ಕ್ಷಿಪಣಿ ಮಾನವ
ತಮಿಳುನಾಡಿನ ರಾಮೇಶ್ವರದಲ್ಲಿ ಇವರ ಜನನ
ಅಂತರಿಕ್ಷಯಾನ ಇಂಜಿನೀರ್ ಆಗಿ ಅಧ್ಯಯನ
ರಕ್ಷಣಾ ಸಂಸ್ಥೆಯಲ್ಲಿ ನಾಲ್ಕು ದಶಕ ಕಾರ್ಯ ನಿರ್ವಹಣ
ದೇಶದ ಹನ್ನೊಂದನೇ ರಾಷ್ಟ್ರಪತಿಯಾಗಿ ಸಾಧನೆ
ಕ್ಷಿಪಣಿ ಮಾನವನೆಂದು ಬಿರುದು ಪಡೆದರು
ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪಡೆದರು
ಪದ್ಮಭೂಷಣ ಪದ್ಮವಿಭೂಷಣ ಪ್ರಶಸ್ತಿ ವಿಜೇತರು
ಇಸ್ರೋದಂತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು
ವಿಜ್ಞಾನಿ ಕವಿ ಲೇಖಕ ಸರಳ ಪ್ರಾಮಾಣಿಕ ವ್ಯಕ್ತಿಯಿವರು
ಮೇಧಾವಿತನದ ಸಾಕಾರಮೂರ್ತಿಯಾಗಿ ಬಾಳಿ ಬದುಕಿದರು
ಆಧುನಿಕ ಭಾರತ ನಿರ್ಮಾಣಕ್ಕಾಗಿ ಜೀವನ ಮುಡುಪಾಗಿಟ್ಟರು
ಅಪ್ರತಿಮ ದೇಶಭಕ್ತ ಉತ್ತಮ ವಾಗ್ಮಿ ಆಗಿದ್ದರು
ಪಂಕಜಾ.ಕೆ. ಮುಡಿಪು
Comments
Post a Comment