Skip to main content

ಕಥೆ



      ಹರೆಯದಾಟ

ಪವನ್ ಬಡವನಾದರೂ ಗುಣವಂತ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ತಂದೆ ತಾಯಿಯರನ್ನು ಚೆನ್ನಾಗಿ  ನೋಡಿಕೊಳ್ಳಬೇಕು ಎನ್ನುವ ಆಸೆ ಅವನಲ್ಲಿ ಬಲವಾಗಿ ಬೇರೂರಿತ್ತು.ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರದ  ವಸತಿನಿಲಯದಲ್ಲಿ  ಸ್ಥಳ ಪಡೆದು ಕಾಲೇಜಿಗೆ  ಸೇರಿದ ಆತ ಮೊದ ಮೊದಲು ಚೆನ್ನಾಗಿ ಓದುತ್ತಿದ್ದರೂ ಶ್ರೀಮಂತ ಗೆಳೆಯರ ಸಹವಾಸದಿಂದ ಸಿಗರೇಟ್ ಇತ್ಯಾದಿ ಕೆಟ್ಟ ಅಭ್ಯಾಸಗಳನ್ನು ಪ್ರಾರಂಭಿಸಿ ವಿದ್ಯೆಯನ್ನು ನಿರ್ಲಕ್ಷಿಸ ತೊಡಗಿದ. ಆ ದಿನ ಶಾಲಾವಾರ್ಷಿಕೋತ್ಸವ ದಲ್ಲಿ ಪರಿಚಯವಾದ ನಳಿನಿ ಅವನ ಬಾಳಿನಲ್ಲಿ ದೊಡ್ಡದೊಂದು ಬಿರುಗಾಳಿ ಎಬ್ಬಿಸಬಹುದೆನ್ನುವ ಕಲ್ಪನೆಯೇ ಅವನಿಗೆ ಇರಲಿಲ್ಲ . ಅದು ಯಾವ ಕೆಟ್ಟ ಗಳಿಗೆಯಲ್ಲಿ ಅವಳ ಪರಿಚಯವಾಯಿತೋ, ಪವನ್ ಸಂಪೂರ್ಣ ಬದಲಾದ .ನಳಿನಿಯನ್ನು  ಒಲಿಸಿಕೊಳ್ಳಲಿಕ್ಕೆಂದು ದಿನಕ್ಕೊಂದು ತರದ ಬಟ್ಟೆ ತೊಟ್ಟು  ಸಿನೆಮಾ ನಟನ ತರ ನಟನೆ ಮಾಡುತ್ತಾ ಕೈಯಲ್ಲಿ ಸಿಗರೇಟ್ ಹಿಡಿದು ತಿರುಗಾಡುತ್ತಿದ್ದ ,ಅವನನ್ನು  ನಳಿನಿಯು ತುಂಬಾ ಇಷ್ಟಪಟ್ಟಳು.ಇಬ್ಬರು ಮನಬಂದಂತೆ ಎಲ್ಲೆಲ್ಲೋ ತಿರುಗಾಡುತ್ತ ಇದ್ದು  ಶಾಲೆಯ ಪಾಠಗಳನ್ನು ನಿರ್ಲಕ್ಷಿಸುತ್ತಿದ್ದರು.
               ದಿನದಿಂದ ದಿನಕ್ಕೆ ತಮ್ಮ ಮಗನ ಹಣದ ಬೇಡಿಕೆ ಜಾಸ್ತಿಯಾಗುತ್ತಿರುವುದು  ತಿಳಿದು ಬಡ ತಂದೆ ತಾಯಿ ಕಂಗಾಲಾದರು ಆದರೂ ಮಗ ಕಲಿತು ದೊಡ್ಡ ಕೆಲಸಕ್ಕೆ ಸೇರಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಆಸೆಯಿಂದ ಮಗ ಕೇಳಿಕೇಳಿದಾಗಲೆಲ್ಲಾ ಕಷ್ಟಪಟ್ಟು ಕೆಲಸ ಮಾಡಿ ಹಣ ಕಳುಹಿಸುತ್ತಿದ್ದರು. ಇದಾವುದರ ಪರಿವೆ ಇಲ್ಲದೆ ಮನಬಂದಂತೆ ಖರ್ಚು. ಮಾಡುತಿದ್ದ  ಪವನ್ ಅದೊಂದು ದಿನ ನಳಿನಿ ಇವನನ್ನು ಬಿಟ್ಟು ಬೇರೊಬ್ಬ ಹುಡುಗನ ಜತೆ ಕೈಗೆ ಕೈ ಸೇರಿಸಿ ಹೋಗುತ್ತಿರುವುದು ನೋಡಿದಾಗ ಪರಿಸ್ಥಿತಿಯ ಅರಿವಾಯಿತು. ತಾನು ಪ್ರೀತಿ ಎಂದು ತಿಳಿದುದು ಕೇವಲ ಆಕರ್ಷಣೆ ಮಾತ್ರ  ಇಷ್ಟಕ್ಕಾಗಿ ತಾನು ತನ್ನ ಓದು ಗುರಿಯನ್ನು ಮರೆತು ಬಿಟ್ಟೆನಲ್ಲಾ  ಎಂದು ಪಶ್ಚಾತ್ತಾಪವಾಗಿ ಕೈಯಲ್ಲಿ ಸಿಗರೇಟ್ ಹಿಡಿದರೂ ಸೇದುವ ಮನಸಿಲ್ಲದೆ ಪಾರ್ಕಿನ ಬೆಂಚಿನ ಮೇಲೆ ಅನ್ಯಮನಸ್ಕನಾಗಿ ಕುಳಿತೇ ಇದ್ದ.
ಶಾಲಾ ಕಾಲೇಜಿನ ದಿನಗಳಲ್ಲಿ  ತಮ್ಮ ಗುರಿಯನ್ನು ಮರೆತು ಪ್ರೀತಿ ಪ್ರೇಮ ಎಂದು ತಿರುಗಾಡಿ ತಮ್ಮನ್ನು ಹೆತ್ತ ತಂದೆ  ತಾಯಿಗೆ ಮೋಸ  ಮಾಡಿ ಜೀವನ ಹಾಳು ಮಾಡಿಕೊಳ್ಳದೆ  ಚೆನ್ನಾಗಿ ವಿದ್ಯೆ ಕಲಿತು ತಮ್ಮ ಕಾಲ ಮೇಲೆ ನಿಂತು ತಮ್ಮನ್ನು ಪ್ರೀತಿಯಿಂದ  ಸಾಕಿದ ತಂದೆ ತಾಯಿ ಋಣ ತೀರಿಸಬೇಕಾದುದು ಮಕ್ಕಳ ಕರ್ತವ್ಯ ಎನ್ನುವುದು ಪವನ್ ನಿಗೆ ತಡವಾಗಿಯಾದರೂ ತಿಳಿದು ಬಂದು ಆತ ಮುಂದೆಂದೂ ಶೋಕಿಗೆ ಬಲಿಯಾಗದೆ ಚೆನ್ನಾಗಿ ಓದಿ ಉನ್ನತ ಹುದ್ದೆ ಸಂಪಾದಿಸಿ ತನ್ನ  ವೃದ್ಧ ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಂಡು ಇದ್ದರೆ ಇಂತಹ ಮಗನಿರಬೇಕು ಎನ್ನುವಂತೆ ಬಾಳಿದ

                ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...