ಅದ್ಬುತ ದೃಶ್ಯ
ಹಚ್ಚ ಹಸಿರಿನ ಸೀರೆ ಉಟ್ಟಿದೆ ಪ್ರಕೃತಿ
ಮಾಡಬೇಡ ಮಾನವ ಅದನೆಂದಿಗೂ ವಿಕೃತಿ
ಕೊಳದ ನೀರಲಿ ಹಸಿರು ಸಿರಿಯ ಪ್ರತಿಫಲನ
ರಸಿಕ ಕಂಗಳಿಗೆ ಹಬ್ಬದ ರಸದೌತಣ
ನೀಲ ಬಾನಿಗೆ ಕಟ್ಟಿದಂತಿದೆ ತೋರಣ
ಭೂದೇವಿ ಮಡಿಲಿಗೆ ತೊಡಿಸಿದ ಆಭರಣ
ಸ್ವಚ್ಛ ಸುಂದರ ಸರೋವರದ ಮಾಟ
ಮೈಮರೆಸುತಿದೆ ಪ್ರಕೃತಿಯ ರಮ್ಯ ನೋಟ
ಬಾನು ಬುವಿ ಒಂದಾದಂತೆ ತೋರುತಿದೆ
ಕಣ್ಣು ಕಟ್ಟುವ ಸ್ತಬ್ಧ ಚಿತ್ರದಂತಿದೆ
ಹಸಿರು, ಜಲ ದೇವರು ಕೊಟ್ಟ ವರ
ಉಳಿಸಿ ಬೆಳೆಸಬೇಕು ನಾವು ಗಿಡಮರ
ಪಂಕಜಾ.ಕೆ. ಮುಡಿಪು
Comments
Post a Comment