21 ಕೊನೆಯಿಲ್ಲದ ದಾರಿ
ರಾಕೇಶನ ಕಾಲುಗಳು ಕೊನೆಯಿಲ್ಲದ ಆ ದಾರಿಯಲ್ಲಿ ನಡೆಯುತ್ತಾ ಇದ್ದರೂ ಮನಸು ಮಾತ್ರ ಕಳೆದು ಹೋದ ದಿನಗಳನ್ನು ಮೆಲುಕು ಹಾಕುತ್ತಿತ್ತು
ಚಿಕ್ಕಂದಿನಿಂದಲೂ ಬಡತನದಲ್ಲಿ ಬೆಳೆದ ರಾಕೇಶ ನಿಗೆ ಹಣದ ಬೆಲೆ ತಿಳಿದಿತ್ತು .ಆದ್ದರಿಂದ ಶಾಲೆಗೆ ಹೋಗುತ್ತಿದ್ದಾಗಲೇ ಬೆಳಗ್ಗಿನ ಜಾವ ಬೇಗನೆ ಎದ್ದು ಮನೆ ಮನೆಗೆ ಪೇಪರ್ ಹಾಕಿ ಸಂಪಾದನೆ ಮಾಡಿ ತನ್ನ ಶಾಲಾ ಪುಸ್ತಕ ಇತ್ಯಾದಿ ಸಣ್ಣಪುಟ್ಟ ಖರ್ಚುಗಳನ್ನು ಭರಿಸುತ್ತಿದ್ದ..
ಓದಿನಲ್ಲಿ ಜಾಣನಾಗಿದ್ದ ರಾಕೇಶ್ ಪ್ರತಿ ತರಗತಿಯಲ್ಲು ಪ್ರಥಮ ಸ್ಥಾನ ಬಂದು ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದು ಆ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದ. ಆತನ ಮುಂದಿನ ಓದಿನ ಖರ್ಚನ್ನು ಸರಕಾರವೇ ಭರಿಸಿದ್ದರಿಂದ ರಾಕೇಶ್ ತನ್ನ ವಿದ್ಯಾಭ್ಯಾಸವನ್ನು ಪೂರೈಸಿ ಒಳ್ಳೆಯ ಕೆಲಸಕ್ಕೆ ಸೇರಿ ತನ್ನ ಹಾಗೂ ತನ್ನ. ಮನೆಯವರ ಬಡತನವನ್ನು ನೀಗಿಸಿದ್ದಲ್ಲದೆ ತನ್ನಂತೆ ಬಡ ಕುಟುಂಬದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮಾಡಲಾಗದ ಎಷ್ಟೋ ಜನರನ್ನು ತನ್ನ ಖರ್ಚಿನಲ್ಲಿ ಓದಿಸಿದ್ದು . ಅವರೆಲ್ಲಾ ಇಂದು ಉತ್ತಮ ಕೆಲಸದಲ್ಲಿದ್ದು .ರಾಕೇಶನ ಬಗ್ಗೆ ಅಭಿಮಾನವಿಟ್ಟು ಕೊಂಡಿದ್ದರು.
ಎಷ್ಟೊಂದು ಸುಂದರವಾಗಿತ್ತು ನನ್ನ ಸಂಸಾರ ಪತ್ನಿ ರಮಾ ನನ್ನ ಬೇಕು ಬೇಡಗಳನ್ನು ತಾನು ಹೇಳುವ ಮುಂಚೆಯೇ ತಿಳಿದುಕೊಂಡು ಮಾಡುತ್ತಿದುದರಿಂದ ತನಗೆ ಮನೆಯ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ ಮಕ್ಕಳಿಬ್ಬರೂ ತನ್ನಂತೆ ಪ್ರತಿಭಾವಂತರಾಗಿದ್ದರು .