Skip to main content

ರಾಯಚೂರು ಘಟಕ 7 ಕವನ

[14/03, 4:34 pm] Pankaja K: ಗುರುಕುಲಾ  ಜಿಲ್ಲಾಘಟಕ ರಾಯಚೂರು

ವಾರಕ್ಕೊಂದು ಕವನ. ಸ್ಪರ್ಧೆಗಾಗಿ
 ವಿಷಯ..ಅಂತರಂಗದ ಮೌನ ಮಾತು
 
       ಒಲವಿನ ಸರದಾರ

 ಭಾವನೆಗಳ ಭಾರದಲಿ ಹೃದಯ ಜಗ್ಗುತಿದೆ
 ಅಂತರಂಗದ ಮೌನ ಮಾತಾಗಿ ಹರಿದಿದೆ
 ಒಲವಿನ ಪಯಣಕ್ಕೆ ನೀ ಜತೆಯಾದಾಗ
 ಮನದಲಿ ಚೆಲುವಾದ ಕನಸುಗಳರಲಿದೆ
 
ಎದೆಯಾಳದಲಿ ಅವಿತಿರುವ ಕನಸುಗಳು
ಗರಿಬಿಚ್ಚಿ ನವಿಲಿನಂತೆ  ನರ್ತಿಸುತ್ತಿದೆ
ಇನಿಯಾ ನಿನ್ನೊಡನಾಟದಲಿ
ಮನವು ಸಂತಸದ ಕಡಲಾಗಿದೆ

ಬಾಳಿನ ಪಯಣದಲಿ  ನೀ ಜತೆಯಿರಲು
ದಾರಿಯ ಕಲ್ಲು ಮುಳ್ಳುಗಳೆಲ್ಲಾ ಹೂವಾಗಿದೆ
ನನ್ನ ಮನದ ಒಲವಿನ  ಸರದಾರ ನೀನು
ಹೃದಯವು ರಾಗವಾಗಿ ಮಧುರ ಗೀತೆ ಹಾಡಿದೆ

ನಿನ್ನೆದೆಯ ಪಿಸುಮಾತುಗಳಿಗೆ
ಕಿವಿಯಾಗುತ ನಾ ನಲಿಯುತಿರುವೆ
ಬಾಂದಳದ ಬೆಳ್ಳಿ ಚುಕ್ಕೆಯಂತೆ
ನೀನಿರಲು ಬಾಳೆಲ್ಲಾ ನವ ವಸಂತವೇ

ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.574153
[21/03, 8:13 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ರಾಯಚೂರು

ವಾರಕ್ಕೊಂದು ಸ್ಪರ್ಧೆಗಾಗಿ ಹಾಯ್ಕುಗಳು

 ಹಾಯ್ಕು. 1 ಜೀವನ

ಗುರಿಯಿರಲಿ
ಯಶಸ್ಸು ಪಡೆಯಲು
ಜೀವನದಲ್ಲಿ

 ಹಾಯ್ಕು 2   ಶಿಕ್ಷಣ

ಸಿಗಬಹುದು
ಜಗತ್ತಿನ ಅರಿವು
ಶಿಕ್ಷಣದಿಂದ

ಹಾಯ್ಕು 3 ರಾಜಕೀಯ

ರಾಜಕೀಯವು
ಕಾಲೆಳೆಯುವವರ
ಡೊಂಬರಾಟವು

ಹಾಯ್ಕು 4  ಉದ್ಯೋಗ

ಉದ್ಯೋಗದಿಂದ
ಭವಿಷ್ಯಕ್ಕೆ ಭದ್ರತೆ
ನಿರಾಳಮನ

ಹಾಯ್ಕು 5 ಪ್ರೀತಿ

ಪ್ರೀತಿಯಿದ್ದರೆ
ಜೀವನ ಸುಂದರವು
ಜೀವದುಸಿರು

ಶ್ರೀಮತಿ. ಪಂಕಜಾ.ಕೆ.. ಮುಡಿಪು
ಕುರ್ನಾಡು.ದ.ಕ.
[28/03, 8:17 pm] Pankaja K: ಗುರುಕುಲಾ ರಾಯಚೂರುಘಟಕ
ವಾರಕ್ಕೊಂದು ಸ್ಪರ್ಧೆಗಾಗಿ
ವಿಷಯ..ಹುಟ್ಟುಹಬ್ಬ

