ರಾಮ ಪ್ರತಿಷ್ಠಾಪನೆ
ಭೋಗ ಷಟ್ಪದಿ
ತಾಮವನ್ನು ಕಳೆಯಲಿಕ್ಕೆ
ರಾಮನಾಮ ಭಜಿಸುತಿದ್ದು
ನೇಮದಿಂದ ಪೂಜೆ ಮಾಡೆ ನಮ್ಮ ಹರಸುವ
ಕಾಮಿತಾರ್ಥವನ್ನುಕೊಡುವ
ಭಾಮೆಯರಸ ರಾಮಚಂದ್ರ
ನಾಮಜಪವ ಮಾಡುತಿರಲು ಮುಕುತಿ ಕೊಡುವನು
ಮಂದಿಯೆಲ್ಲ ಸೇರಿಕೊಂಡು
ಕುಂದುಬಾರದಂತೆ ಭಜಿಸಿ
ಕಂದ ಬಾಲರಾಮನನ್ನು ನುತಿಸಿ ಪಾಡುವ
ಮುಂದೆ ನಿಂತು ಕಾಯುತಿದ್ದು
ತಂದೆಯಂತೆ ಪಾಲಿಸುತ್ತ
ಚಂದದಿಂದ ಬಾಳಿಗೆಲ್ಲ ಬಣ್ಣ ಬಳಿವನು
ದಶಕದಿಂದ ಕಾಯುತಿದ್ದ
ಶಕುನವಿಂದು ಕೂಡಿ ಬರಲು
ಬಕುತಗೊಲಿದ ರಾಮಚಂದ್ರ ಮೊಗವ ತೋರಿದ
ಮುಕುಟ ಮಣಿಯ ತೊಡಿಸಲಿಕ್ಕೆ
ರಕುತ ಕೋಡಿ ಹರಿಯ ಬಿಟ್ಟು
ಶಕುತಿಯಿಂದ ಕಾದ ಪುಣ್ಯ ಫಲವ ಕೊಟ್ಟಿತು
ಐದು ದೀಪಗಳನು ಹಚ್ಚಿ
ಗೈದು ಪೂಜೆಯನ್ನು ನಾವು
ಮೇದಿನಿಯಲಿ ರಾಮ ನಾಮವನ್ನು ಹರಡುವ
ಮೋದಿಯೊಬ್ಬ ಮಾಡಿ ಜಾದು
ಕಾದಿ ವ್ಯಾಜ್ಯವನ್ನು ಬೇಗ
ಕಾದು ಕುಳಿತ ದಿನಕೆ ಕಣ್ಣು ಸಾಕ್ಷಿಯಾಗಿದೆ
ಪಂಕಜಾ..ಕೆ. ರಾಮಭಟ್
Comments
Post a Comment