ಐಕ್ಯ ಮಂತ್ರ
ಕನ್ನಡ ನುಡಿಯನು ನುಡಿಯುತ ನಾವು
ಕನ್ನಡ ಭಾಷೆಯ ಬೆಳೆಸೋಣ
ಕನ್ನಡಿಗರೆಂಬ ಹೆಮ್ಮೆಯಲಿರುತ
ತಾಯಿಯ ಸೇವೆಯ ಮಾಡೋಣ
ಕನ್ನಡ ಭಾಷೆಯ ಉಳಿಸುತ ನಾವು
ಕನ್ನಡ ತನವನು ಮೆರೆಯೋಣ
ಕನ್ನಡ ನುಡಿಯನು ಉಸಿರಲಿ ತುಂಬುತ
ಹೆಮ್ಮೆಯಲಿ ತಲೆಯನು ಎತ್ತೋಣ
ಪಂಪರು ರನ್ನರು ಜನ್ನರೆಲ್ಲರು
ಸೊಂಪಲಿ ಹಾಡಿದ ಕವಿತೆಯದು
ಬೇಂದ್ರೆ ಕುವೆಂಪು ಬೆಳೆಸಿದ ಭಾಷೆ
ಕಂಪನು ಬೀರುವ ಕಾವ್ಯವಿದು
ಸುಂದರ ಸುಲಲಿತ ಭಾಷೆಯು ಕನ್ನಡ
ಕಂದನ ತೊದಲಿನ ಮೊದಲನುಡಿಯು
ಕವಿಕೋಗಿಲೆಗಳು ಹಾಡಿದ ಭಾಷೆಯು
ಭಿನ್ನತೆಯಲ್ಲೂ ಏಕತೆ ಸಾರಿದ ಹೊನ್ನುಡಿಯು
*ಪಂಕಜಾ.ಕೆ. ಮುಡಿಪು*
Comments
Post a Comment