[07/03, 3:16 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ. ಚಿತ್ರಕವನ ಸ್ಪರ್ಧೆಗಾಗಿ
ವಿಷಯ..ಪ್ರೇಮದ ಪಯಣ
ಒಲವಿನ ಜತೆಗಾರ
ಪ್ರೇಮದ ಪಯಣಕೆ ನೀ ಜತೆಯಾಗುತ
ನಲಿವಲಿ ಕಳೆಯಿತು ದಿನವೆಲ್ಲಾ
ಜೋಡಿ ಹಕ್ಕಿಗಳ ತೆರದಲಿ ನಲಿಯುತ
ಬಾಳದು ಸಾಗಿತು ಮುದದಿಂದ
ಖುಷಿಯಲಿ ಇರುವ ಕ್ಷಣದಲೇ ಬಂದಿತು
ಗಡಿಯ ರಕ್ಷಣೆಯ ಕರೆಯೊಂದು
ಅವಸರದಲೇ ಹೊರಟೇ ಬಿಟ್ಟನು
ಒಲವಿನಾಟಕೆ ತೆರೆಯನು ಎಳೆಯುತಲಿ
ಗಡಿಯನು ಕಾಯುವ ವೀರಯೋಧನ
ಮನದಲಿ ತುಂಬಿದೆ ತಲ್ಲಣವು
ಮುದ್ದು ಮಡದಿಯ ಎದೆಯಲಿ
ಹರಿದಿದೆ ವಿರಹದ ಉರಿಯ ರಿಂಗಣವು
ಮನದ ದುಗುಡವ ಇನಿತೂ ತೋರದೆ
ಹರಸಿ ಕಳಿಸುವ ಕ್ಷಣವದು
ಕಣ್ಣು ತುಂಬಿದ ಮುದ್ದು ಹುಡುಗಿಯ
ಸಂತೈಸಿ ಹೊರಟನು ಕರ್ತವ್ಯಕೆ
ಹೇಳಲಿ ಹೇಗೆ ವಿರಹದ ಕ್ಷಣವ
ಭಾವನೆಗಳೆಲ್ಲವೂ ಬತ್ತಿಹುದು
ಶ್ರೀಮತಿ.ಪಂಕಜಾ.ಕೆ. ಮುಡಿಪು
ಅಂಚೆ.ಕುರ್ನಾಡು. ದ..ಕ.
[14/03, 9:14 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಕವನ ಸ್ಪರ್ಧೆಗಾಗಿ
ವಿಷಯ..ವಿಸ್ಮಯ ಬದುಕು
ದೇವನ ಸೃಷ್ಟಿ ಯ ಅದ್ಬುತ
ದೂರದ ಗಗನದಿ ಮೂಡುವ ರವಿಯು
ವಿಸ್ಮಯ ತುಂಬಿದನು ಜಗಕೆಲ್ಲಾ
ಕತ್ತಲೆ ರಾತ್ರಿಯು ಕಳೆಯುತಲಿರಲು
ಬೆಳಕದು ಹರಡಿತು ಬುವಿಗೆಲ್ಲಾ
ಬಾನಿನ ತುಂಬಾ ತುಂಬಿದ ಬಣ್ಣವು
ವಿಸ್ಮಯದ ಬದುಕನು ತೋರುತಿದೆ
ಸರ ಸರ ಸರಿಯುವ ಮೋಡಗಳಾಟವು
ಮನದಲಿ ಸಂತಸ ತುಂಬುತಿದೆ
ನೀಲಾಕಾಶವ ಮುತ್ತಿದ ಕರಿ ಮೋಡಗಳು
ಮಳೆಯನು ಸುರಿಸುವ ಪರಿಯೆಂತು
ಭೂಮಿಯ ಒಡಲಲಿ ಹುದುಗಿದ ಬೀಜಗಳು
ತಲೆಯನು ಎತ್ತುವ ಪರಿಯೆಂತು
ಕಾಲನ ಆಟಕೆ ತನುವನು ಒಡ್ಡುತ
ನಲಿಯುವ ಗಿಡಗಳ ನೋಡುತಲಿ
ಬೆರಗನು ಮೂಡಿಸಿ ಅರಳುವ ಹೂಗಳು
ನಲಿವನು ಕೊಡುತಿದೆ ಮೈ ಮನಕೆ
ಶ್ರೀಮತಿ.ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ ಮುಡಿಪು .ಕುರ್ನಾಡು.ದ.ಕ 574153
ಮೊಬೈಲ್ ನಂಬರ್ 9964659620
[30/05, 4:54 pm] Pankaja K: ಧಾರವಾಡ ಯುವಬರಹಗಾರರ ಒಕ್ಕೂಟದ ಚುಟುಕು ಸ್ಪರ್ಧೆಗಾಗಿ
ದತ್ತಪದ..ಪ್ರಕೃತಿ ಹರಣ
1 ಹಸಿರು ಉಸಿರು
ಹಸಿರು ಗಿಡಮರವಿದ್ದರೆ ಸಿಗುವುದು ಉಸಿರು
ಉಳಿಸಿ ಬೆಳೆಸಬೇಕು ಭೂತಾಯಿ ಬಸಿರು
ಪ್ರಕೃತಿ ಹರಣ ಮಾಡುವುದರಿಂದ ಆಪತ್ತು
ಬಂದಿತು ಮನುಕುಲಕೆ ಎಂದಿಲ್ಲದ ವಿಪತ್ತು
2 ಉಳಿಸಿ ಬೆಳೆಸಿ
ಮಾಡಬಾರದೆಂದಿಗೂ ಪ್ರಕೃತಿ ಹರಣ
ಕಾಯುವುದು ಅದು ನಮ್ಮ ಪ್ರಾಣ
ಹಸಿರಿದ್ದರೆ ಮಾತ್ರ ಸಿಗಬಹುದು ಉಸಿರು
ಉಳಿಸಿ ಬೆಳೆಸಬೇಕು ನಾವು ಅದಕಾಗಿ ಹಸಿರು
ಶ್ರೀಮತಿ.ಪಂಕಜಾ.ಕೆ. ಮುಡಿಪು
ಕುರ್ನಾಡು.ದ.ಕ.