ಹುಟ್ಟಿದ ದಿನಾಚರಣೆ

ತಾಯ ಗರ್ಭದಲಿದ್ದು ಬೆಳೆಯುತ
ಬುವಿಗೆಬಂದ ದಿನವನು
ವರುಷವಾಗುತಲಿರಲು
ಹರುಷದಿ ಹುಟ್ಟು ಹಬ್ಬವ ಮಾಡುವರು

ಹೊಸ ಬಟ್ಟೆಯ ಉಟ್ಟು ನಲಿಯುತ
ಪ್ರೀತಿ ಪ್ರೇಮವ ಹಂಚುತ
ಗುರು ಹಿರಿಯರ ಆಶೀರ್ವಾದವ
ಪಡೆದು  ಗೆಲುವಲಿ ಬೀಗುತ

ದೀಪ ಉರಿಸಿ ದೇವರಿಗೆ  ವಂದಿಸಿ
ತಂದೆ ತಾಯಿಗೆ ನಮಿಸುತ
ನಮ್ಮ ಸಂಸ್ಕೃತಿ ಬಿಂಬಿಸುವ
ಹುಟ್ಟು ಹಬ್ಬವೇ ಶ್ರೇಷ್ಠವು

ಆಡಂಭರದಾಚಾರಣೆಗೆ ಒತ್ತು ಕೊಡದೆ
ಸರಳವಾಗಿ ಆಚರಿಸುತ
ಅನಾಥಮಕ್ಕಳಿಗೆ ಊಟ ಕೊಡುತಲಿ
ಹುಟ್ಟು ಹಬ್ಬವನಾಚರಿಸಿರಿ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್.ಪೋಸ್ಟ್. ಮಾಸ್ಟರ್
ಕುರ್ನಾಡು..ದ.ಕ.574153
[04/04, 7:53 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ 
ಜಿಲ್ಲಾ ಘಟಕ ರಾಯಚೂರು
ವಾರಕ್ಕೊಂದು ಸ್ಪರ್ಧೆಗಾಗಿ
ಚುಟುಕುಗಳು

 1    ಹಣ
 
 ಎಲ್ಲರಿಗೂ ಬೇಕು  ಕೈ ತುಂಬಾ ಹಣ
 ಅದಕಾಗಿ ಉರುಳಿಸುವರು ಹೆಣ
 ಸವಕಲು ನಾಣ್ಯದಂತಾಗಿದೆ ಗುಣ
 ಹಣದ ಬೆನ್ನತ್ತಿ ಕಳೆಯುವರು ಪ್ರಾಣ

2  ಜಾತಿ

ಜಾತಿ ಭೇದಗಳನ್ನು  ಅಳಿಸಬೇಕು
ನಾವೆಲ್ಲಾ ಒಂದೇ ಎಂದು ತಿಳಿಯಬೇಕು
ನುಡಿದಂತೆ  ನಡೆಯಲು  ಕಲಿಯಬೇಕು
ಜೀವನ ಸಾರ್ಥಕ ಪಡಿಸಿಕೊಳ್ಳಬೇಕು

 3  ರಾಜಕೀಯ
ರಾಜಕೀಯವೊಂದು  ಡೊಂಬರಾಟ
ಕುರ್ಚಿಗಾಗಿ ಮಾಡುವರು ಕಾದಾಟ
ಅಶ್ವಾಸನೆಗಳನು ಕೊಡುವುದೇ ಆಟ
ಬಡ ಜನರ  ಜೀವನಕೆ ತಪಿಲ್ಲ ಪರದಾಟ

4  ಸಿ.ಡಿ.

