[14/12/2019, 7:47 PM] pankajarambhat: ಕಾವ್ಯಾಂತರಂಗ ಸ್ಪರ್ಧೆಗಾಗಿ
ವಿಷಯ ....ಬರಗಾಲದ ಲ್ಲಿ ರೈತನ ಗೋಳು
ಅನ್ನದಾತನ ಬವಣೆ
ಭೂಮಿ ಬಿರಿದಿದೆ
ಒಡಲು ನೊಂದಿದೆ
ಜೀವನ ಬಾರವೆನಿಸಿದೆ
ಕಣ್ಣು ತುಂಬಿದೆ
ಮನಸು ಅಳುತಿದೆ
ದೇವ ಕರುಣೆಯು ಬಾರದೆ
ಬಾನ ಬಯಲಲಿ
ಮುಗಿಲು ತುಂಬಿದೆ
ಮಳೆಯ ಸುರಿಸದೆ ಸರಿದಿದೆ
ಬೆಳೆದ ಬೆಳೆಗಳು
ನೀರ ಕೊರತೆಗೆ
ಬಾಡಿ ಉದುರಿ ಹೋಗಿದೆ
ಪಟ್ಟ ಕಷ್ಟಕೆ
ಫಲವು ಇಲ್ಲದೆ
ಬಾಳ ದೋಣಿಯು ಮುಳುಗಿದೆ
ಹರಿದ ಬಟ್ಟೆಯು
ಹಸಿದ ಹೊಟ್ಟೆಯು
ಬರಗಾಲದ ಬವಣೆಯ ತಿಳಿಸಿದೆ
ಕಾಲ ಕಾಲಕೆ
ಮಳೆಯು ಸುರಿಯುತ
ಬದುಕ ಬವಣೆಯು ನೀಗಲಿ
ಅನ್ನ ಬೆಳೆಯುವ
ರೈತನರಮನೆಯಲಿ
ಹೊನ್ನ ಕಣಜವು ತುಂಬಲಿ
ಪಂಕಜಾ.ಕೆ ಮುಡಿಪು
[18/12/2019, 11:14 AM] pankajarambhat: ತಿಂಗಳ ಬೆಳಕು
ತಿಂಗಳ ಬೆಳಕಲಿ
ಅಂಗಳ ಬದಿಯಲಿ
ಹಾಲಿನ ಹೊಳೆಯೇ ಹರಿಯುತಿದೆ
ತಂಪಿನ ಕಿರಣವು
ಇಂಪಿನ ಗಾನವು
ಮೈಮನವನ್ನು ಮರೆಸುತಿದೆ
ಚಂದದ ಹೂಗಳು
ಅಂದದಿ ಅರಳುತ
ಕಂಪನು ಎಲ್ಲೆಡೆ ಹರಡುತಿದೆ
ಕೊಳದಲಿ ಅರಳಿದ
ತಳದಲಿ ನಲಿದಿಹ
ನೈದಿಲೆ ನಗುವನು ಬೀರುತಿದೆ
ಚಂದಿರ ಬರಲು
ಕಂದರ ವಿರಲು
ಮನದಲಿ ಸಂತಶ ತುಂಬುತಿದೆ
ಬಾನಲಿ ಓಡುತ
ಎಡೆಯಲಿ ಮಿನುಗುತ
ರಸಿಕರ ಮನವನು ಸೆಳೆಯುತಿದೆ
ಪಂಕಜಾ.ಕೆ
[22/12/2019, 9:08 PM] pankajarambhat: ವಚನ
ಹಸಿರು ಕಾಡನು ಕಡಿದೆಸೆದು
ಕಾಂಕ್ರೀಟ್ ಕಾಡು ಕಟ್ಟುವರಲ್ಲ
ಭೂಮಿತಾಯಿಯ ಒಡಲು ಬಗೆದು
ಸಿಹಿನೀರ ಒರತೆಯನು ಬತ್ತಿಸುವರಲ್ಲ
ಭೂತಾಯಿಯ ನಿಟ್ಟುಸಿರು
ಬಡಬಾಗ್ನಿಯಾಗಿ ಕಾಡಿರಲು
ನೀರು ನೀರು ಎನುತ
ಬಾಯ್ಬಿಡುತಿರುವರಲ್ಲ
ಪಂಕಜಾರಾಮ
ಪಂಕಜಾ .ಕೆ
[22/12/2019, 9:08 PM] pankajarambhat: ವಚನ
ತಾಯ ಹಾಲಿಗೆ
ಸಮನಾದ ಹಾಲು
ಕೊಡುವ ಗೋವಿನ
ಹಾಲು ಕುಡಿದು
ಬರಡಾಯಿತೆಂದು
ಕಸಾಯಿಖಾನೆಗೆ ಅಟ್ಟುವರಯ್ಯ
ಕೃತಜ್ಞತೆಯಿಲ್ಲದ
ಮನುಜರಿಗೆ
ಏನೆನಲಿ ಪಂಕಜಾರಾಮ
ಪಂಕಜಾ.ಕೆ
[22/12/2019, 9:08 PM] pankajarambhat: ವಚನ
ಹೆಣ್ಣು ಭ್ರೂಣಹತ್ಯೆಯ ಮಾಡಿ
ಗಂಡುಮಗುವನ್ನು ಪಡೆದು
ಮಗನ ಮದುವೆಗೆ ಈಗ
