Skip to main content

ಮರಳಿ ಗೂಡಿಗೆ ಕಥೆ

ಕಿರುಗತೆ*

ಮರಳಿ ಗೂಡಿಗೆ

ತಮ್ಮ ಮನೆಯ ವರಾಂಡದಲ್ಲಿ ಆರಾಮವಾಗಿ ಪೇಪರ್ ಓದುತ್ತಾ ಕುಳಿತಿದ್ದ ರಾಯರಿಗೆ ಮೊಬೈಲ್ನ ರಿಂಗ್  ಎಚ್ಚರಿಸಿತು.ಆ ಕಡೆಯಿಂದ ಬೀಗರು‌ ಶ್ಯಾಮಣ್ಣನವರ ಆತಂಕದ ಧ್ವನಿ ಕೇಳಿಸಿತು.ಅಂಜಲಿ ರಮೇಶ್ ಇಬ್ಬರೂ ಅಮೆರಿಕಾದಿಂದ ವಾಪಸ್ ಬರ್ತಾ ಇದ್ದಾರೆ.ಅವರಿಗೆ ಅಲ್ಲಿ ಏನೋ ತೊಂದರೆಯಾಗಿದೆ..ತುಂಬಾ ಒತ್ತಡದಲ್ಲಿದ್ದಾರೆ ಅನ್ನಿಸ್ತು
ಇಂದು ಸಂಜೆ‌ ನೀವು‌ ಬನ್ನಿ.ಎಲ್ಲರೂ ಒಟ್ಟಿಗೆ ಕೂತು ಮಾತಾಡೋಣ ಎಂದರು ಶ್ಯಾಮಣ್ಣ..ಅವರ ಮಾತು ಕೇಳುತ್ತಲೇ ರಾಯರಿಗೆ ಸಿಡಿಲು ಬಡಿದಂತಾಯ್ತು..
ಖಾಸಗಿ ಕಂಪನಿಯೊಂದರಲ್ಲಿ ಗುಮಾಸ್ತರಾಗಿ ಬಡತನದಲ್ಲೇ ಬದುಕಿದ ರಾಯರು ಹೆಂಡತಿ ತೀರಿಕೊಂಡ ನಂತರ ಒಬ್ಬಳೇ ಮಗಳು ಅಂಜಲಿಗಾಗಿ ಬಹಳ ಕಷ್ಟದ ಬಾಳುವೆ‌ ನಡೆಸಿದ್ದರು..ತಾಯಿ ಇಲ್ಲದ ಮಗಳೆಂದು ಅಂಜಲಿಯನ್ನು ಅತ್ಯಂತ ‌ಪ್ರೀತಿಯಿಂದ‌ ಬೆಳೆಸಿದ್ದರು..ಅಂಜಲಿಯೂ ಸಹ‌ ಬಡತನವಿದ್ದರೂ ಜಾಣತನದಿಂದ ಅಚ್ಚುಕಟ್ಟಾಗಿ ಮನೆ ಕೆಲಸ, ಅಡುಗೆ,,ಕಾಲೇಜು ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿದ್ದಳು.ತಂದೆಯವರ,ಅತಿಥಿ ಅಭ್ಯಾಗತರ ಕಾಳಜಿ ವಹಿಸುತ್ತ ಎಲ್ಲರ ಅಚ್ಚುಮೆಚ್ಚಿನವಳಾಗಿದ್ದಳು.
ಅಂಜಲಿ ಕಾಲೇಜು ಮುಗಿಸುವ ಮೊದಲೇ ವಿದೇಶದಲ್ಲಿ ನೌಕರಿ ಮಾಡುವ ವರ ಸಿಕ್ಕನೆಂದು ರಾಯರು ರಮೇಶ್ ನೊಡನೆ ಮದುವೆ ಮಾಡಿ ಕೊಟ್ಟಿದ್ದರು.ಮಗಳು ಅಳಿಯ ಇಬ್ಬರೂ ಅಮೆರಿಕಾಕ್ಕೆ ಹೋಗಿ ಆರು ತಿಂಗಳಲ್ಲೇ ಮತ್ತೆ ವಾಪಸ್ ಬರುತ್ತಿದ್ದಾರೆ.ಅವರಿಗೆ ದೇಶ ಬಿಟ್ಟು ಬರುವಂತಹ ಏನು ಸಮಸ್ಯೆ ಬಂದಿರಬಹುದೆಂಬ ರಾಯರಿಗೆ ಚಿಂತೆ ಕಾಡ ತೊಡಗಿತು....
