[21/02, 2:29 PM] pankajarambhat: ಗುರುಕುಲಾ ಚಾಮರಾಜನಗರ ಘಟಕದ ಸ್ಪರ್ಧೆಗಾಗಿ
ಹನಿಕವನ
ದತ್ತಪದ..ಮೊದಲ ಮಳೆ
ಪುಳಕ
ಮೊದಲ ಮಳೆಯು
ಇಳೆಗೆ ತಂದಿತು ಪುಳಕ
ಬಿಸಿಲಿಗೆ ಬಾಡಿದ
ತರುಲತೆಗಳಿಗೆ ಹರುಷದ ಜಳಕ
ಮಣ್ಣಿನ ಘಮಲು
ಸೆಳೆಯಿತು ರಸಿಕರ ನಾಸಿಕ
ಸುರಿದ ವರ್ಷದಾರೆಗೆ
ಬುವಿಗೆ ಸಂತಸದ ನಡುಕ
ಶ್ರೀಮತಿ.ಪಂಕಜಾ ಕೆ ಮುಡಿಪು
[21/02, 3:07 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು
ವಾರಕ್ಕೊಂದು ಸ್ಪರ್ಧೆಗಾಗಿ
ಹಾಸ್ಯಕವನ
ವಿಷಯ..ಪತಿಮಹಾಶಯ
ನನ್ನ ದೇವರು
ಮೊದಲ ರಾತ್ರಿ ಪತಿಮಹಾಶಯರು
ಬದಿಗೆ ಸರಿದು ಕುಳಿತುಕೊಂಡು
ಎದುರೆ ಕುಳಿತ ನನ್ನ ಕಡೆಗೆ ನೋಡುತಿದ್ದರು
ಚದುರೆ ನಿನ್ನ ರೂಪ ಚಂದ
ಕುದುರೆಯಂತೆ ಕೆನೆವೆಯೇಕೆ
ಮದುವೆ ಆಗಿ ಇಂದು ನಾವು ಖುಷಿಯಪಡೋಣ
ಬಯಕೆ ಏನು ನಿನ್ನದೆಂದು
ನಯದಿ ಕೇಳಿ ನನ್ನ ಮೊಗವ
ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು
ಮಯಣದಂತೆ ಅಂಟಿಕೊಂಡು
ಹಯದ ತೆರದಿ ನನ್ನ ಸೆಳೆದು
ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು
ಹೆಣ್ಣೇ ನೀನೇಕೆ ಮುನಿವೇ
ಕಣ್ಣು ತುಂಬಾ ನಿದ್ದೆ ಮಾಡು
ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು
ಹಣ್ಣು ಹಣ್ಣು ಮುದುಕರಂತೆ
ಬೆನ್ನು ಬಗ್ಗಿಸಿ ನಟನೆ ಮಾಡಿ
ನನ್ನ ಮೊಗದಿ ನಗುವ ಕಂಡು ಖುಷಿಯ ಪಟ್ಟರು
ಇಂತು ಇರುವ ಪತಿಮಹಾಶಯ
ದೇವರೆಂದು ತಿಳಿದು ನಾನು ಖುಷಿಯಲಿರುವೆನು
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[21/02, 3:13 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾಘಟಕ ಕೊಡಗು
ವಾರಕ್ಕೊಂದು ಸ್ಪರ್ಧೆಗಾಗಿ
ಹಾಸ್ಯಕವನ
ವಿಷಯ..ಪತಿಮಹಾಶಯ
ನನ್ನ ದೇವರು
ಮೊದಲ ರಾತ್ರಿ ಪತಿಮಹಾಶಯರು ಬದಿಗೆ ಸರಿದು ಕುಳಿತುಕೊಂಡು
ಎದುರೆ ಕುಳಿತ ನನ್ನ ಕಡೆಗೆ ನೋಡುತಿದ್ದರು
ಚದುರೆ ನಿನ್ನ ರೂಪ ಚಂದ ಕುದುರೆಯಂತೆ ಕೆನೆವೆಯೇಕೆ
ಮದುವೆ ಆಗಿ ಇಂದು ನಾವು ಖುಷಿಯಲಿರೋಣ
