Skip to main content

ಸಾವಿತ್ರಿ ಕವನ ಸಂಕಲನಡಬಗ್ಗೆ ಆತ್ಮೀಯರ ನುಡಿ

ಸಾವಿತ್ರಿಯ ಎದೆಯೊಳಗೊಂದು ಭಾವನಾತ್ಮಕ ಸುತ್ತು.
****************
ಪುರಾಣ ಕಾಲದಿಂದಲೂ ಸತ್ಯವಾನ ಸಾವಿತ್ರಿ ಎಂದೇ ಹೆಸರಾದ 
ಅದೇ ಹೆಸರಿನಿಂದ ಕೂಡಿದ  
 "ಸಾವಿತ್ರಿ" ಎಂಬ ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕವಾಗಿದೆ.

ಈ ಕವನ ಸಂಕಲನದ  ಕವಯತ್ರಿ ಅಂಚೆ ಇಲಾಖೆಯಿಂದ ನಿವೃತ್ತಿಗೊಂಡು ಮೊದಲಿನ ಕನಸುಗಳಿಗೆ ಸಮಯವನ್ನು ಜೋಡಿಸಿಕೊಂಡು‌ ಕವಿತೆ ಲೇಖನಗಳ ಬರೆಯುವ ಪ್ರವೃತ್ತಿಯವರಾದ "ಶ್ರೀಮತಿ ಪಂಕಜಾ ಕೆ ಮುಡಿಪು" ದಕ್ಷಿಣ ಕನ್ನಡ ಜಿಲ್ಲೆಯವರು.

ನಿಸರ್ಗ, ದೇವರು, ಪ್ರೀತಿ, ಬಾಲ್ಯ, ಯೌವನ, ಮುಪ್ಪು, ದಾಂಪತ್ಯ.....ಹೀಗೆ ಹತ್ತಾರು ಸಂವೇದನೆಯ ರೂಪದಲ್ಲಿ ಕವಿತೆಗಳ ಅನಾವರಣಗೊಳಿಸಿದ ಈ ಕವಯತ್ರಿ ಅನೇಕ ಮಾಸಪತ್ರಿಕೆ, ಪಾಕ್ಷಿಕ ಪತ್ರಿಕೆ, ವಾರಪತ್ರಿಕೆಗಳಲ್ಲಿ ತಮ್ಮ ಬರಹಗಳ ಛಾಪನ್ನು ಮೂಡಿಸಿಕೊಂಡವರು.

ಕವಿತೆಗಳ ಭಾವದೊಂದಿಗೆ ಹೆಚ್ಚು ಲೀನವಾಗುವ ಇವರ ಬರಹಗಳು ಓದುಗನೆದೆಗೆ Touch ಕೊಡುವುದು ಸತ್ಯ‌.ಮಾತೆಲ್ಲವೂ ಹಿತಮಿತವಾಗಿ ಭಾವನೆಯ ವಿಸ್ತರಣೆ ಇವರ  ಕವಿತೆಗಳ *Special lines*.

ದೇಶ, ಭಾಷೆ, ಯೋಧನ ಮೇಲಿನ ಕವಿತೆಗಳು ಇವರ ಅದ್ಭುತ ವಾಕ್ ಚಾತುರ್ಯ ಹಾಗೂ ಒಳ‌ಮನಸ್ಸಿನ ಬಯಕೆಗಳನ್ನು ಉದ್ದೀಪನ ಗೊಳಿಸುತ್ತವೆ.
ಹೇಳಬೇಕಾದ್ದನ್ನು ಎಲ್ಲೂ ನೋವಾಗದಂತೆ ಹೇಳುವ ಜಾಣ್ಮೆ ಈ ಕವಯತ್ರಿಯಲ್ಲಿ ಅಡಗಿದೆ.


ಸಾವಿತ್ರಿ ಪುಸ್ತಕಕ್ಕೆ 
ಶ್ರೀ ಗುಣಾಜೆ ರಾಮಚಂದ್ರ ಭಟ್ ಅವರ ಬಹು ಉತ್ತಮ ಮುನ್ನುಡಿಯಿದೆ.
ಎಂ ಸುಬ್ರಹ್ಮಣ್ಯ ಭಟ್ಟ ಅವರ ಹಿಂಬದಿಯ ನುಡಿಯಿದೆ.
ಇಬ್ಬರೂ ಬಹು ಪಕ್ವತೆಯ ಕಣಿವೆಯಲ್ಲಿ ನಿಂತು ಆಳ ಅಗಲಗಳ ಮೇಲೆ ತಮ್ಮ ಅಭಿಮತವನ್ನು ಹೇಳಿಕೊಂಡಿದ್ದಾರೆ.

ಸುಂದರ ಮುಖಪುಟ.ನೋಡ್ತಾ ಇದ್ರೆ ನೋಡ್ತಾನೇ ಇರಬೇಕೆನ್ನಿಸುತ್ತದೆ.

ಒಟ್ಟಿನಲ್ಲಿ ಉತ್ತಮ ಪುಸ್ತಕವನ್ನು ಓದಿದ ಸರಾಗವಾದ ನವಿರು ಸಾರ್ಥಕ್ಯತೆ ಈ ವಾರ ದೊರೆಯಿತು.

ಒಳಿತಾಗಲಿ ಕವಯತ್ರಿಗೆ. 

ಇಂತಿ ನಿಮ್ಮವು

ಗಣಪತಿ ಹೆಗಡೆ
ದಾಂಡೇಲಿ.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...