ತನ್ನಂತೆ ಅವರು ಕಷ್ಟಪಡಬಾರದೆಂದು ಅವರಿಗೆ ಎಲ್ಲಾ ಅನುಕೂಲತೆಗಳನ್ನು ಮಾಡಿ ಕೊಟ್ಟಿದ್ದ ತಾನು ಅವರನ್ನು ಪ್ರೀತಿಸುವುದರಲ್ಲಿಯೂ ಹಿಂದೆ ಬಿದ್ದಿರಲಿಲ್ಲ ಆದರೆ ಈಗ ತಾನು ಕೆಲಸದಿಂದ ನಿವೃತ್ತಿ ಗೊಂಡ ತಕ್ಷಣ ಮಕ್ಕಳಿಗೆ ತಾನು ಬೇಡವಾದೆನೇ ಪತ್ನಿ ರಮ ಈಗ ಇರುತ್ತಿದ್ದರೆ ತಾನು ಈ ರೀತಿ ಮಕ್ಕಳ ಹಂಗಣೆಯಲ್ಲಿ ಇರಬೇಕಾಗಿರಲಿಲ್ಲ . ಈಗ ಒಂಟಿ ಪಕ್ಷಿಯಾದ ತನಗೆ ಮಕ್ಕಳ ನಿರ್ಲಕ್ಷ್ಯ ಸಹಿಸಲಾಗುತ್ತಿಲ್ಲ . ವೃದ್ಧಾಶ್ರಮಕ್ಕೆ ತನ್ನನ್ನು ಸೇರಿಸುವ ಮಾತನಾಡುತ್ತಿರುವ ಮಕ್ಕಳ ಮಾತನ್ನು ಕೇಳಿ ತನಗಂತೂ ತುಂಬಾ ಬೇಸರವಾಗಿತ್ತು . ಇಷ್ಟಕ್ಕಾಗಿಯೇ ,ಇಂಥವರಿಗಾಗಿಯೇ ತಾನು ಕಷ್ಟಪಟ್ಟು ಹಗಲು ಇರುಳೂ ದುಡಿದು ಸಂಪಾದನೆ ಮಾಡಿದ್ದು ಎಂದು ಬೇಸರದಲ್ಲಿ ರಾತ್ರಿ ಚಳಿಗೆಂದು ಧರಿಸಿದ ಬೆಚ್ಚನೆಯ ಉಡುಪಿನಲ್ಲಿಯೇ ಮನೆ ಬಿಟ್ಟು ಬಂದುದಾಗಿತ್ತು .ಹೋಗುವುದು ಎಲ್ಲಿಗೆ ತಿಳಿಯದೆ ಮುಂದೆ ಉದ್ದಕ್ಕೆ ಚಾಚಿದ ರಸ್ತೆಯಲ್ಲಿ ನಡೆಯುತ್ತಾ ಬಳಲಿ ಒಂದು ಕಡೆ ಕುಳಿತು ಬಿಟ್ಟ ರಾಕೇಶನನ್ನು ಆ ದಾರಿಯಲ್ಲಿ ಬಂದ ಸುಮಂತ್ ನೋಡಿ ತನ್ನ ಕಾರಿನಲ್ಲಿ ಮನೆಗೆ ಕರೆದೊಯ್ದು ಅವರನ್ನು ಉಪಚರಿಸಿ, ಅವರ ಕಥೆಯನ್ನು ಕೇಳಿ ನೊಂದುಕೊಂಡು , ಅಪ್ಪಾಜಿ ನೀವು ಇಲ್ಲೇ ಇದ್ದು ಬಿಡಿ ನನಗೂ ಮನೆಯಲ್ಲಿ ಹಿರಿಯರು ಇದ್ದರೆ ಏನೋ ಒಂಥರ ಧೈರ್ಯ .ನಮ್ಮ ಮಗನಿಗೂ ಅಜ್ಜನ ಪ್ರೀತಿ ಸಿಗುತ್ತದೆ ಎಂದು ಹೇಳಿದ್ದು ಕೇಳಿ ರಾಕೇಶನ ಕಣ್ಣುಗಳು ತುಂಬಿ ಬಂತು.ಅದನ್ನು ಕಂಡ ಸುಮಂತ್ ಅಪ್ಪಾಜಿ ನೀವು ಅಳಬಾರದು ನನ್ನಂತ ಎಷ್ಟೋ ಅನಾಥರಿಗೆ ದಾರಿ ತೋರಿಸಿದ ನೀವು ಎಂದಿಗೂ ಅನಾಥರಲ್ಲ ಆಗಲು ನಾನು ಬಿಡುವುದೂ ಇಲ್ಲ ಎಂದು ಅವರನ್ನು ತಬ್ಬಿ ಅವರ ಮಡಿಲಲ್ಲಿ ಮಗುವಿನಂತೆ ಮಲಗಿ ಬಿಟ್ಟ ರಾಯರ ಕೈಗಳು ಸುಮಂತನ ಕೂದಲನ್ನು ಸವರುತ್ತಿದ್ದರೂ ಮನಸ್ಸು ಚಿಂತಿಸುತ್ತಿತ್ತು ಯಾರು ನಮ್ಮವರು ಎಂದು
ಪಂಕಜಾ. ಕೆ. ಮುಡಿಪು
Comments
Post a Comment