಲಸಕೆ ಬೆನ್ನನು ತಟ್ಟುತ
ಪ್ರೋತ್ಸಾಹವ ಮನಕೆ ತುಂಬುವನು
ತನ್ನಯ ಬೇಸರ ನೋವನು ನುಂಗುತ
ನಗುವಿನ ಮುಖವಾಡ ಧರಿಸುವನು
ಕಷ್ಟಸುಖಗಳೆರಡಕು ಎದೆಯನು ಒಡ್ಡುತ
ಬಾಳಲಿ ಭರವಸೆ ತುಂಬುವನು
ಶ್ರೀಮತಿ.ಪಂಕಜಾ.ಕೆ. ಮುಡಿಪು
[11/01, 8:04 PM] pankajarambhat: ಅಕ್ಷರ ದೀಪ ಸಾಹಿತ್ಯವೇದಿಕೆ ಧಾರವಾಡ
ಕಿರುಲೇಖನ ಸ್ಪರ್ಧೆಗಾಗಿ
ವಿಷಯ ಇಂದಿನ ಯುವ ಜನತೆ
ಇಂದಿನ ಯುವಕರೇ ಮುಂದಿನ ದೇಶದ ನಿರ್ಮಾಣಕರ್ತರು ಆಗಿದ್ದಾರೆ.ಆಧುನಿಕತೆಗೆ ಮಾರುಹೋದ ಇಂದಿನ ಯುವ ಜನತೆ ದೇಶದ ಭವಿಷ್ಯದ ಬಗ್ಗೆಯಾಗಲಿ, ತಮ್ಮ ಭವಿಷ್ಯದ ಬಗ್ಗೆಯಾಗಲೀ, ಚಿಂತಿಸದೆ ಮೊಬೈಲ್ ಎಂಬ ಚಿಕ್ಕ ಸಾಧನದ ಮಾಯಾಜಾಲದಲ್ಲಿ ಬಿದ್ದು, ಅದರ ಪರದೆಯ ಮೇಲೆ ದೃಷ್ಟಿ ನೆಟ್ಟು, ಕೈಗಳನ್ನು ಅದರಲ್ಲಿ ಉಜ್ಜುತ್ತಾ, ತಲೆತಗ್ಗಿಸಿ ಜಗತ್ತನ್ನೇ ಮರೆತು ಕುಳಿತಿದ್ದಾರೆ.
ಸ್ನೇಹಿತರು ಹತ್ತಿರವಿದ್ದರೂ ಮಾತುಕತೆಯಾಡದೆ ತಮ್ಮದೇ ಲೋಕದಲ್ಲಿ ಮೈಮರೆತು ತಮ್ಮ ತಮ್ಮ ಕೈಗಳಲ್ಲಿರುವ ಮೊಬೈಲ್ ನತ್ತವೇ ದೃಷ್ಟಿನೆಟ್ಟು,ತಮ್ಮ ಅಮೂಲ್ಯ ಯೌವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.ಪುಸ್ತಕವನ್ನು ಓದು ಅದು ನಿನ್ನನ್ನು ತಲೆ ಎತ್ತಿ ತಿರುಗುವಂತೆ ಮಾಡುತ್ತದೆ ಎಂದು ಒಂದು ನಾಣ್ನುಡಿ ಇದೆ. ಅದಕ್ಕೊಂದು ಉದಾಹರಣೆ ಸ್ವಾಮಿ ವಿವೇಕಾನಂದರು. ದೇಶವಿದೇಶದಲ್ಲಿ ಭಾರತ ಸಂಸ್ಕೃತಿಯನ್ನು ಹಬ್ಬಿಸಿ ಯುವಕರ ಎದೆಯಲ್ಲಿ ಕ್ರಾಂತಿ ಕಿಡಿ ಹಚ್ಚಿದ ವೀರ ಸನ್ಯಾಸಿ ಇವರ ಜೀವನವನ್ನು ಆದರ್ಶವಾಗಿಟ್ಟುಕೊಳ್ಳಬೇಕಾದ ಯುವ ಜನತೆ ಇಂದು ಮನೆಯಲ್ಲೇ ತಂದೆ ತಾಯಿಯರು ನೆರೆಹೊರೆಯವರು ಸ್ನೇಹಿತರು ಬಂಧು ಬಳಗ ಎಲ್ಲರಿಂದ ದೂರವಾಗಿ ಮೊಬೈಲ್ ಕೈಯಲ್ಲಿ ಹಿಡಿದು ಅದರಲ್ಲೇ ಮುಳುಗಿರುವುದು ಎಂತಹ ವಿಪರ್ಯಾಸ. ಇನ್ನಾದರೂ ಎಚ್ಚೆತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಿದುಕೊಂಡು ಮಾನವೀಯ ಗುಣಗಳಾದ ದಯೆ ಕರುಣೆ ಪ್ರೀತಿ ವಿಶ್ವಾಸಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಾದುದು ಅತ್ಯಗತ್ಯ.ಯುವಶಕ್ತಿ ಪೋಲಾಗದಂತೆ ನಾವು ಜಾಗ್ರತೆವಹಿಸಬೇಕು
ಶ್ರೀಮತಿ. ಪಂಕಜಾ.ಕೆ. ಮುಡಿಪು.
