Skip to main content

ರಾಮಾಯಣ ಭಾಗ1ಪ್ಪರಿವರ್ಧಿನಿ ಷಟ್ಪದಿ

ಸಂಕ್ಷಿಪ್ತ ರಾಮಾಯಣ ಭಾಗ  1 ಚಿಲಿಪಿಲಿ

ಮನೋಲ್ಲಾಸ


 4  ಮಂಥರೆಯ ಕುತಂತ್ರ 

 (ಪರಿವರ್ಧಿನಿ ಷಟ್ಪದಿ ಯಲ್ಲಿ)

ಪಂಕಜಾ.ಕೆ. ರಾಮಭಟ್


ಕೋಸಲ ದೇಶದ ರಾಜನು  ದಶರಥ

ಹಾಸವ ಬೀರುತ ಮಡದಿಯರೊಡನೆಯೆ

ತೋಷದಿ ರಾಜ್ಯವ ಪಾಲಿಸುತಿದ್ದನಯೋಧ್ಯಾ ನಗರದಲಿ

ಕೂಸೊಂದಿಲ್ಲದ ಚಿಂತೆಯು ಕಾಡಲು

ಬೇಸರ ಮೂಡಿತರಸನಾ ಮನದಲಿ

ಸಾಸಿರ ಮುನಿಗಳ ಕರೆಸುತಲವರಲಿ ಸಲಹೆಯ ಕೇಳಿದನು


ಮಾಡಿದ  ಯಾಗವ ಪುತ್ರನ ಪಡೆಯಲು

ಬೇಡಿದ  ದೇವನ ಚರಣಕೆ ನಮಿಸುತ

ಹಾಡುತ  ನಾಮವ ಬಕುತಿಯಲವನನು ಮನದಲಿ ಧೇನಿಸುತ

ಮಾಡಿದ ಯಜ್ಞದ ಪುಣ್ಯದ ಫಲದಲಿ

ಮೂಡಿತು  ಗರ್ಭದಿ  ಮಕ್ಕಳ ಕಲರವ

ದೂಡಿತು ರಾಜನ ಚಿಂತೆಯು ರಾಣಿಯರೆಲ್ಲರು ಹಡೆಯುತಲಿ


ಮುದ್ದಿನ ಮಕ್ಕಳು ಬೇಗನೆ ಬೆಳೆಯಲು

ಮುದ್ದಿಸಿ ಕಲಿಸಿದನವರಿಗೆ ವಿದ್ಯೆಯ

ಗದ್ದುಗೆಯೇರುವ ಸಮಯವು ಬರುತಿರೆ ತೋಷವು ಮನದಲ್ಲಿ

ಗದ್ದಲ ಮಾಡುತ  ಪುರಜನರೆಲ್ಲರು

ಸಿದ್ಧತೆ ಮಾಡಲು  ಸರಸರ ಸರಿಯುತ

ಸದ್ದಿಲ್ಲದೆಯೇ ನೆರೆದರು  ಹರುಷದಿ  ಹಾರಿಸಿ  ಭಾವುಟವ


ಮಂಥರೆ ಮಾತನು ಕೇಳಿದ ಕೈಕೆಯಿ

ಮಂಥನ ಮಾಡುತ ಮನದಲಿ ಯೋಚಿಸಿ

ಪಂಥದಿ ಪಡೆದಿಹ ವರಗಳ ಕೇಳಲು ನಡೆದಳು ರಾಜನೆಡೆ

ಅಂತಃಪುರದೆಡೆ ಬರುತಿಹ  ಸಖನೆಡೆ-

-ಯಂತರ ಕಾಯುತ  ಕೇಳಿದಲೊಲವಲಿ

ಚಿಂತೆಗೆ ಹಚ್ಚುವ ಮಾತೊಂದರುಹಲು ದಶರಥ  ನೊಂದಿಹನು


ಪಂಕಜಾ.ಕೆ. ರಾಮಭಟ್

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.