ಅಮೃತ ಸಿಂಚನ ಸಾಹಿತ್ಯ ಬಳಗ ಸ್ಪರ್ಧೆಗಾಗಿ
ಕವನ
ದತ್ತಪದ..ಅಲೆಮಾರಿ
ಈ ಜೀವನ
ಮನದಲಿ ತುಂಬಿದೆ ನೂರಾರು ಆಸೆಗಳು
ನನಸಾಗಲು ಬಿಡದ ಅಲೆಮಾರಿ ಬದುಕು
ಕೆಲಸ ಮಾಡಿದರಷ್ಟೇ ತುಂಬುವುದು ಹೊಟ್ಟೆ
ಈ ಜೀವನವ ನಂಬಿ ನಾ ಕೆಟ್ಟೆ
ಇರಲೊಂದು ಮನೆಯಿಲ್ಲ ಜೀವನಕೆ ನೆಲೆಯಿಲ್ಲ
ತಿರು ತಿರುಗಿ ಬಳಲುತಿದೆ ಗೊತ್ತು ಗುರಿಯಿಲ್ಲದೆ
ಹಸಿರ ಬಯಲೇ ಹಾಸಿಗೆ ನೀಲಾಗಾಸವೆ ಹೊದಿಕೆ
ನಾನೆಲ್ಲಿರುವೇನೋ ಅದೇ ಆಗಿದೆ ನನ್ನೂರು
ನಶ್ವರದ ಜೀವನದಲಿ ನೆಲೆಯಿಲ್ಲದ ಬದುಕು
ಇಂದು ಇಲ್ಲಿ ನಾಳೆ ಇನ್ನೆಲ್ಲೋ ಇರಬೇಕು
ಊರಿಂದ ಊರಿಗೆ ತಿರುಗುತಲಿರುವ
ಅಲೆಮಾರಿ ಜೀವನವೇ ಆಗೋಯ್ತು ಬದುಕು
ಶ್ರೀಮತಿ.ಪಂಕಜಾ.ಕೆ. ಮುಡಿಪು
Comments
Post a Comment