Skip to main content

ಸೀತಾಪಹರಣ ಭಾಮಿನಿ ಷಟ್ಪದಿ

ಸೀತಾಪಹರಣ
ಭಾಮಿನಿ ಷಟ್ಪದಿ

ಕಾಡಿನಲ್ಲಿಹ  ಜಿಂಕೆ ಮರಿಯನು
ನೋಡಿ ಸೀತೆಯು ಹಠವ ಮಾಡುತ
ಬೇಡಿಕೊಂಡಳು  ಪತಿಯ  ಕರವನು ಹಿಡಿದು ಕೊಳ್ಳುತಲಿ
ಓಡಿ ಹೋಗುವ ಮೃಗವ ಪಡೆಯಲು
ಕಾಡಿನೆಡೆಯಲಿ ನಡೆದು ಬರುತಲಿ
ಹೂಡಿ ಬಾಣವ  ಕೊಂದು ಬಿಟ್ಟನು  ರಾಮ  ಬೆನ್ನಟ್ಟಿ 

ತಕ್ಕ ಸಮಯವ ಕಾದು ರಾವಣ
ಪಕ್ಕ ಬಂದನು ವೇಷ ಬದಲಿಸಿ 
ರೊಕ್ಕಬೇಡವದೆಂದು ಹೇಳುತ. ಸೆಳೆದ ಸೀತೆಯನು
ಠಕ್ಕ ಸನ್ಯಾಸಿಯನು ಕಾಣುತ
ರೆಕ್ಕೆ ಮುರಿದಿಹ ಹಕ್ಕಿಯಂತೇ
ಬಿಕ್ಕಿ ಕೂಗುತ  ರಾಮ ಲಕ್ಷ್ಮಣರನ್ನು ಕರೆಯುವಳು

ಹರಿಯ ನೆನೆದು ಜಟಾಯು ಹೊರಟನು 
ಮರೆತು ತನ್ನಯ ಜೀವದಾಸೆಯ
ಭರದಿ ಕಾದಿದ ದುರುಳ ರಾವಣನನ್ನು ತಡೆಯುತಲಿ
ತರಿದು  ಬಿಟ್ಟನು ಬೀಸಿ ಕತ್ತಿಯ 
ಮುರಿದು ರೆಕ್ಕೆಯ ತೂರಿ ಭರದಲಿ
ಧರೆಗೆ ಬಿದ್ದಿತು ಹಕ್ಕಿಯಾಗಲೆ ಸೋತು ಸೊರಗುತಲಿ

ಮರಳಿ ಬಂದಿಹ ರಾಮ ಲಕ್ಷ್ಮಣ
ತೆರೆದ ಬಾಗಿಲಲಿಣುಕಿ ನೋಡಲು
ಬರಿಯ ಗುಡಿಸಲ ಕಂಡು  ಬೇಸರ ಪಟ್ಟು ನಿಂತಿಹರು 
ಮರೆಯಲಿರುತಿಹ  ಬಿಲ್ಲು ಬಾಣವ 
ಕರದಿ ಹಿಡಿಯುತ  ಕಾಡಿನೆಲ್ಲೆಡೆ 
ತಿರುಗಿ ರಾಮನು ಹುಡುಕಿ ಸೀತೆಯ ನಡೆದು ಬಳಲಿದನು

ಹರಿವ ನೀರನು  ಕರದಲೊರೆಸುತ
ಕರವ ಮುಗಿಯುತ ಗರುಡನಳಿಯನು  
ಕರೆದು ತಿಳಿಸಿದ  ದುರುಳ ಮಾಡಿದ ಮೋಸ ಬೇಗದಲಿ
ನೆರೆದ ವಾನರ ವೀರರೆಲ್ಲರ
ಕರೆಸಿ ಕೊಂಡನು ತನ್ನ ಕಾರ್ಯಕೆ 
ಸರಿಸಿ ಬರುತಿಹ ತಡೆಯನೆಲ್ಲವ ಗೆದ್ದು ವೇಗದಲಿ

ಭಾಮಿನಿಯು ತಾ ಕಷ್ಟ  ಪಡುತಲಿ
ರಾಮ ನಾಮವ  ಭಜಿಸುತಿರುತಲಿ
ಸಾಮಗಾನವ ಹಾಡಿ  ತನ್ನಯ ಬವಣೆ ಮರೆಯುವಳು
ಕಾಮಿತಾರ್ಥವ ಕೊಡುವ ದೇವನು
ಭಾಮೆಯನು ಕದ್ದೊಯ್ದ  ಕೇಡಿಯ
ಭೂಮಿ ಭಾರವನಿಳಿಸಿ ಕೊಳ್ಳಲು ಕೊಂದ ಕೋಪದಲಿ

ಶ್ರೀಮತಿ.ಪಂಕಜಾ.ಕೆ. ರಾಮಭಟ್.

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...