Skip to main content

ಹಣದ ಬೆಲೆ. ಕಥೆ

ಹಣದ ಬೆಲೆ
 
ಶರತನದು ದುಂದು  ವೆಚ್ಚದ ಸ್ವಭಾವ. ತನಗೆ ಬಂದ ಸಂಬಳವನ್ನೆಲ್ಲಾ  ಗೆಳೆಯರ ಜತೆ ಪಾರ್ಟಿ ಅದು ಇದು ಎಂದು ಖರ್ಚುಮಾಡುತ್ತಿದ್ದ .ತಂದೆ ತಾಯಿ ಎಷ್ಟೋ ಹೇಳಿ   ನೋಡಿದರು. ಸ್ವಲ್ಪವಾದರೂ ಉಳಿತಾಯ ಮಾಡಬೇಕು . ನಾಳೆ  ನಿನ್ನ ಮದುವೆ ಆದ ಮೇಲೆ ಸಂಸಾರದ ಖರ್ಚಿಗೆ ಬೇಡವೇನೋ  ಎಂದು,.ಆಗ ಆತ ಉಡಾಫೆಯಿಂದ ಆಗ ನೋಡೋಣಮ್ಮ ಅದಕ್ಕಾಗಿ ಈಗಲೇ ಯಾಕೆ ಉಳಿತಾಯ  ಮಾಡಬೇಕು ಎಂದು ಮಾತು ಹಾರಿಸಿ ಬಿಡುತಿದ್ದ.  ತಂದೆ ತಾಯಿಗೆ ಮಗನದೆ ಚಿಂತೆ .ಮದುವೆ ಆದರೆ ಸರಿಯಾದಾನೆಂದು ತಾವೇ ಹುಡುಕಿ ಒಳ್ಳೆ ಹೆಣ್ಣಿನ ಜತೆ ಮದುವೆ ಮಾಡಿಸುತ್ತಾರೆ.
           ಮದುವೆ ಆದಮೇಲೆಯೂ ತನ್ನ ಹಳೆ  ಚಾಳಿಯನ್ನು ಬಿಡದೆ ಇದ್ದ ಅವನನ್ನು ಕಂಡು  ಬೇಸರಿಸುವರು .ಮಗನಿಗೆ ಉಳಿತಾಯದ ಮಹತ್ವವನ್ನು ತಿಳಿಸಲೆಂದು ತಂದೆ ತಾಯಿ ಇಬ್ಬರೂ ತಾವು ಒಂದು ತಿಂಗಳ ಮಟ್ಟಿಗೆ ಪ್ರವಾಸ ಹೋಗಲು ನಿಶ್ಚಯಿಸುತ್ತಾರೆ. 
            ತಂದೆ ತಾಯಿ ಪ್ರವಾಸ ಹೋದ ಸಮಯದಲ್ಲಿ  ಮನೆ ಖರ್ಚುಗಳನ್ನು ನಿಭಾಯಿಸಲಾಗದೆ ಸೋತ ಆತನು ತನ್ನ ಸ್ನೇಹಿತರಲ್ಲಿ ಸಾಲ ಕೇಳಬೇಕಾಯಿತು .ಆಗ ಅವರಲ್ಲಿ ಒಬ್ಬ ಗೆಳೆಯ ಏನೋ ನೀನು ನಮಗಿಂತ ಹೆಚ್ಚು ಸಂಪಾದಿಸುತ್ತಿದ್ದಿಯಾ  ಉಳಿತಾಯ ಮಾಡಲಿಲ್ಲ ಎಂದರೆ ಹೇಗೋ ನಂಬುವುದು?.ನಮಗೆ ಬಂದ ಹಣದಲ್ಲಿ ಪ್ರತೀ ತಿಂಗಳು ನಿರ್ಧಿಷ್ಟ ಹಣವನ್ನು ನಾನು ಪೋಸ್ಟ್ ಆಫೀಸಿನ ಆರ್.ಡಿ ಖಾತೆಯಲ್ಲಿ  ಹಾಕುತ್ತಿರುವುದರಿಂದ   .ನಾಳೆ ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೆ  ಯಾರ ಕೈಯನ್ನು ಕಾಯಬೇಕಾಗಿಲ್ಲ  ಎಂದು ಸಂತೃಪ್ತಿಯಿಂದ ನುಡಿಯುವನು ಈಗಲೂ ಕಾಲ  ಮೀರಿಲ್ಲ ಬರುವ ತಿಂಗಳಿನಿಂದವೇ ಉಳಿತಾಯ ಮಾಡು ಎಂದು ಬುದ್ದಿ ಹೇಳುತ್ತಾನೆ .ಅಮ್ಮ ಅಪ್ಪ ಎಷ್ಟು ಹೇಳಿದರೂ  ಕೇಳದ ಶರತ್ .ಗೆಳೆಯನ ಒಂದೇ ಮಾತಿಗೆ ಕರಗಿದ 
            ಗೆಳೆಯನ ಸಂತೃಪ್ತಿ ನೋಡಿ  ಅವನಿಗೆ ಅಸೂಯೆಯಾಯಿತು ತಾನೂ ತನ್ನ ಗೆಳೆಯನಂತೆ ಉಳಿತಾಯ ಮಾಡಿ  ತನ್ನದೇ ಸ್ವಂತ ಮನೆ ಇತ್ಯಾದಿ ಐಷಾರಾಮ ವಸ್ತುಗಳನ್ನು ಕೊಳ್ಳಬೇಕು  ಎಂದು ಯೋಚಿಸಿ , ಬರುವ ತಿಂಗಳಿನಿಂದವೇ ತನ್ನ ಸಂಬಳದ ಅರ್ಧವನ್ನು  ವಿವಿಧ ಖಾತೆಗಳಲ್ಲಿ ತೊಡಗಿಸಿದ.ಇದರಿಂದಾಗಿ ಅವನು ಮುಂದೆ ತನ್ನದೇ ಆದ ಸ್ವಂತ ಮನೆ ಕಾರು ಇತ್ಯಾದಿ  ಸೌಲಭ್ಯಗಳ ಜತೆ ಮಕ್ಕಳ ವಿದ್ಯಾಭ್ಯಾಸ ಎಲ್ಲವನ್ನೂ ಸಾಲವಿಲ್ಲದೆ ನಿಭಾಯಿಸುವಂತಾಯಿತು .ಈಗ ಆತನದು ಕಂಡವರು ಕರುಬುವಂತ ಸುಖೀ ಜೀವನ. ತನ್ನ ಕಣ್ಣು ತೆರೆಸಿ  ತನಗೆ ಉಳಿತಾಯದ ಮಹತ್ವ ತಿಳಿಸಿದ ಗೆಳೆಯನನ್ನು ಆತ ಕೃತಜ್ಞತೆಯಿಂದ ನೆನೆಯುತ್ತಿದ್ದ
            
ಪಂಕಜಾ.ಕೆ. ರಾಮಭಟ್.ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...