ಲೇಖನ
ವಿಷಯ .ಭ್ರಷ್ಟಾಚಾರ,ರಾಜಕಾರಣ ಮತ್ತು ಸಾಹಿತ್ಯ ನಿರ್ಮಾಣದ ಸವಾಲುಗಳು
ಬ್ರಷ್ಟಾಚಾರವೆನ್ನುವುದು ಇಂದಿನ ದಿನಗಳಲ್ಲಿ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಯಾವ ಕೆಲಸ ವಾಗಬೇಕಿದ್ದರೂ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗಲು ಸಾಧ್ಯ.
ದುಡ್ಡು ಇಲ್ಲದವನನ್ನು ಕೇಳುವವರೇ ಇಲ್ಲವೆಂದಾಗಿದೆ. ಬ್ರಷ್ಟಾಚಾರವು ಸ್ವಚ್ಛ ಸಮಾಜಕ್ಕೆ ಅಂಟಿದ ಕಳಂಕ.ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬ್ರಷ್ಟಾಚಾರವು ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚಿ ಎಲ್ಲೆಡೆಯೂ ಹಬ್ಬಿದೆ . ರಾಜಕಾರಣವು ಅವ್ಯವಸ್ಥೆಯ ಆಗರವಾಗಿದೆ. ಮೇಲಿನಿಂದ ಕೆಳಗಿನವರೆಗೂ,ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.ಜನಸಾಮಾನ್ಯ ಇದರ ಕಪಿ ಮುಷ್ಠಿಯಲ್ಲಿ ಸಿಲುಕಿ ನರಳುತ್ತಿದ್ದಾನೆ . ಪ್ರತಿಯೊಬ್ಬರು ತಮ್ಮ ಸುಖವನ್ನು ಮಾತ್ರ ಕಂಡು ಕೊಳ್ಳುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಕಾರ್ಯಕ್ಕಾಗಿ ಮೀಸಲಿಟ್ಟ ಹಣವೆಲ್ಲವು ಭ್ರಷ್ಟ ರಾಜಕಾರಣಿಗಳಿಂದಾಗಿ ಸೇರಬೇಕಾದ ಕಡೆ ಸೇರದೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಬ್ರಷ್ಟಾಚಾರವೆನ್ನುವುದು ಎಂದು ನಿರ್ಮೂಲನವಾಗುವುದೋ ಅಂದೇ ಭವ್ಯ ಭಾರತದ ನಿರ್ಮಾಣ ಸಾಧ್ಯ.ಆದರೆ ಪಾರ್ಥೇನಿಯಂ ಕಳೆಯಂತೆ ಇದರ ನಿಯಂತ್ರಣ ಸುಲಭವಲ್ಲ.
ಬ್ರಷ್ಟಾಚಾರವು ಸಾಹಿತ್ಯಕ್ಷೇತ್ರಕ್ಕೂ ತನ್ನ ಕಬಂಧ ಬಾಹುವನ್ನು ಚಾಚಿದೆ .ಇದರಿಂದಾಗಿ ಅರ್ಹರಿಗೆ ಅವಕಾಶ ಸಿಗದೆ ಅನರ್ಹರೇ ಗುರುತಿಸಿಕೊಳ್ಳುವಂತಾಗಿದೆ.ಹಣ ಕೊಟ್ಟು ಪ್ರಶಸ್ತಿ ಪಡೆಯುವ ಒಂದು ಗುಂಪೇ ಇಲ್ಲಿ ತುಂಬಿ ತುಳುಕಿದೆ .ಇದರಿಂದಾಗಿ ಅರ್ಹ ಸಾಹಿತಿಗಳು ಪ್ರಶಸ್ತಿಯಿಂದ ವಂಚಿತರಾಗುವ ದೌರ್ಭಾಗ್ಯ ಬಂದೊದಗಿದೆ. ಹಣದ ಆಮಿಷಕ್ಕೆ ಬಲಿಯಾಗದೆ ಅರ್ಹರನ್ನು ಗುರುತಿಸಿ, .ಪ್ರೋತ್ಸಾಹಿಸುವ ಕೆಲಸ ಮಾಡುವವರಿದ್ದರೆ ಮಾತ್ರ ಸಾಹಿತ್ಯ ಕ್ಷೇತ್ರ ಉಳಿಯಲು ಸಾಧ್ಯ .ಇಲ್ಲವಾದರೆ ಸಾಹಿತ್ಯ ಎನ್ನುವುದು ಒಂದು ಪ್ರಶಸ್ತಿಗಳನ್ನು ಕೊಂಡು ಕೊಳ್ಳುವ ಸಂತೆಯಾದರೂ ಅಚ್ಚರಿಯಿಲ್ಲ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶಕೃಪಾ. ಮುಡಿಪು. ಅಂಚೆ.ಕುರ್ನಾಡು.ದ.ಕ.574153
Comments
Post a Comment