ಪ್ರಕಾರ..ಮದನವತಿ
ಈಶನ ಪುತ್ರ
ಕರಗಳ ಮುಗಿಯುತ ಬೇಡುವೆ ನಿನ್ನನು ಗಣಪತಿಯೇ
ವರಗಳ ಕೊಡುತಲಿ ಹರಸುತಲೆಮ್ಮನು ನೀ ಪೊರೆಯೋ
ಚರಣಕ್ಕೆರಗುತಲಿ ನೆನೆವನು ನಿನ್ನನು ಭಕುತಿಯಲೀ
ಕರೆದರೆ ಬರುವೆಯ ಗೌರಿಯ ಪುತ್ರನೆ ಬೇಗದಲೀ
ಈಶನ ಕುವರನೆ ಮೂಷಿಕ ವಾಹನ ಗಜವದನಾ
ದೋಷವ ಕಳೆಯುತ ಬಕುತರ ಸಲಹುವ ಗಜಮುಖನೇ
ಮೋಸವ ಮಾಡುವ ಜನರಿಗೆ ಬುದ್ಧಿಯ ಕೊಡುತಿರುನೀ
ತೋಷದಿ ಜಗದಲಿ ಬಾಳಲು ನಮ್ಮನು ಹರಸುತಲೀ
ಪಂಕಜಾ.ಕೆ. ರಾಮಭಟ್.ಮುಡಿಪು
Comments
Post a Comment