ವಿರಹವು ಕಾಡಿದೆ
ಬಾಗಿಲಿಗೊರಗುತ ತರುಣಿಯು ನಿಂತಳು
ನಲ್ಲನ ದಾರಿಯ ಕಾಯುತಲಿ
ಕತ್ತಲು ಕವಿದರೂ ಬರಲೇ ಇಲ್ಲ
ಎನ್ನುವ ಕಾತರ ಕಂಗಳಲಿ
ಕೆಂಪಂಚಿನ ಸೀರೆಯ ಉಟ್ಟಿಹ
ತರುಣಿಯ ಮೊಗದಲಿ ಬೇಸರ
ವಿರಹದಿ ಬೇಯುತ ನಿಂತಿಹಳಾಕೆಯು
ಮುಳುಗಿಯೇ ಬಿಟ್ಟನು ನೇಸರ
ಅಂದದ ಮೊಗದಲಿ ಚಿಂತೆಯು ತುಂಬಿದೆ
ನೋವಲಿ ಮಿಂದಿದೆ ಕಣ್ಣುಗಳು
ಬಯಕೆಯ ಬಲೆಯಲಿ ಸಿಲುಕುತಲಿರುತಲಿ
ಕಾಡಿದೆ ಹಲವಿದ ಕನಸುಗಳು
ಮೊದಲ ರಾತ್ರಿಯೇ ನಲ್ಲನು ತೊರೆದನು
ಬಾಡಿಯೇ ಹೋಯಿತು ಜೀವ
ಕಂಡ ಕನಸುಗಳೆಲ್ಲವು ಕರಗಿತು
ದಾರಿಯ ತೋರು ನೀ ದೇವ
ಪಂಕಜಾ.ಕೆ. ರಾಮಭಟ್.ಮುಡಿಪು
Comments
Post a Comment