ಬಯಕೆ ಏನು ನಿನ್ನದೆಂದು ನಯದಿ ಕೇಳಿ ನನ್ನ ಮೊಗವ
ಕೈಯಲಿಡಿದು ಕಣ್ಣಿನಲ್ಲೇ ಕೆಣಕುತ್ತಿದ್ದರು
ಮಯಣದಂತೆ ಅಂಟಿಕೊಂಡು ಹಯದ ತೆರದಿ ನನ್ನ ಸೆಳೆದು
ಜಯವ ಪಡೆದ ಹಿಗ್ಗಿನಲ್ಲಿ ನಗುತ ನಿಂತರು
ಹೆಣ್ಣೇ ನೀನೇಕೆ ಮುನಿವೇ ಕಣ್ಣು ತುಂಬಾ ನಿದ್ದೆ ಮಾಡು
ಬಣ್ಣವಿರುವ ಸೀರೆಯನ್ನು ತಂದು ಕೊಡುವೆನು
ಹಣ್ಣು ಹಣ್ಣು ಮುದುಕರಂತೆ ಬೆನ್ನು ಬಗ್ಗಿಸಿ ನಟನೆ ಮಾಡಿ
ನನ್ನ ಮೊಗದಿ ನಗುವ ಕಂಡು ಖುಷಿಯ ಪಟ್ಟರು
ಇಂತು ಇರುವ ಪತಿಯ ನಾನು ದೇವರೆಂದು
ತಿಳಿದುಕೊಂಡು ಖುಷಿಯಲಿರುವೆನು
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು.ದ.ಕ.
[21/02, 3:25 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ಚಿಕ್ಕಮಗಳೂರು
ವಾರಕ್ಕೊಂದು ಸ್ಪರ್ಧೆಗಾಗಿ
ಚುಟುಕುಗಳು
ದತ್ತಪದ. ಸಂಸಾರ. ಸಂಸ್ಕಾರ
ಚುಟುಕು 1 ಸಂಸಾರ
ಸಂಸಾರ ಸಾಗರದಲಿ ಈಜಬೇಕು
ಜಗಮೆಚ್ಚುವಂತೆ ಬಾಳಬೇಕು
ಸುಖದುಃಖಗಳ ಸಮಾನವಾಗಿ ಸ್ವೀಕರಿಸಿ
ಸಮರಸದಿ ಜೀವನವನು ಸಾಗಿಸಿ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು ದ.ಕ.
[21/02, 3:52 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ ತುಮಕೂರು
ಚಿತ್ರಕವನ ಸ್ಪರ್ಧೆಗಾಗಿ
ಮಗಳ ಆಸೆ
ಎಡೆಯಲಿ ನುಸುಳುವ ವೈರಿಯ ಬಡಿಯುತ
ಗಡಿಯನ್ನು ಕಾಯುವ ಸೈನಿಕನು
ಮನೆ ಮಠ ಬಿಟ್ಟು ಚಳಿಯಲಿ ನಡುಗುತ
ದೇಶವ ಕಾಯುತ ಕುಳಿತಿಹನು
ರಜೆಯಲಿ ಊರಿಗೆ ಬರುವ ಅಪ್ಪನ ಕಂಡು
ಮಮತೆಯ ಮಗಳಿಗೆ ಸಂತಸವು
ಅಪ್ಪನು ತರುವ ಚಾಕೊಲೇಟ್ ಆಸೆಗೆ
ಪುಟ್ಟಿಯ ಕಂಗಳಲಿ ಕನಸುಗಳು
ವೈರಿಯ ಹೊಡೆತಕೆ ಮುರಿದಿಹ ಕೈಯನು
ಬೆನ್ನಿಗೆ ಸಿಲುಕಿಸಿ ನಿಂತಿಹನು
ಚಾಕೊಲೇಟ್ ಇರಬಹುದೆನ್ನುವ ಆಸೆಯಲಿರುತ
ಓಡುತ ಬಂದಳು ಚೆಲು ಬಾಲೆ
ಮೊಂಡು ಕೈಯನು ಕಾಣಲು ಮಗಳಿಗೆ
ದುಃಖವು ಮೂಡಿತು ಮನದಲಿ
ಅಪ್ಪನ ನೋವನು ಪಕ್ಕನೆ ತಿಳಿಯುತ
ಭರದಲಿ ಅಪ್ಪುತ ಸಂತೈಸುವಳು
ಶ್ರೀಮತಿ ಪಂಕಜಾ ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್. ಪೋಸ್ಟ್.ಮಾಸ್ಟರ್. ಕುರ್ನಾಡು ..ದ.ಕ.
