[1/12/2020, 10:03 PM] pankajarambhat: ಗುರುಕುಲಾ ಚಿಕ್ಕಮಗಳೂರು ಘಟಕದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ನನ್ನ ಕವನ
ವಿಷಯ ...ನಾ ಕಂಡ ಇಳೆಯ ಸಂಜೆ
ಮುಸ್ಸಂಜೆ
ನಾ ಕಂಡ ಇಳೆಯ ಸಂಜೆಯ ಸೊಬಗು
ತಂದಿತು ಮನಸಿಗೆ ಬೆರಗು
ಬಾನಲಿ ಕಲಸಿದ ಚೆಲುವಿನ ಬಣ್ಣ
ಸೆಳೆಯಿತು ರಸಿಕರ ಕಣ್ಣ
ಪಡುಗಡಲಲಿ ಮುಳುಗಿದ ರವಿ
ಇಳೆಯಲಿ ತುಂಬಿದ ಬಣ್ಣದ ಸವಿ
ತಂಪಿನ ಗಾಳಿಯು ಸೊಂಪಲಿ ಬೀಸಿ
ಹರಡಿತು ಸುಮಧುರ ಗಂಧವ ಸೂಸಿ
ಹಸಿರಿನ ಸಿರಿಯೆಡೆ ಬಣ್ಣದ ಕಾಂತಿ
ಧರೆಯಲಿ ತುಂಬಿತು ಮೌನದ ಶಾಂತಿ
ನೇಸರ ಹೊರಳಿದ ನಿಶೆಯನು ಅಪ್ಪಿ
ಮನದಲಿ ಚೆಲುವಿನ ಕನಸನು ಬಿತ್ತಿ
ಹಕ್ಕಿಗಳ ಚಿಲಿಪಿಲಿ ಗಾನದ ರಾಗ
ಗುನುಗಿತು ಮನದಲಿ ಹೊಸರಾಗ
ಸೊಬಗಿನ ಸಿರಿಯಲಿ ಮೈಮನ ಮರೆತು
ತನುವಲಿ ತುಂಬಿತು ಹೊಸ ಕನಸು
ದಿನಕರ ತೆರಳಲು ಮೂಡಿದ ಶಶಿ
ಬಾನಿನ ತುಂಬಾ ಬೆಳ್ಳಿಯ ಚುಕ್ಕಿ
ಕೊಳದಲಿ ಅರಳಿತು ನೈದಿಲೆ ಹೂವು
ಶಶಿಯನು ಕಾಣುತ ಬಿರಿಯಿತು ಚೆಲುವು
ಶ್ರೀಮತಿ.ಪಂಕಜಾ.ಕೆ. ಮುಡಿಪು
[2/12/2020, 10:24 PM] pankajarambhat: ಧಾರವಾಡ ಯುವ ಬರಹಗಾರರ ಒಕ್ಕೂಟದ ಲೇಖನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ನನ್ನ ಲೇಖನ
ವಿಷಯ.. ಬದುಕಿನಲ್ಲಿ ನಾ ಕಲಿತ ಪಾಠವಿ
ಬದುಕಿನಲ್ಲಿ ತುಂಬಾ ಕಷ್ಟ ಪಟ್ಟು.ಮೇಲೇರಿದವಳು ನಾನು.ನನ್ನ ಸ್ವಪ್ರಯತ್ನದಿಂದ ವಿದ್ಯೆ ಕಲಿತು , ಕೆಲಸಕ್ಕೆ ಸೇರಿ, ನಿವೃತ್ತಿಯ ನಂತರ ಪ್ರವೃತ್ತಿಯಾಗಿ ಬಿಡುವಿನ ವೇಳೆಯಲ್ಲಿ ಬರವಣಿಗೆ ಹವ್ಯಾಸ ದಲ್ಲಿ ತೊಡಗಿದ್ದ, ನನ್ನ ಬಾಳಿನಲ್ಲಿ ಆಕೆಯ ಆಗಮನವಾದಾಗ ನಾನು ತುಂಬಾ ಖುಷಿ ಯಲ್ಲಿ ಇದ್ದೆ .ಸ್ನೇಹಿತರಿಲ್ಲದ ನಾನು ಆಕೆಯನ್ನು ತುಂಬಾ ನಂಬಿದೆ. ಮೊದಲಿನಿಂದ ಎಲ್ಲರನ್ನು ನಂಬುವ ಅಭ್ಯಾಸ ವಿದ್ದ ನಾನು ಆಕೆಯಲ್ಲಿ ಇಟ್ಟ ನಂಬಿಕೆಯ ಸೌಧ ಕಳಚಿ ಬಿತ್ತು .ನನ್ನ ಏಳ್ಗೆಯನ್ನು ಸಹಿಸದ ಆಕೆ ಇಲ್ಲ ಸಲ್ಲದ ವಿಷಯವನ್ನು ಹರಡಿ ಚುಚ್ಚು ಮಾತಿನಿಂದ ನೋಯಿಸಿದ್ದು ನನಗೆ ಅತೀವ ಬೇಸರವಾಯಿತು. ನನ್ನ ಆತ್ಮೀಯರೆಂದು ತಿಳಿದು ನನ್ನೆಲ್ಲಾ ಭಾವನೆಗಳನ್ನು ಹಂಚಿಕೊಂಡ ನಾನು ಅವರಿಂದಾದ ನಂಬಿಕೆ ದ್ರೋಹದಿಂದಾಗಿ ಯಾರನ್ನು ಅತಿಯಾಗಿ ನಂಬಬಾರದು ಈ ಜಗತ್ತಿನಲ್ಲಿ ನಂಬಿಕೆ ವಿಶ್ವಾಸಕ್ಕೆ ಯೋಗ್ಯರಾದವರು ಯಾರು ಇಲ್ಲ .,ನಮ್ಮ ಸ್ವಂತ ವಿಷಯಗಳನ್ನು ಯಾರಲ್ಲೂ ಹೇಳಬಾರದು ಎನ್ನುವ ಪಾಠವನ್ನು ಕಲಿತೆ
ಶ್ರೀಮತಿ.ಪಂಕಜಾ.ಕೆ. ಮುಡಿಪು
ದಕ್ಷಿಣ ಕನ್ನಡ
Comments
Post a Comment