ಸಿ.ಡಿ.ಹಗರಣಗಳು ಮನೆ ಮಾತಾಗಿದೆ
ನ್ಯಾಯ ದೇವತೆ ಕಣ್ಣಿಗೆ ಬಟ್ಟೆ ಕಟ್ಟಿದೆ
ಮೋಸ ವಂಚನೆಗಳೇ ಜೀವನವಾಗಿದೆ
ಜಗತ್ತನ್ನು ದೇವರೇ  ಕಾಯಬೇಕಾಗಿದೆ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
[11/04, 7:41 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾಘಟಕ ರಾಯಚೂರು
ಗಜಲ್ ರಚನಾ ಸ್ಪರ್ಧೆಗಾಗಿ

ವಿಷಯ ..ಯುಗಾದಿ 
         ಗಜಲ್

ಹೊಸವರುಷದ ಹರುಷ ತಂದಿದೆ ಯುಗಾದಿ ಹಬ್ಬ
ಹಳತು ಕೊಳೆಗಳನು ಕಳೆದಿದೆ ಯುಗಾದಿ ಹಬ್ಬ

ಬೇವು ಬೆಲ್ಲದ ಸಮ್ಮಿಶ್ರಣ ವನು ಸವಿಯಬೇಕು
ನೋವು ನಲಿವುಗಳ ಸಂಕೇತವಾಗಿದೆ ಯುಗಾದಿಹಬ್ಬ

ಗಿಡಮರಗಳು ಎಲೆಗಳನು ಉದುರಿಸಿ ಚಿಗುರಿ ನಿಂತಿದೆ
ನವ ವಸಂತನಾಗಮನವ ಸಾರುತಿದೆ ಯುಗಾದಿ ಹಬ್ಬ

ಹಸಿರುಟ್ಟು ಭೂದೇವಿ ಮದುಮಗಳಂತೆ ಕಂಗೊಳಿಸಿದೆ
ನವೋಲ್ಲಾಸದ ಹಾಸವನು  ತುಂಬಿದೆ ಯುಗಾದಿ ಹಬ್ಬ

ಪಂಚಾಂಗ ಶ್ರವಣ ಮಾಡುವುದು ಈ ದಿನದ ವಿಶೇಷ
ಹೊಸಕನಸುಗಳ ಮನದಲಿ ಬಿತ್ತಿದೆ ಯುಗಾದಿ ಹಬ್ಬ

ದ್ವೇಷ ಅಸೂಯೆಗಳನ್ನು ಕಳೆದು ಒಗೆಯಬೇಕು 
ಪ್ರೀತಿ ವಿಶ್ವಾಸವ ಮರಳಿ  ಮೂಡಿಸಿದೆ ಯುಗಾದಿ ಹಬ್ಬ

ಸಿಹಿ ಕಹಿಗಳನು  ಸಮಾನವಾಗಿ ಕಾಣಬೇಕು ಪಂಕಜಾ
ಹಳೆಯ ವೈಮನಸ್ಸನ್ನು ಮರೆಸುತಿದೆ ಯುಗಾದಿ ಹಬ್ಬ

ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸುಸ್ಟಂಟ್.ಪೋಸ್ಟ್.ಮಾಸ್ಟರ್
ಕುರ್ನಾಡು.ದ.ಕ
[25/04, 8:34 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ ರಾಯಚೂರು
ವಾರಕ್ಕೊಂದು ಸ್ಪರ್ಧೆಗಾಗಿ
ಕವನ ರಚನೆ
ದತ್ತಪದ..ಈ ಸಲ ಕಪ್ ನಮ್ಮದೇ (ಆತ್ಮವಿಶ್ವಾಸ)