[21/02, 8:35 PM] pankajarambhat: ಗುರುಕುಲಾ ಕಲಾಪ್ರತಿಷ್ಠಾನ ಜಿಲ್ಲಾ ಘಟಕ
ಚಿತ್ರಕವನ ಸ್ಪರ್ಧೆಗಾಗಿ
ಕೋಳಿ ಕಟ್ಟ
ಸುಂದರ ಕೋಳಿಯ ಚಂದದಿ ಸಾಕಿ
ಕಾಲಿಗೆ ಬಾಳನು ಕಟ್ಟುವರು
ಕೆಂಪನೆ ಬಣ್ಣದ ಕೋಳಿಯ ಕೊಬ್ಬಿಸಿ
ಕೋಳಿಕಟ್ಟವನಾಡುವರು
ಕೆಂಪನೆ ಅಂಗಿಯ ಹಾಕಿದ ಅಜ್ಜನು
ನಗುತಲಿ ಹಿಡಿದಿಹ ಕೋಳಿಯನು
ತಲೆಯಲಿ ಧರಿಸಿದ ಮುಟ್ಟಾಳೆಯು
ಹಳ್ಳಿಯ ಜನರ ಶಿರಸ್ತ್ರಾಣ
ಬುಟ್ಟಿಯಲಿಟ್ಟು ಕಾಲನು ಕೊಡುತ
ಪ್ರೀತಿಯಲಿ ಸಾಕುದ ಕೋಳಿಯನು
ಆಟದ ಅಂಗಳದಿ ಕೋಳಿಯ ಬಿಟ್ಟು
ಜಗಳದ ಮಜವನು ಸವಿಯುವರು
ಬಾಳನು ಕಟ್ಟಿದ ಕೋಳಿಯು ಎಗರಲು
ಕಡಿಯದೆ ಇರದೇ ಜತೆಗಾರನನು
ಕಡಿದರೆ ಮುಗಿಯಿತು ಆಟದ ಗತ್ತು
ಸೋತ ಕೋಳಿಗಿದೆ ಆಪತ್ತು
ಪ್ರಾಣಿ ಪಕ್ಷಿಗಳ ಕೊಲ್ಲುತ ಮನುಜ
ತನ್ನಯ ಸುಖವನು ಕಾಣುವನು
ಹಕ್ಕಿಯ ಜ್ವರದ ಭಯವೂ ಇಲ್ಲದೆ
ಪ್ರಾಣಿಪಕ್ಷಿಗಳ ಮಾಂಸವ ಮೆಲ್ಲುವನು
ಪ್ರಾಣಿಗಳಿಗೂ ಬದುಕುವ ಹಕ್ಕಿದೆ ನಮ್ಮನಿಮ್ಮಂತೆ
ತಿಳಿಯಿರಿ ಇದನು ನೀವ್ ಮೊದಲು
ಸಸ್ಯಾಹಾರವೇ ಮನುಜಗೆ ಶ್ರೇಷ್ಠ
ಇದುವೇ ಆರೋಗ್ಯದ ಗುಟ್ಟಂತೆ
ಶ್ರೀಮತಿ.ಪಂಕಜಾ.ಕೆ. ಮುಡಿಪು.ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್.ಮಾಸ್ಟರ್.ಕುರ್ನಾಡು.ದ.ಕ.