[13/06, 5:57 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಹಾಯ್ಕುಗಳ ರಚನೆ ಸ್ಪರ್ಧೆಗಾಗಿ
ದತ್ತಪದ..ಸಾಮರಸ್ಯ
1.ಬದುಕಿನಲಿ
ಸಾಮರಸ್ಯವಿದ್ದರೆ
ಬಾಳು ಸುಂದರ
2.ನಂದನವನ
ಸಾಮರಸ್ಯದ ಬಾಳು
ಸ್ವರ್ಗ ಸದೃಶ
ಶ್ರೀಮತಿ.ಪಂಕಜಾ.ಕೆ. ಮುಡಿಪು
ಮೊಬೈಲ್ ನಂಬರ್ 9964659620
[20/06, 9:09 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ
ನ್ಯಾನೊ ಕಥೆ ರಚನೆಯ ಸ್ಪರ್ಧೆಗಾಗಿ
ಅಪ್ಪನ ತ್ಯಾಗ
ಇದ್ದೊಬ್ಬ ಮಗನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು , ಚೆನ್ನಾಗಿ ವಿದ್ಯೆ ಕಲಿಸಿ ಒಳ್ಳೆಯ ವ್ಯಕ್ತಿಯಾಗುವಂತೆ ಮಾಡಬೇಕೆನ್ನುವ ಗುರಿ ಹೊಂದಿದ್ದ ರಾಮಪ್ಪ ,ರಾತ್ರಿ ಹಗಲೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ.ತಂದೆಯ ಕಷ್ಟದ ಬಗ್ಗೆ ಅರಿವಿಲ್ಲದ ಮಗ ದಿನಕ್ಕೊಂದು ಬೇಡಿಕೆಯನ್ನು ಇಡುತ್ತಿದ್ದ.ಒಂದು ದಿನ ತನ್ನ ಗೆಳೆಯರ ಜತೆ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದಾಗ ಅಪ್ಪ ಅಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದುದು ಕಂಡು ಆತನ ಮನಸ್ಸು ಮಿಡಿಯಿತು. ತನ್ನ ಅಪ್ಪ ತನಗಾಗಿ ಎಷ್ಟು ಕಷ್ಟ ಪಡುತ್ತಿದ್ದಾರೆ ಎನ್ನುವುದು ತಿಳಿದ ಮೇಲೆ ಪವನ್ ಮತ್ತೆಂದು ತನ್ನ ಅಪ್ಪನಲ್ಲಿಯಾವದೇ ಬೇಡಿಕೆಯನ್ನು ಇಡಲಿಲ್ಲ
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
[04/07, 9:26 pm] Pankaja K: ಧಾರವಾಡ ಯುವ ಬರಹಗಾರರ ಒಕ್ಕೂಟದ ಕವನ
ಸ್ಪರ್ಧೆಗಾಗಿ.
ದತ್ತಪದ . ಆಪದ್ಬಾಂಧವ
ಜೀವ ರಕ್ಷಕ
ರೋಗಿಗಳ ಪಾಲಿನ ಆಪದ್ಬಾಂಧವನು
ವೈದ್ಯನೆಂಬ ಜೀವರಕ್ಷಕನು
ನಿಷ್ಠೆಯಿಂದ ರೋಗಿಗಳ ಸೇವೆಮಾಡುವನು
ಜಗದ ಜನರ ರಕ್ಷಕನಿವನು
ನೊಂದವರಿಗೆ ಸಾಂತ್ವನ ಹೇಳುವನು
ಜೀವ ರಕ್ಷಿಸಲು ಶ್ರಮಿಸುವನು
ಕಾಯಕದಲ್ಲಿ ತೃಪ್ತಿ ಕಾಣುವನು
ತನ್ನ ಸುಖವ ಬದಿಗೊತ್ತಿ ದುಡಿಯುವನು
ಹಗಲು ಇರುಳು ಸೇವೆ ಮಾಡುವನು
ರೋಗಿಗಳ ಉಳಿಸಲು ಶ್ರಮಿಸುವನು
ವೈದ್ಯರು ದೇವರ ಸಮಾನರು
ರೋಗಿಗಳ ಸೇವೆಯಲಿ ಸುಖ ಕಾಣುವರು
ರೋಗಿಗಳಲಿ ಆತ್ಮವಿಶ್ವಾಸ ತುಂಬುವನು
ಸೇವೆಯೇ ಮೂಲಮಂತ್ರವಾಗಿರುವನು
ಇಂತಹ ವೈದ್ಯರಿಗೆ ಸಲ್ಲಿಸಬೇಕು ನಮನ
ನೆನೆಯುತ ಅವರ ಶ್ರಮವನು ಅನುದಿನ
ಶ್ರೀಮತಿ.ಪಂಕಜಾ ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಕುರ್ನಾಡು .ದ.ಕ.574153
ಮೊಬೈಲ್ ನಂಬರ್ 9964659620
Comments
Post a Comment