ನಿವೃತ್ತ ಅಸಿಸ್ಟಂಟ್.ಪೋಸ್ಟ್ ಮಾಸ್ಟರ್ .ಕುರ್ನಾಡು ದ.ಕ.574153
[25/01, 11:05 PM] ಅಕ್ಷರದೀಪ ಧಾರವಾಡ: ಅಕ್ಷರದೀಪ ಸಾಹಿತ್ಯವೇದಿಕೆ ಧಾರವಾಡ ದ ಲೇಖನ ಸ್ಪರ್ಧೆಗಾಗಿ
ವಿಷಯ. ಕರುನಾಡ ಪ್ರಕೃತಿ ಸೌಂದರ್ಯ
ಸುಂದರ ನಾಡು ಕರುನಾಡು
ಕರುನಾಡು ಒಂದು ಪ್ರಕೃತಿ ರಮ್ಯಾ ಸುಂದರ ತಾಣ .ಇದರ ಪ್ರಕೃತಿ ಸೊಬಗನ್ನು ವರ್ಣಿಸಲು ಪದಗಳು ಸಾಲದು ಮಲೆನಾಡಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವರಿಲ್ಲ. ರಮಣೀಯ ಪರ್ವತ ಶ್ರೇಣಿಗಳು ದಟ್ಟಹಸಿರಿನಿಂದ ಕೂಡಿದ ವನಸಿರಿ,ದುಮುಕುವ ಜಲಪಾತಗಳು , ಪ್ರಶಾಂತತೆಯಿಂದ ಕುಡಿದ ದಟ್ಟಾರಣ್ಯಗಳು, ಉತ್ಸಾಹ ಹೆಚ್ಚಿಸುವ ಕಡಲತೀರಗಳು, ಜುಳು ಜುಳು ಹರಿಯುವ ಸುಂದರ ನದಿಗಳು, ಎಂತಹ ಅರಸಿಕನನ್ನಾದರೂ ,ಒಂದು ಕ್ಷಣ ಹಿಡಿದಿಡದೆ ಇರದು. ಚಾರಣಕ್ಕೆ ಯೋಗ್ಯವಾದ ಹಲವಾರು ತಾಣಗಳು .ಪ್ರಕೃತಿ ಸೌಂದರ್ಯ ಕ್ಕೆ ಪ್ರಖ್ಯಾತವಾಗಿರುವ ಕೊಡಗಿನ ಸೌಂದರ್ಯ ವನ್ನು ಎಷ್ಟು ಬಣ್ಣಿಸಿದರೂ ಸಾಲದು ಅಬ್ಬಿ ಜಲಪಾತ ನಿತ್ಯ ಹರಿದ್ವರ್ಣದ ಕೆರೆ ಕೊಳಗಳು, ಕಾವೇರಿ ನದಿ ಮನಸೂರೆಗೊಳ್ಳುವ ಕಾಡುಗಳು, ಶಿವನಸಮುದ್ರದ ಲಿಂಗನಮಕ್ಕಿ ,ಭರಚುಕ್ಕಿ ಜಲಪಾತಗಳು ,ಜೋಗ ಜಲಪಾತ ರಂಗನತಿಟ್ಟು ಪಕ್ಷಿಧಾಮ ಶಿವಮೊಗ್ಗದ ಆಗುಂಬೆಎಲ್ಲವೂ ಪ್ರವಾಸಿಗರನು ಕೈಬೀಸಿ ಕರೆಯುತ್ತದೆ ಕರುನಾಡಿನ ಪ್ರಕೃತಿ ಸೌಂದರ್ಯ ಕ್ಕೆ ಸಾಟಿ ಯಾವದು ಇಲ್ಲ ಅದನ್ನು ವರ್ಣಿಸುವುದಕ್ಕಿಂತ ನೋಡಿ ಅನುಭವಿಸಬೇಕು ಇಂತಹ ಪ್ರಕೃತಿ ರಮ್ಯಾ ಸ್ಥಳ ನಮ್ಮ ಕರುನಾಡು ಎಂದು ನಾವು ಹೆಮ್ಮೆ ಪಡಬೇಕು ಮತ್ತು ಅದನ್ನು ಉಳಿಸಿ ಬೆಳೆಸಬೇಕು
ಶ್ರೀಮತಿ.ಪಂಕಜಾ.ಕೆ. ಮುಡಿಪು.ಕುರ್ನಾಡು.ದ.ಕ.
Comments
Post a Comment