                         ಏನಾದರಾಗಲಿ ಒಮ್ಮೆ ಬೀಗರ ಮನೆ ಕಡೆ ಹೋಗಿ ಬರುವ ವಿಷಯವೇನೆಂದು ಆಗ ತಿಳಿಯುತ್ತದಲ್ಲ ಎಂದು ನಿಶ್ಚಯಿಸಿದ ರಾಯರು ಬೇಗನೆ ಹೊರಟು ಬೀಗರ ಮನೆ ಸೇರುವುದಕ್ಕೂ ಮಗಳು ಅಳಿಯ ಬರುವುದಕ್ಕೂ ಸರಿಯಾಯಿತು.
                     ತಿಂಡಿ ಊಟ ಎಲ್ಲಾ ಆದಮೇಲೆ ಆರಾಮ ಕುಳಿತಾಗ ಮನೆಯವರೆಲ್ಲರ ಜತೆ ರಮೇಶ ತಾನು ಅಮೆರಿಕಾ ಬಿಟ್ಟು ಬರಲು ಕಾರಣವಾದ ವಿಷಯವನ್ನು ವಿವರಿಸುತ್ತಾ ಇಂಡಿಯಾದಲ್ಲಿಯೇ ಸ್ವಂತ ಕಂಪನಿಯನ್ನು  ಇಟ್ಟು ಇಂಡಿಯಾದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವ ಯೋಜನೆ ನನ್ನದು ಅಲ್ಲದೆ ಅಮೆರಿಕಾದಲ್ಲೂ  ಇತ್ತೀಚೆಗೆ ವಾತಾವರಣ ಸರಿ ಇಲ್ಲ   ವಿದೇಶದವರನ್ನು ಅವರು ನಡೆಸಿಕೊಳ್ಳುವ ರೀತಿ  ನನಗೆ ಒತ್ತಡವುಂಟು ಮಾಡಿದೆ.ಅದಕ್ಕಾಗಿ ನಾವಿಬ್ಬರು ಚರ್ಚಿಸಿ ನಿರ್ಧಾರ ಮಾಡಿದ್ದೇವೆ. ನನ್ನ ಗೆಳೆಯನ ಸಹಾಯದಿಂದ  ಹೊಸ ಕಂಪನಿಗೆ ಬೇಕಾದ ಎಲ್ಲಾ ವ್ಯವಸ್ಥೆಯಾಗಿದೆ.ಅಮ್ಮ ಅಪ್ಪ ಮಾವ ನೀವು ನಮ್ಮನ್ನು ಹರಸ ಬೇಕು  ಮೊದಲಿನಿಂದ ಇದು ನನ್ನ ಕನಸಾಗಿತ್ತು ಎಂದು ರಮೇಶ ಹೇಳಿದಾಗ ಎಲ್ಲರೂ ಅವನ ನಿರ್ಧಾರಕ್ಕೆ ಸಂತಸಗೊಂಡರು  ಮಕ್ಕಳು  ತಮ್ಮ ಕಣ್ಣೆದುರೇ ಇರುತ್ತಾರೆ ವೃದ್ಧಾಪ್ಯದಲ್ಲಿ ತಮಗೆ ಉರುಗೋಲಾಗುತ್ತಾರೆ ಎನ್ನುವ ಖುಷಿ ಬೀಗರಿಬ್ಬರ ಮುಖದಲ್ಲೂ ಸಂತಸದ ನಗೆಯನ್ನು ತಂದಿತು

ಪಂಕಜಾ.ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...