ತುಳು ಕನ್ನಡ ಕಾವ್ಯ ಸಂಗಮಸ್ಪರ್ಧೆಗಾಗಿ
ಗಜಲ್
ದತ್ತಪದ. ಹೇಳಿಬಿಡು
ಆಸೆ ತೋರಿಸಿ ಕೈ ಕೊಡುವುದಿದ್ದರೆ ಹೇಳಿಬಿಡು
ಪ್ರೀತಿ ಸುರಿಸಿ ಮೋಸಮಾಡುವುದಿದ್ದರೆ ಹೇಳಿಬಿಡು
ಜಕ್ಕವಕ್ಕಿಗಳಂತೆ ನಲಿದಾಡುವ ಆಸೆ ನನಗೆ
ನನ್ನ ಜತೆಯಲಿ ಬರಲಾಗದಿದ್ದರೆ ಹೇಳಿಬಿಡು
ಬಾನಿನಲಿ ಸ್ವಚ್ಛಂದವಾಗಿ ನಾವಿಬ್ಬರು ಹಾರಾಡೋಣ
ನಿರಾಸೆ ಮಾಡಿ ಹೋಗುವುದಿದ್ದರೆ ಹೇಳಿಬಿಡು
ಒಬ್ಬರಿನ್ನೊಬ್ಬರ ಕಷ್ಟಸುಖಕ್ಕೆ ಜತೆಯಾಗೋಣ
ಮನಸು ಮುದುಡಿಸಿ ಬೇಸರಿಸುವುದಿದ್ದರೆ ಹೇಳಿಬಿಡು
ನಗು ನಗುತ ಜೀವನವನು ಕಳೆಯಬೇಕು ಪಂಕಜಾ
ಹೊಸಹೂವಿನಂತೆ ಅರಳಲಾಗದಿದ್ದರೆ ಹೇಳಿಬಿಡು
ಶ್ರೀಮತಿ.ಪಂಕಜಾ.ಕೆ. ಮುಡಿಪು
Comments
Post a Comment