Skip to main content

ಉಡುಗೊರೆ ಕಥೆ

ಉಡುಗೊರೆ 

       ಒಂದು ವಾರದಿಂದ ಸಾವಿತ್ರಮ್ಮ ಸಡಗರದಿಂದ ಓಡಿಯಾಡುತ್ತಿದ್ದರು.  ಶ್ರೀಪಾದ ರಾಯರನ್ನು ದಿನಕ್ಕೆರಡು ಬಾರಿ ಅಂಗಡಿಗೆ ಕಳಿಸಿ ಅದು ಇದು ಎಂದು ಸಾಮಾನು ತರಿಸಿ ಲಾಡು ಚಕ್ಕುಲಿ ಇತ್ಯಾದಿ ತಿಂಡಿಗಳನ್ನು ತಯಾರಿಸಿ ಡಬ್ಬಿಯಲ್ಲಿ ತುಂಬಿಸಿ ಇಟ್ಟಿದ್ದರು.ರಾಯರಿಗೆ ಅದನ್ನು  ರುಚಿ ನೋಡಲಿಕ್ಕೆ ಮಾತ್ರ ಕೊಟ್ಟಿದ್ದು,ಮಗ ಸೊಸೆ ಮೊಮ್ಮಕ್ಕಳು ಬರುವ ತನಕ ಅದನ್ನು ತಿನ್ನಬಾರದೆಂದು ತಾಕೀತು ಮಾಡಿದ್ದರು.ಮನೆಯ ಮೂಲೆ ಮೂಲೆಯಲ್ಲಿದ್ದ  ಜೇಡರ ಬಲೆಯನ್ನೆಲ್ಲಾ  ತೆಗೆದು ಗುಡಿಸಿ ಒರೆಸಿ  ಸಾರಿಸಿ ಶುಭ್ರವಾಗಿ   ಇಟ್ಟು ಕೊಂಡಿದ್ದರು.. ಇಷ್ಟೆಲ್ಲಾ ಸಂಭ್ರಮಕ್ಕೆ ಕಾರಣವೆಂದರೆ  ಮಗ ಸೊಸೆ ಮೊಮ್ಮಕ್ಕಳು ಈ ಸಲದ ಯುಗಾದಿ ಹಬ್ಬಕ್ಕೆ ಬರುತ್ತೇವೆ ಎಂದು ತಿಳಿಸಿದ್ದು.
             ಕೊರೊನಾದ ಕಾರಣದಿಂದ ಕಳೆದವರ್ಷ ಮಕ್ಕಳಾರೂ ಇಲ್ಲದೆ ಇದ್ದುದರಿಂದ  ನಿರುತ್ಸ್ಸಾಹದಿಂದಿದ್ದ ಅವರಿಗೆ ಈ ವರ್ಷ ಎಲ್ಲರೂ ಬರುವುದರಿಂದ ಹತ್ತು ವರ್ಷ ಚಿಕ್ಕವರಾದಂತೆ  ಸಂಭ್ರಮಿಸುತ್ತಿದ್ದರು.
             ತಿಳಿಸಿದಂತೆ ಯುಗಾದಿಯ ದಿನ ಬೆಳಿಗ್ಗೆಯೇ ಮಗ  ಸೊಸೆ  ಮೊಮ್ಮಕ್ಕಳು  ಬಂದು ಇಳಿದರು ಮನೆಯೆಲ್ಲಾ ಮೊಮ್ಮಕ್ಕಳ ಗಲಾಟೆಯಿಂದ ತುಂಬಿ ಮದುವೆ ಮನೆಯ ಕಳೆ ಬಂದಿತು.  ರಾಯರು  ಅದಾಗಲೇ  ಪೂಜೆ ಸುರುಮಾಡಿದ್ದರು . ಅಡಿಗೆಯವರು  ಹೋಳಿಗೆ ಮಾಡುವ ತಯಾರಿಯಲ್ಲಿದ್ದರು .ಮಕ್ಕಳು ಬಂದ ಸಂಭ್ರಮದಲ್ಲಿ ನಿಂತಲ್ಲಿ ನಿಲ್ಲಲಾರದೆ ಹರೆಯದ ತರುಣಿಯಂತೆ ಓಡಿಯಾಡುತ್ತಿದ್ದ  ಪತ್ನಿಯನ್ನು ರಾಯರು ಆಗಾಗ ಕೆಣಕುತ್ತಿದ್ದರು.ಹುಸಿಮುನಿಸಿನಿಂದ ರಾಯರನ್ನು ಗದರಿಸುತ್ತಾ ಸಂಭ್ರಮ ಪಡುತ್ತಿದ್ದ ಆಕೆಗೆ ಮಕ್ಕಳು ತಮಗೊಂದು ಸರ್ಪ್ರೈಸ್ ಮಾಡುವರೆನ್ನುವ ಅರಿವೇ ಇರಲಿಲ್ಲ 