ಹೆಣ್ಣು ಹುಡುಕುವರಯ್ಯ
ಜಗದ ಜನರ ನೀತಿಗೆ
ಎಷ್ಟು ಬುದ್ದಿಯ ಹೇಳಿದರೇನೂ ಪಂಕಜಾರಾಮ
ಪಂಕಜಾ.ಕೆ
[10/4/2020, 5:35 AM] pankajarambhat: ನವಪರ್ವ ಫೌಂಡೇಷನ್ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಕವನ
ನಮ್ಮ ಶಾಲೆ
(ಮಕ್ಕಳ ಕವನ)
ನಮ್ಮಯ ಶಾಲೆಯ
ಅಂದದ ಪರಿಸರ
ಎಲ್ಲರ ಮನವನು ಸೆಳೆಯುವುದು
ಸುತ್ತಲೂ ಬೆಳೆಸಿದ
ಕೈತೋಟದ ಚೆಲುವು
ಮಕ್ಕಳ ಶ್ರಮವನು ತಿಳಿಸುವುದು
ಪಾಠದ ಮೊದಲಿಗೆ
ಶಿಸ್ತಲಿ ನಿಲುತಲಿ
ಗುರುವಂದನೆಯನು ಮಾಡುವೆವು
ಶಿಕ್ಷಕರು ಕಲಿಸುವ
ಪಾಠಗಳೆಲ್ಲವ ಕಲಿಯುತ
ದಿನ ದಿನ ಬೆಳೆಯುವೆವು
ಶಾಲೆಯ ಸುತ್ತಲೂ
ಇರುತಿಹ ಬಯಲಲಿ
ಬಗೆ ಬಗೆ ಆಟವ ಆಡುವೆವು
ತರ ತರ ಸ್ಪರ್ಧೆಯು
ವಿಧ ವಿಧ ಕೂಟವು
ಮಕ್ಕಳ ಮನವನು ಸೆಳೆಯುವುದು
ದಿನವೂ ನಗಿಸುತ
ಪಾಠವ ಕಲಿಸುತ
ಬಿಸಿ ಬಿಸಿ ಊಟವ ಬಡಿಸುವರು
ಓದಲು ಬರೆಯಲು
ಕಲಿಸುತ ನಮ್ಮನು
ಪ್ರಗತಿಯ ಪಥದಲಿ ನಡೆಸುವರು
ಶಿಕ್ಷಕರೆಲ್ಲರು
ಚಂದದಿ ಕಲಿಸುತ
ಉತ್ತಮ ಶಿಕ್ಷಣ ನೀಡುವರು
ಪರಿಸರ ಅರಿವನು
ಮೂಡಿಸಿ ಮನದಲಿ
ಪಠ್ಯೇತರ ಚಟುವಟಿಕೆಗಳ ನಡೆಸುವರು
ನಮ್ಮಯ ಶಾಲೆಯಲಿ
ಕಲಿಯುತ ನಾವು
ಭಾರತ ಕೀರ್ತಿಯ ಹಬ್ಬಿಸುವೆವು
ಪಂಕಜಾ.ಕೆ.
[4/10/2020, 8:54 PM] pankajarambhat: ಕಾವ್ಯದೀಪ ಸಾಹಿತ್ಯ ಕಲಾವೇದಿಕೆ ಕುಂಬಳೆ ಕಾಸರಗೋಡು ಕವನ ವಾಚನ ಗೋಷ್ಟಿಗಾಗಿ
ಜೀವನದಿ
ಮನದ ನೆಮ್ಮದಿ ಕಳೆದು ಹೋಗಿದೆ
ಎಲ್ಲಿ ಹುಡುಕಲಿ ನಿನ್ನನು
ಸುತ್ತು ಮುತ್ತಲು ಎತ್ತ ನೋಡಲು
ತುಂಬಿ ಕೊಂಡಿದೆ ವಂಚನೆ
ಕಪಟ ಮನುಜರ ಮೊಸದಾಟಕೆ
ಜೀವ ಸಂಕುಲ ನರಳಿದೆ
ಮನುಜ ಮನುಜರಲಿ ದ್ವೇಷ ತುಂಬಿದೆ
ಯಾರ ನಂಬಲಿ ದೇವನೆ
ನಂಬಿಕೆಯ ನೆಲೆಗಟ್ಟು ಮುರಿದಿದೆ
ಈಶ ದಾರಿಯ ತೋರೆಯಾ
ಜಗದ ಎಲ್ಲೆಡೆ ಶಾಂತಿ ನೆಲೆಸಲಿ
ಕರುಣೆಯಿಂದಲಿ ನೋಡೆಯಾ
ಪ್ರೀತಿ ಎನ್ನುವ ಜೀವ ಜಲವಿರೆ
ಬಾಳಲಿರುವುದು ನೆಮ್ಮದಿ
ಆಶೆಗಳನು ಕಡಿಮೆ ಮಾಡುತ
ಮನದಿ ತುಂಬಲಿ ಸಂತಸ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ ಮುಡಿಪು
ಅಂಚೆ..ಕುರ್ನಾಡು..ದ.ಕ.574153
Comments
Post a Comment