ಸ್ಪೂರ್ತಿ ಸೆಲೆ

ಹುರುಪಿನಿಂದ ಆಟ ಆಡಿ
ಗೆದ್ದೇ  ಗೆಲುವೆ ಎನುತ ಕೂಡಿ
ಗೆಲುವ ಛಲವ ಮನದಿ ತುಂಬಿ ಆಡುತ್ತಿದ್ದರು

ಎರಡು ತಂಡದೊಡನೆ ಸ್ಪರ್ಧೆ
ನಡೆಯುತಿರಲು ಮನದಲೆಲ್ಲಾ
ಆತ್ಮವಿಶ್ವಾಸ ತುಂಬಿಕೊಂಡು ಆಡುತಿದ್ದರು

ಗೆಲುವ ಗುರಿಯು ಇರಲು ಮನದಿ
ಜಯವು ಸಿಗದೆ ಇರದು ಎಂದು
ಆಟ ಆಡಿದಾಗ ನಮಗೆ  ಗೆಲುವು ನಿಶ್ಚಿತ

ಈ ಸಲ ಕಪ್ ನಮದೇ ಎಂದು
ಮನದ ತುಂಬಾ ಆತ್ಮವಿಶ್ವಾಸ ವಿಡುತ
ಗಟ್ಟಿಯಾಗಿ ನಂಬಿಕೊಂಡು ಜಯವ ಪಡೆದರು

ಪಂಕಜಾ.ಕೆ..
ಮುಡಿಪು.ಕುರ್ನಾಡು.ದ.ಕ.
[09/05, 8:24 pm] Pankaja K: ಗುರುಕುಲಾ ಕಲಾಪ್ರತಿಷ್ಠಾನ
ಜಿಲ್ಲಾ ಘಟಕ  ರಾಯಚೂರು 
ತಾಯಿ ಕವನ ಸ್ಪರ್ಧೆಗಾಗಿ

 ಅಮ್ಮನೆಂಬ ದೇವತೆ

ನವಮಾಸ ಗರ್ಭದಲ್ಲಿ ಹೊತ್ತು ಹೆತ್ತಾಕೆ
ಮಮತೆ ವಾತ್ಸಲ್ಯವ ಧಾರೆ ಎರೆದಾಕೆ
ಕೈತುತ್ತನಿಟ್ಟು ವಿದ್ಯೆ ಬುದ್ದಿ ಕಲಿಸಿದಾಕೆ
ಮಮತೆಯ ಮೂರ್ತಿ ಪ್ರತ್ಯಕ್ಷ ದೇವತೆಯೀಕೆ

ಕಷ್ಟವ ಸಹಿಸಿ ಜಗವ ಪರಿಚಯಿಸಿದಳು
ತ್ಯಾಗ ಪ್ರೀತಿ  ಮಮತೆಯ ಕಡಲವಳು
ವಿದ್ಯೆ ಬುದ್ದಿಗಳ ಕಲಿಸಿದ ಮಮಾತಾಮಯಿಯವಳು
ಸಹನೆಯ ಸಾಕಾರ ಮೂರ್ತಿಯಿವಳು

ಪ್ರತಿ ಮನೆಯ ನಂದಾದೀಪವಾಗಿರುವಳು
ತನ್ನ ಕಷ್ಟವ ತೋರಿಸದೆ ನಗುನಗುತಿರುವಳು
ತನ್ನವರಿಗಾಗಿ ಸದಾ ತುಡಿಯುವ ಧಾತ್ರಿಯವಳು
ಅಮೃತ ಸಮಾನ ಹಾಲುಣಿಸಿ ಕಂದನ ಪೊರೆದವಳು

ಕಂದನ ಏಳಿಗೆಗಾಗಿ ಅನುದಿನವೂ ಬೇಡುವಳು
ತನಗಾಗಿ ಏನನ್ನು ಬೇಡದೆ ತನ್ನವರಿಗಾಗಿ ಬೇಡುವಳು
ಕಷ್ಟ  ಸುಖಕೆ ಹೆಗಲಾಗುವಳು
 ಆತ್ಮವಿಶ್ವಾಸ ತುಂಬಿ ಮಕ್ಕಳನು ಬೆಳೆಸುವಳು

ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...