[21/02, 9:08 PM] pankajarambhat: ಗುರುಕುಲಾ ಅಂತರರಾಜ್ಯ ಘಟಕದ ಸ್ಪರ್ಧೆಗಾಗಿ
ಲೇಖನ
ವಿಷಯ ರಥ ಸಪ್ತಮಿ
ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಸೂರ್ಯ ತನ್ನ ರಥವನ್ನು ಬದಲಿಸಿ ಹೊಸರಥವನ್ನು ಹತ್ತುತ್ತಾನೆ ಈದಿನ ಸೂರ್ಯನ ಜನ್ಮದಿನವೆಂದು ಹೇಳಲಾಗುತ್ತದೆ. ರಥ ಸಪ್ತಮಿಯೆಂದು ಆಚರಿಸುವ ಈ ದಿನ ಸೂರ್ಯೋಪಾಸನೆಯನ್ನು ಕೈಕೊಂಡರೆ ಸರ್ವರೋಗಗಳು ನಿವಾರಣೆಯಾಗುವುದೆಂದು ನಂಬಲಾಗುತ್ತದೆ.ಚಳಿಗಾಲದಲ್ಲಿ ಮುದುಡಿದ ಶರೀರ ರಥ ಸಪ್ತಮಿಯ ಬಳಿಕ ಬರುವ ಬೇಸಿಗೆಯಲ್ಲಿ ಸೂರ್ಯನ ಶಾಖದಿಂದಾಗಿ ನವಚೈತನ್ಯಪಡೆಯುತ್ತದೆ.ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ಡಿ ಮನುಜನ ಬೆಳವಣಿಗೆಗೆ ಅತ್ಯಗತ್ಯ. ರೋಗಾಣುವನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿದೆ.ಬೆಳಗಿನ ಹಾಗೂ ಸಂಜೆಯ ಸೂರ್ಯಕಿರಣವು ಆರೋಗ್ಯ ವರ್ಧನೆಗೆ ಸಹಾಯಕ ರೋಗದಿಂದ ನರಳುವವರು ಸೂರ್ಯಸ್ನಾನ ಮಾಡಿದರೆ ರೋಗ ನಿವಾರಣೆಯಾಗುವುದು ಇದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಹುಟ್ಟು ರೋಗಿಷ್ಟನಾದ ಯಶೋಧರನ ಮಗ ರಥ ಸಪ್ತಮಿ ಆಚರಿಸಿ ರೋಗ ಮುಕ್ತನಾದನಂತೆ ಶ್ರೀ ರಾಮನು ರಾವಣನನ್ನು ಸೋಲಿಸಲು ಆದಿತ್ಯ ಹೃದಯದಿಂದ ಸೂರ್ಯರಾಧನೆ ಮಾಡಿದನೆಂದುಪುರಾಣಗಳು ಹೇಳುತ್ತದೆ.ಅಲ್ಲದೆ ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣ ಅಣತಿಯಂತೆ ಸೂರ್ಯರಾಧನೆ ಮಾಡಿ ಅಕ್ಷಯ ಪಾತ್ರೆಯನ್ನು ಪಡೆದರೆಂದು ಹೇಳಲಾಗುತ್ತಿದೆ. ಸೂರ್ಯಾರಾಧನೆ ಮಾಡಿ ಶಮಂತಕ ಮಣಿ ಪಡೆದ ಕಥೆ ಎಲ್ಲರಿಗೂ ಗೊತ್ತೇ ಇದೆ. ಮಯೂರನೆಂಬ ಕವಿ ಸೂರ್ಯೋಪಾಸನೆ ಮಾಡಿ ತನ್ನ ಕಣ್ಣು ಮರಳಿ ಪಡೆದನೆಂದು ಪ್ರತೀತಿ ..ಸೂರ್ಯೋದಯಕ್ಕೆ ಮೊದಲು ಮಾಡುವ ಮಾಘಸ್ನಾನ ಪುಣ್ಯಪ್ರದ ಆಯುಷ್ಯ ಆರೋಗ್ಯ ಸಂಪತ್ತು ವೃದ್ಧಿಲಭಿಸುವುದಲ್ಲದೆ ಸೂರ್ಯನ ಅನುಗ್ರಹ ಪ್ರಾಪ್ತಿಯಾಗುತ್ತದೆ ರಥ ಸಪ್ತಮಿಯಂದು ನದಿ ಸರೋವರ ಸಂಗಮಗಳಲ್ಲಿ ಸ್ನಾನ ಮಾಡಿ ಸೂರ್ಯನಿಗೆ ಆರ್ಘ್ಯವಿತ್ತರೆ ಪೂರ್ವ ಜನ್ಮದ ಪಾಪ ಹಾಗೂ ಸಕಲ ದುಃಖ ನಿವಾರಣೆಯಾಗುವುದು. ಈ ದಿನ ಎಕ್ಕದ ಎಲೆಯನ್ನು ತಲೆ ಕಂಕುಳು ಪಾದ ಇತ್ಯಾದಿ ಕಡೆ ಇ ಟ್ಟು ಸ್ನಾನ ಮಾಡುವುದರಿಂದ ಚರ್ಮ ರೋಗ ನಿವಾರಣೆಯಾಗುವುದು
ಶ್ರೀಮತಿ.ಪಂಕಜಾ. ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್.ಕುರ್ನಾಡು.ದ.ಕ
.
Comments
Post a Comment