              ಪೂಜೆ  ಊಟ ಎಲ್ಲಾ ಆಗಿ  ವಿಶ್ರಾಂತಿ  ತೆಗೆದುಕೊಳ್ಳುತ್ತಿದ್ದಾಗ ಮಗ  ಸೊಸೆ ಇಬ್ಬರೂ ಸಾವಿತ್ರಮ್ಮ ಮತ್ತು ಶ್ರೀಪಾದ ರಾಯರನ್ನು ಕುಳ್ಳಿರಿಸಿ ಅವರಿಗೆ ತಾವು ತಂದ ಹೊಸ ಬಟ್ಟೆಯ ಉಡುಗೊರೆ ಕೊಟ್ಟು ಒಂದು ಸುಂದರವಾಗಿ  ಕಟ್ಟಿದ ಪೊಟ್ಟಣವನ್ನು  ಅಮ್ಮನ ಕೈಗೆ ಕೊಟ್ಟುಬಿಡಿಸಲು ಹೇಳುತ್ತಾರೆ .ಕುತೂಹಲದಿಂದ ಬಿಡಿಸಲು ಪ್ರಾರಂಭಿಸಿದ ಸಾವಿತ್ರಮ್ನ ದೊಡ್ಡ ಪೊಟ್ಟಣ  ಚಿಕ್ಕದಾಗುತ್ತಾ ಬಂದರೂ ಒಳಗೆ ಏನಿದೆ ಎನ್ನುವುದು ತಿಳಿಯದೆ ಕುತೂಹಲದಿಂದ ಬಿಡಿಸುತ್ತಲೇ ಇದ್ದರು ಮಕ್ಕಳು  ಮೊಮ್ಮಕ್ಕಳು ಚಪ್ಪಾಳೆ ತಟ್ಟುತ್ತಾ ಅವರನ್ನು ಪ್ರೋತ್ಸಾಹಿಸುತ್ತಿದ್ದರು.ಕೊನೆಗೂ ಪೊಟ್ಟಣ ಬಿಚ್ಚಿದಾಗ ಕಂಡ ಡಬ್ಬಿಯನ್ನು ತೆರೆದಾಗ  ತಾವು ಬಹು ದಿನಗಳಿಂದ ಆಸೆ ಪಡುತ್ತಿದ್ದ  ಸುಂದರ ನೆಕ್ಲೆಸ್ ಕಣ್ಣು ಕೋರೈಸಿದಾಗ ಸಂತಸದಿಂದ ಅವರ ಕಣ್ಣಿನಲ್ಲಿ ನೀರು ಬಂತು ಮಕ್ಕಳು ಅಮ್ಮನ  ಕಣ್ಣೀರನ್ನು ಕಂಡು ಗಾಬರಿಯಾದಾಗ ಆಕೆ ನಗುಮುಖದಿಂದ ಇದೆಲ್ಲಾ ಯಾಕೆ ತರಲು  ಹೊದಿರಿ ಇನ್ನು ನಾನು ಇದನ್ನು ಹಾಕಿ ಎಲ್ಲಿಗೆ ಹೋಗಲಿಕ್ಕಿದೆ ಎಂದು ಬಾಯಿ  ಮಾತಿನಲ್ಲಿ ಹೇಳಿದರೂ.  ಕಣ್ಣು ಮಾತ್ರ  ನೆಕ್ಲೆಸ್ ನ ಸೌಂದರ್ಯವನ್ನು ಆಸ್ವಾದಿಸುತ್ತಿತ್ತು 
             ಮಗ ಡಬ್ಬಿಯನ್ನು  ತಂದೆಯ ಕೈಗೆ  ಕೊಟ್ಟು ಅಮ್ಮನ ಕುತ್ತಿಗೆಗೆ ಕಟ್ಟಲು ಹೇಳಿದಾಗ ಇನ್ನೊಮ್ಮೆ ಅವರಿಗೆ ಕಣ್ಣು ತುಂಬಿ ಬಂತು ಮಕ್ಕಳೆಲ್ಲಾ ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸಿದರು ಅಂತೂ ತಮ್ಮ ಬಹುದಿನಗಳ ಆಸೆ ಈ ಯುಗಾದಿಯಂದು ಪೂರ್ಣವಾದುದರಿಂದ ಸಾವಿತ್ರಮ್ಮ ತುಂಬಾ ಖುಷಿಯಲ್ಲಿ ಇದ್ದರು  ಮಕ್ಕಳು ಮೊಮ್ಮಕ್ಕಳೆಲ್ಲಾ  ಒಟ್ಟಾಗಿ ಬೇವು ಬೆಲ್ಲ ತಿಂದು  ಸಂಭ್ರಮದಿಂದ  ಯುಗಾದಿ ಹಬ್ಬವನ್ನು ಆಚರಿಸಿದರು ತಾನು ಇನ್ನು ಮುಂದೆ ನಿಮ್ಮ . ಜತೆಯೇ ಇದ್ದು ತೋಟದ ಕೆಲಸ  ಮಾಡುವೆ  ಪೇಟೆಗಿಂತ ಈ ಹಳ್ಳಿಯೇ ವಾಸಿ ಎಂದು ಮಗ  ಹೇಳಿದ್ದು ಕೇಳಿ ಸಾವಿತ್ರಮ್ಮ ಇನ್ನಷ್ಟು ಖುಷಿ.ಪಟ್ಟರು
 
ಶ್ರೀಮತಿ.ಪಂಕಜಾ.ಕೆ. ಮುಡಿಪು

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...