ದೇಶದ ಬೆನ್ನೆಲುಬು
ಅನ್ನವ ನೀಡುವ ರೈತನು ಇದ್ದರೆ
ಬನ್ನವು ಇಲ್ಲವು ಬದುಕಿನಲಿ
ಹೊನ್ನಿನ ಬೆಳೆಯನು ಬೆಳೆಯುವ ರೈತನು
ಬಾಳನು ಸಾಗಿಸುವ ಸಹನೆಯಲಿ
ದೇಶದ ಬೆನ್ನೆಲುಬೆನ್ನುವ ರೈತನು
ಸಾಲದ ಶೂಲಕೆ ಏರುವನು
ಬೆಳೆದಿಹ ಬೆಳೆಗೆ ಫಲವದು ಸಿಗದೆ
ನೋವಲಿ ನೇಣಿಗೆ ಶರಣಾಗುವನು
ಈಸಬೇಕು ಇದ್ದು ಜಯಿಸಬೇಕು
ಎನ್ನುವ ಮಂತ್ರವ ತಿಳಿ ನೀನು
ನೇಣಿಗೆ ಶರಣು ಬೇಡವು ರೈತ
ಬದುಕಲಿ ಭರವಸೆ ಇಡು ನೀನು
ಒಳ್ಳೆಯ ದಿನಗಳು ಬರುವುದು ಬೇಗನೆ
ದೇವರ ನಂಬುತ ದುಡಿಯುತಿರು
ಸರಕಾರದ ಸವಲತ್ತುಗಳ ಪಡೆಯುತ
ಬಾಳನು ಹಸನಾಗಿಸುತಿರು
ಪಂಕಜಾ.ಕೆ. ರಾಮಭಟ್ .ಮುಡಿಪು
Comments
Post a Comment