ಸಾವಿತ್ರಿಯ ಎದೆಯೊಳಗೊಂದು ಭಾವನಾತ್ಮಕ ಸುತ್ತು.
****************
ಪುರಾಣ ಕಾಲದಿಂದಲೂ ಸತ್ಯವಾನ ಸಾವಿತ್ರಿ ಎಂದೇ ಹೆಸರಾದ
ಅದೇ ಹೆಸರಿನಿಂದ ಕೂಡಿದ
"ಸಾವಿತ್ರಿ" ಎಂಬ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವಾಗಿದೆ.
ಈ ಕವನ ಸಂಕಲನದ ಕವಯತ್ರಿ ಅಂಚೆ ಇಲಾಖೆಯಿಂದ ನಿವೃತ್ತಿಗೊಂಡು ಮೊದಲಿನ ಕನಸುಗಳಿಗೆ ಸಮಯವನ್ನು ಜೋಡಿಸಿಕೊಂಡು ಕವಿತೆ ಲೇಖನಗಳ ಬರೆಯುವ ಪ್ರವೃತ್ತಿಯವರಾದ "ಶ್ರೀಮತಿ ಪಂಕಜಾ ಕೆ ಮುಡಿಪು" ದಕ್ಷಿಣ ಕನ್ನಡ ಜಿಲ್ಲೆಯವರು.
ನಿಸರ್ಗ, ದೇವರು, ಪ್ರೀತಿ, ಬಾಲ್ಯ, ಯೌವನ, ಮುಪ್ಪು, ದಾಂಪತ್ಯ.....ಹೀಗೆ ಹತ್ತಾರು ಸಂವೇದನೆಯ ರೂಪದಲ್ಲಿ ಕವಿತೆಗಳ ಅನಾವರಣಗೊಳಿಸಿದ ಈ ಕವಯತ್ರಿ ಅನೇಕ ಮಾಸಪತ್ರಿಕೆ, ಪಾಕ್ಷಿಕ ಪತ್ರಿಕೆ, ವಾರಪತ್ರಿಕೆಗಳಲ್ಲಿ ತಮ್ಮ ಬರಹಗಳ ಛಾಪನ್ನು ಮೂಡಿಸಿಕೊಂಡವರು.
ಕವಿತೆಗಳ ಭಾವದೊಂದಿಗೆ ಹೆಚ್ಚು ಲೀನವಾಗುವ ಇವರ ಬರಹಗಳು ಓದುಗನೆದೆಗೆ Touch ಕೊಡುವುದು ಸತ್ಯ.ಮಾತೆಲ್ಲವೂ ಹಿತಮಿತವಾಗಿ ಭಾವನೆಯ ವಿಸ್ತರಣೆ ಇವರ ಕವಿತೆಗಳ *Special lines*.
ದೇಶ, ಭಾಷೆ, ಯೋಧನ ಮೇಲಿನ ಕವಿತೆಗಳು ಇವರ ಅದ್ಭುತ ವಾಕ್ ಚಾತುರ್ಯ ಹಾಗೂ ಒಳಮನಸ್ಸಿನ ಬಯಕೆಗಳನ್ನು ಉದ್ದೀಪನ ಗೊಳಿಸುತ್ತವೆ.
ಹೇಳಬೇಕಾದ್ದನ್ನು ಎಲ್ಲೂ ನೋವಾಗದಂತೆ ಹೇಳುವ ಜಾಣ್ಮೆ ಈ ಕವಯತ್ರಿಯಲ್ಲಿ ಅಡಗಿದೆ.
ಸಾವಿತ್ರಿ ಪುಸ್ತಕಕ್ಕೆ
ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರ ಬಹು ಉತ್ತಮ ಮುನ್ನುಡಿಯಿದೆ.
ಎಂ ಸುಬ್ರಹ್ಮಣ್ಯ ಭಟ್ಟ ಅವರ ಹಿಂಬದಿಯ ನುಡಿಯಿದೆ.
ಇಬ್ಬರೂ ಬಹು ಪಕ್ವತೆಯ ಕಣಿವೆಯಲ್ಲಿ ನಿಂತು ಆಳ ಅಗಲಗಳ ಮೇಲೆ ತಮ್ಮ ಅಭಿಮತವನ್ನು ಹೇಳಿಕೊಂಡಿದ್ದಾರೆ.
ಸುಂದರ ಮುಖಪುಟ.ನೋಡ್ತಾ ಇದ್ರೆ ನೋಡ್ತಾನೇ ಇರಬೇಕೆನ್ನಿಸುತ್ತದೆ.
ಒಟ್ಟಿನಲ್ಲಿ ಉತ್ತಮ ಪುಸ್ತಕವನ್ನು ಓದಿದ ಸರಾಗವಾದ ನವಿರು ಸಾರ್ಥಕ್ಯತೆ ಈ ವಾರ ದೊರೆಯಿತು.
ಒಳಿತಾಗಲಿ ಕವಯತ್ರಿಗೆ.
ಇಂತಿ ನಿಮ್ಮವು
ಗಣಪತಿ ಹೆಗಡೆ
ದಾಂಡೇಲಿ.
Comments
Post a Comment