Skip to main content

ಸಾಧನೆಯ ತಪ

ಸಾಧನೆಯ ತಪ

ತನ್ನ ಹೊಸ  ಮನೆಯ ಬಾಲ್ಕನಿಯ ಉಯ್ಯಾಲೆಯಲ್ಲಿ ಕುಳಿತ ಶರಣ್ಯಳ ಮನದಲ್ಲಿ ಇಂದಿನ ಈ ಸುಖೀ ಜೀವನದಲ್ಲೂ ಹಳೆಯದನ್ನು ನೆನೆಸಿ ಅಳು ನಗು  ಎರಡೂ ಒಟ್ಟೊಟ್ಟಿಗೆ  ಬರುತಿತ್ತು
              ಕಡು ಕಷ್ಟದಿಂದ ಬೆಳೆದ ಶರಣ್ಯ  ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡಾಗ , ತನ್ನ 5 ವರ್ಷದ ಮಗನನ್ನು ಕಟ್ಟಿಕೊಂಡು ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡುತ್ತಾ ಮಗನನ್ನು  ಸಾಕುತ್ತಿದ್ದಳು.
      ಚಿಕ್ಕವನಾದರೂ ,ತಾಯಿಯ ಕಷ್ಟವನ್ನು ತಿಳಿದಿದ್ದ  ಮಗು  ಚೈತನ್ಯ ಅಮ್ಮನಿಗೆ ಯಾವುದೇ ತೊಂದರೆ ಕೊಡದೆ ಅಮ್ಮ ಕೆಲಸಮಾಡುವ ಸ್ಥಳದಲ್ಲಿ ಆಟವಾಡುತ್ತಾ ಅಮ್ಮ ಬರುವ ತನಕ ಕಾದು ಕುಳಿತು ಕೊಳ್ಳುತ್ತಿದ್ದ. 
        ಒಂದು ದಿನ ವಿಪರೀತ ಕೆಲಸ ಮಾಡಿದ್ದರಿಂದ  ದಣಿದು ಶರಣ್ಯ ಅಲ್ಲೇ ಗೋಡೆಗೆ ಒರಗಿ ಕುಳಿತುಕೊಂಡಳು ಅದನ್ನು ಕಂಡ   ಚೈತನ್ಯ ಓಡೋಡಿ ಬಂದು ಅಮ್ಮನ  ಧೋತರದಿಂದವೇ ಆಕೆಯ ಬೆವರಿದ  ಹಣೆಯನ್ನು ಒರೆಸಿ, ಅಮ್ಮ ಅಮ್ಮ ನಾನು ದೊಡ್ಡವನಾಗಿ ಚೆನ್ನಾಗಿ ಕಲಿತು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆ ಅಳಬೇಡಮ್ಮ .ಎಂದು  ಮುದ್ದು ಮುದ್ದಾಗಿ ಹೇಳಿದ್ದು ಕಂಡು ಆಯಾಸದಲ್ಲೂ ಶರಣ್ಯಳ ಮೊಗದಲ್ಲಿ ಮಂದಹಾಸ ಮಿನುಗಿತು 
          ಆಕೆ ಮಗನನ್ನು ತಬ್ಬಿ  ಕಣ್ಣೀರಿಟ್ಟಳು.  ತಾಯಿಯ ಕಣ್ಣೀರನ್ನು ತನ್ನ ಚಿಕ್ಕ ಕೈಗಳಿಂದ ಒರೆಸುತ್ತ ಅಳಬೇಡ ಅಮ್ಮ   ಎಂದು ಸಮಾಧಾನಿಸುತ್ತಿದ್ದ  ಅವನನ್ನು ಕಂಡು ಅಲ್ಲಿಯ ಕೆಲಸಗಾರರ ಕಣ್ಣುಗಳು ತುಂಬಿ ಬಂದಿತ್ತು. 
                   ಶರಣ್ಯ ಹೇಗಾದರೂ ಮಗನನ್ನು ಓದಿಸಬೇಕೆಂದು ಅಂದೆ ದೃಢ ಸಂಕಲ್ಪ ಮಾಡಿ ಅಲ್ಲೇ ಹತ್ತಿರದ ಸರ್ಕಾರಿ ಶಾಲೆಗೆ ಮಗನನ್ನು ಸೇರಿಸಿ ಚೆನ್ನಾಗಿ ಓದಿ ಶಾಲೆಗೆ ಕೀರ್ತಿ ತರಬೇಕು ಕಂದಾ ಎಂದು ಹಾರೈಸುತ್ತಾ, ಮಗನ ವಿದ್ಯಾಭ್ಯಾಸದ ಖರ್ಚಿಗೆಂದು ತನ್ನ ಸಂಬಳದಲ್ಲಿ ಅಷ್ಟೋ ಇಷ್ಟೋ ಉಳಿಸಿ ಕೊಳ್ಳುತ್ತಿದ್ದಳು.
            ಚೈತನ್ಯ ಬಾಲ್ಯದಲ್ಲಿ ಯೆ ತುಂಬಾ ಕುಶಾಗ್ರಮತಿಯಾಗಿದ್ದರಿಂದ  ಚೆನ್ನಾಗಿ ಕಲಿತು  ದೊಡ್ಡ ಹುದ್ದೆಯನ್ನು ಅಲಂಕರಿಸುವಂತಾಯಿತು .ತಾನು ಕೆಲಸಕ್ಕೆ ಸೇರಿದ ಕೂಡಲೇ ಒಂದು ಪುಟ್ಟ ಮನೆಮಾಡಿ   ತಾಯಿಯನ್ನು  ಕರೆಸಿಕೊಂಡು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. 
           ಯಾವುದೇ ದುಂದು ವೆಚ್ಚಮಾಡದೆ ಹಣವನ್ನು ಕೂಡಿಸಿಟ್ಟು   ಈಗ್ಗೆ  ವರ್ಷದ ಹಿಂದೆ ಈ ಭವ್ಯ ಬಂಗಲೆಯನ್ನು ಕೊಂಡು ಕೊಂಡಿದ್ದೂ  ಅಲ್ಲದೆ  ಕೆಲಸಕ್ಕೆ ಜನರನ್ನು ನೇಮಿಸಿ ತಾಯಿಗೆ ಕೆಲಸದಿಂದ ಮುಕ್ತಿ ಕೊಡಿಸಿದ್ದ  
           ಮಗನಿಗೆ ತನ್ನ ಮೇಲೆ ಇರುವ ಪ್ರೀತಿ ಕಂಡು ಶರಣ್ಯ ಭಾವುಕಳಾದಳು ಆದಷ್ಟು ಬೇಗ ಮಗನಿಗೆ ಮದುವೆ ಮಾಡಿ ಅವನ  ಸುಂದರ ಸಂಸಾರವನ್ನು ನೋಡಬೇಕೆನ್ನುವ ಆಸೆ ಮಾತ್ರ ಈಗ ಶರಣ್ಯಳದಾಗಿತ್ತು.
             ಹಳೆಯದನ್ನು ನೆನೆಸಿ ಎಷ್ಟು ಹೊತ್ತು ಕುಳಿತು ಕೊಂಡಳೋ ಸಮಯದ ಪರಿವೆ ಇರಲಿಲ್ಲ ಮಗ ಬಂದು ಬಾಲ್ಕನಿಯ ದೀಪ ಬೆಳಗಿದಾಗಲೇ ಅವಳಿಗೆ  ಎಚ್ಚರ .ಅಮ್ಮ ಒಬ್ಬಂಟಿಯಾಗಿ ಇಲ್ಲಿ  ಕೂತು ಏನು ಮಾಡುತ್ತಿದ್ದಿಯಾ ಕೆಳಗೆ ಟಿ. ವಿ. ಆದರೂ ನೋಡಬಾರದೆ ಎಂದು ಆಕೆಯ  ಕೊರಳು ತಬ್ಬಿ  ಹಣೆಗೆ  ಮುತ್ತಿಟ್ಟಾಗ , ಹೋಗೋ ಹೆಂಡತಿ ಬರುವ ಸಮಯವಾದರೂ ಹುಡುಗಾಟಿಕೆ ಬಿಟ್ಟಿಲ್ಲ ಎಂದು ನಗೆಯಾಡಿದರು.  
           ಮಾ ನಾನು ಎಷ್ಟೇ ದೊಡ್ಡವನಾದರೂ ನಿನಗೆ ಮಗುವೇ ತಾನೇ  ಬಾ ಊಟ ಮಾಡೋಣ ಎಂದು ಅಮ್ಮನ ಕೈ ಹಿಡಿದು ಕೆಳಗೆ ಕರೆತಂದ ಚೈತನ್ಯ ಡೈನಿಂಗ್  ಟೇಬಲ್   ಮೇಲೆ ಅಂದವಾಗಿ ಜೋಡಿಸಿದ ಪಾತ್ರೆಗಳ ಮುಚ್ಚಳ ಸರಿಸಿ ಒಂದೊಂದೇ ಪದಾರ್ಥಗಳನ್ನು ಇಬ್ಬರ ತಟ್ಟೆಗೂ ಬಡಿಸಿದಾಗಲೂ ಅಮ್ಮ ಏನೋ ಯೋಚಿಸುತ್ತಾ ಇರುವುದು ನೋಡಿ ಅಮ್ಮ ಈಗ ಊಟ ಮಾಡು ನಿನ್ನ ಮನಸ್ಸಿನಲ್ಲಿ ಏನಿದೆ ಎಂದು ನನಗೆ ಗೊತ್ತಿದೆ ನಾಳೆ ನಿನಗೊಂದು ಸರ್ಪ್ರೈಸ್  ಕೊಡುವೆ ಎಂದು ಹೇಳಿ ಬೇಗ ಬೇಗ ಊಟ ಮಾಡಲು ತೊಡಗುತ್ತಾ ಅಮ್ಮನಿಗೆ ತನ್ನ ಆಫೀಸ್ನಲ್ಲಿ ನಡೆದ  ಘಟನೆಗಳನ್ನು ಹೇಳುತ್ತಾ ಅಮ್ಮನನ್ನು ನಗಿಸುವುದರಲ್ಲಿ ಸಫಲನಾಗುತ್ತಾನೆ.
           ತನ್ನ ವಿಷಯದಲ್ಲಿ ದೇವರು ನಿಜಕ್ಕೂ ಕರುಣಾಮಯಿ ಎಷ್ಟು ಒಳ್ಳೆಯ ಮಗನನ್ನು ಕೊಟ್ಟಿದ್ದಾನೆ ಎಂದು ತೃಪ್ತಿಯಿಂದ ನಕ್ಕು ಊಟಮಾಡಿದ ಶರಣ್ಯ,  ಮಗ ನಾಳೆ ತೋರಿಸಬಹುದಾದ ಸರ್ಪ್ರೈಸ್ ಏನಿರಬಹುದು ಎಂದು ಯೋಚಿಸುತ್ತಾ ನಿದ್ದೆಗೆ ಜಾರಿಕೊಂಡಳು.

ಪಂಕಜಾ.ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...